predictions for Aries Taurus Gemini Cancer ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಇಂದಿನ ಜಾತಕ, ದೈನಂದಿನ ಫಲ ಪಂಚಾಂಗ ವಿವರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ತದಿಗೆ, ಮೃಗಶಿರ ನಕ್ಷತ್ರ, ಸಂಕಷ್ಟಹರ ಚತುರ್ಥಿ, ರಾಹುಕಾಲ: ಬೆಳಿಗ್ಗೆ 9:00 ರಿಂದ 10:30, ಯಮಗಂಡ ಕಾಲ : ಮಧ್ಯಾಹ್ನ 1:30 ರಿಂದ 3:00.

ಇವತ್ತಿನ ರಾಶಿಫಲ
ಮೇಷ : ಅಡೆತಡೆಗಳು ಎದುರಾಗಬಹುದು. ಹಠಾತ್ ಪ್ರಯಾಣ. ವಿರೋಧವನ್ನು ಎದುರಿಸಬಹುದು. ಅನಗತ್ಯ ಹಣದ ಖರ್ಚು,ವ್ಯಾಪಾರವು ನಿಧಾನಗತಿಯಲ್ಲಿ ಸಾಗಬಹುದು, ಮತ್ತು ಉದ್ಯೋಗ ಕ್ಷೇತ್ರದಲ್ಲಿ ಗೊಂದಲ ಎದುರಾಗಬಹುದು.
ವೃಷಭ : ಶುಭ ಸುದ್ದಿ, ಆರ್ಥಿಕ ಸ್ಥಿತಿ ಸುಧಾರಣೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಸಾಧಿಸುತ್ತೀರಿ. ದಿನವಿಡಿ ಪ್ರೋತ್ಸಾಹದಾಯಕ ವಾತಾವರಣವಿರುತ್ತದೆ.
ಮಿಥುನ : ಸಂತೋಷದ ಸಮಯವನ್ನು ಕಳೆಯುವಿರಿ. ವಿವಾದಗಳು ಇತ್ಯರ್ಥವಾಗುವ ಸಾಧ್ಯತೆಯಿದೆ. ಕೈಗೊಂಡ ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹೊಸ ಉದ್ಯೋಗಾವಕಾಶ. ವ್ಯವಹಾರವು ಲಾಭದಾಯಕವಾಗಿರುತ್ತದೆ.
ಕರ್ಕಾಟಕ : ಶುಭ ಕಾರ್ಯ ,ಉತ್ತಮ ಪ್ರಗತಿ. ಹಳೆಯ ಸ್ನೇಹಿತರೊಂದಿಗೆ ಮತ್ತೆ ಸೇರುವ ಸನ್ನಿವೇಶ. ವ್ಯವಹಾರದಲ್ಲಿ ನಿರೀಕ್ಷೆಗಳು ಈಡೇರುತ್ತವೆ. ಉದ್ಯೋಗಗಳಲ್ಲಿ ಕೆಲಸಕ್ಕೆ ಉತ್ತಮ ಮನ್ನಣೆ
ಸಿಂಹ : ಭಿನ್ನಾಭಿಪ್ರಾಯ ಉಂಟಾಗಬಹುದು.ಚಿಂತೆ ಹೆಚ್ಚಾಗಬಹುದು. ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ. ಹಠಾತ್ ಪ್ರಯಾಣ, ಕೆಲಸದಲ್ಲಿ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕನ್ಯಾ : ಹೊಸ ಸಾಲ. ಸಂಬಂಧಿಕರೊಂದಿಗೆ ವಾದ-ವಿವಾದ. ದೂರ ಪ್ರಯಾಣ. ಆಧ್ಯಾತ್ಮಿಕ ಚಿಂತೆ. ವ್ಯಾಪಾರ ವ್ಯವಹಾರ ಹೆಚ್ಚು ಲಾಭದಾಯಕವಾಗಿರುವುದಿಲ್ಲ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ
ತುಲಾ : ಸಮಸ್ಯೆಗಳು ಕಾಡಬಹುದು. ಆರೋಗ್ಯದಲ್ಲಿ ಏರುಪೇರು. ಸ್ನೇಹಿತರೊಂದಿಗೆ ಸಣ್ಣ ಜಗಳ,ಅತಿಯಾದ ಕೆಲಸದ ಒತ್ತಡ.ವ್ಯಾಪಾರದಲ್ಲಿ ಹೊಸ ತೊಡಕು, ಉದ್ಯೋಗಗಳಲ್ಲಿ ಕೆಲಸದ ಹೊರೆ.

ವೃಶ್ಚಿಕ : ಅನಿರೀಕ್ಷಿತ ಆರ್ಥಿಕ ಲಾಭ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ವ್ಯವಹಾರ ಸರಾಗವಾಗಿ ನಡೆಯುತ್ತವೆ, ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ.
ಧನು : ಈ ದಿನ ಅನುಕೂಲಕರವಾಗಿರುತ್ತವೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ, ದೇವಾಲಯಗಳಿಗೆ ಭೇಟಿ ನೀಡುವಿರಿ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವ್ಯವಹಾರ ವಿಸ್ತರಣೆ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣವಿರುತ್ತದೆ.
ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ? ರಾಶಿ, ಬೆಟ್ಟೆ, ಸರಕು, ಚಾಲಿ ಅಡಕೆ ರೇಟು?
ಮಕರ : ವಾದ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ಸಾಲ ಕಟ್ಟಲು ಪರದಾಟ, ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಆಲೋಚನೆಗಳಲ್ಲಿ ಸ್ಥಿರತೆ ಕೊರ. ಅನಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ವ್ಯವಹಾರ ನಿರಾಶಾದಾಯಕವಾಗಿರಬಹುದು. ಕೆಲಸದಲ್ಲಿ ಹೆಚ್ಚಿನ ಒತ್ತಡ ಎದುರಿಸಬೇಕಾಗುತ್ತದೆ.
ಕುಂಭ : ಅಡೆತಡೆ ಎದುರಿಸುವ ಸಾಧ್ಯತೆ ಇದೆ.. ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿರ್ಧಾರಗಳಲ್ಲಿ ಬದಲಾವಣೆಗಳು ಬರಬಹುದು. ದೂರ ಪ್ರಯಾಣ. ವ್ಯವಹಾರದಲ್ಲಿ ಏರಿಳಿತ , ಕೆಲಸದಲ್ಲಿ ಹೊಸ ಜವಾಬ್ದಾರಿ

ಮೀನ : ಮನಸ್ತಾಪ ಬಗೆಹರಿಯುತ್ತವೆ. ಯಶಸ್ಸನ್ನು ಸಾಧಿಸುವಿರಿ. ಭೂಮಿ ಮತ್ತು ವಾಹನ ಖರೀದಿ.. ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಕೆಲವು ಬದಲಾವಣೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
