operation Sindoor – justice served ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದ ವಾಯುಸೇನೆ ಪಾಕಿಸ್ತಾನದ ಹಲವು ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರ ನೆಲೆಗಳು ಧ್ವಂಸಗೊಂಡಿವೆ. ಆಪರೇಷನ್ ಸಿಂಧೂರ್ ಹೆಸರಿನಡಿಯಲ್ಲಿ ಇಂಡಿಯನ್ ಆರ್ಮಿ ಈ ದಾಳಿ ನಡೆಸಿದೆ. ಪಾಕ್ ಮತ್ತು ಪಿಒಕೆ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುಸೇನೆ ನಡೆಸಿದ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಹವಾಲ್ಪುರ್ ಮತ್ತು ಮುರಿಡ್ಕೆಗಳಲ್ಲಿ ಸುಮಾರು 25 ರಿಂದ 30 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಮೂಲಗಳು ಹೇಳುತ್ತಿದ್ದು, ಈ ಸಂಬಂಧ ಇನ್ನಷ್ಟೆ ಭಾರತದ ರಕ್ಷಣಾ ಏಜೆನ್ಸಿಗಳು ಖಾತರಿ ಪಡಿಸಬೇಕಿದೆ. ಜೈಶ್, ಲಷ್ಕರ್, ಹಿಜ್ಬುಲ್ ಮುಜಾಹಿದ್ದೀನ್ ತಾಣಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿಯನ್ನ ನಡೆಸಲಾಗಿದ್ದು, ಉಗ್ರರ ಲಾಂಚ್ ಪ್ಯಾಡ್, , ತರಬೇತಿ ಕೇಂದ್ರ ಹಾಗೂ ಗೋಡೌನ್ಗಳ ಮೇಲೆ ದಾಳಿ ನಡೆಸಲಾಗಿದೆ.

अबकी बार…लाहौर पार। #OperationSindoor pic.twitter.com/8J1q5aZ0Fc
— Brajesh Misra (@brajeshlive) May 6, 2025

operation Sindoor – justice served
ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸಂಬಂಧಿಸಿದ ಒಂಬತ್ತು ಸ್ಪಾಟ್ಗಳನ್ನು ಟಾರ್ಗೆಟ್ ಮಾಡಿ ದಾಳಿ ಡನೆಸಲಾಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ಸರ್ಕಾರವೂ ಈ ದಾಳಿಯನ್ನು ದೃಢಿಕರಿಸಿದೆ. ಇನ್ನೂ ದಾಳಿಗೊಳಗಾದ ಪ್ರದೇಶಗಳ ಪೈಕಿ ಒಂಬತ್ತು ತಾಣಗಳಲ್ಲಿ ನಾಲ್ಕು ಪಾಕಿಸ್ತಾನದೊಳಗೆ ನೆಲೆಗೊಂಡಿದ್ದರೆ, ಉಳಿದ ಐದು ಪಿಒಕೆಯಲ್ಲಿವೆ . ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದೆ ದಾಳಿಯ ಪ್ರದೇಶಗಳ ಪಟ್ಟಿ ಹೀಗಿದೆ.
- ಮರ್ಕಝ್ ಸುಭಾನ್ ಅಲ್ಲಾ, ಬಹವಾಲ್ಪುರ್ – ಜೆಎಂ
- ಮರ್ಕಝ್ ತೈಬಾ, ಮುರಿಡ್ಕೆ – LeT
- ಸರ್ಜಾಲ್, ತೆಹ್ರಾ ಕಲಾನ್ – ಜೆಎಂ
- ಮೆಹಮೂನಾ ಜೋಯಾ, ಸಿಯಾಲ್ಕೋಟ್ – ಎಚ್ಎಂ
- ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ – LeT
- ಮರ್ಕಝ್ ಅಬ್ಬಾಸ್, ಕೋಟ್ಲಿ – ಜೆಎಂ
- ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ – ಎಚ್.ಎಂ
- ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ – LeT
- ಸೈಯದ್ನಾ ಬಿಲಾಲ್ ಕ್ಯಾಂಪ್, ಮುಜಫರಾಬಾದ್ – ಜೆಎಂ
ಜೆಇಎಂ ಭದ್ರಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿ ನಡೆಸಲಾಗಿದೆ. ಪ್ರತಿ ಸ್ಥಳದಲ್ಲಿ ಸರಿಸುಮಾರು 25–30 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನೂ ದಾಳಿಯ ನಂತರದ ಭಾರತೀಯ ಸೇನೆಯು ಜಸ್ಟೀಸ್ ಸರ್ವಡ್ ಎಂಬ ಘೋಷವ್ಯಾಕ್ಯವನ್ನು ನೀಡಿದೆ. ಇದರ ಅರ್ಥ “ನ್ಯಾಯ ಒದಗಿಸಲಾಗಿದೆ” ಈ ಸಂದೇಶದೊಂದಿಗೆ ಎಕ್ಸ್ ಅಕೌಂಟ್ನಲ್ಲಿ ವೀಡಿಯೊವನ್ನು ರಿಲೀಸ್ ಮಾಡಲಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ, ದಾಳಿಯ ನಂತರ ಗಡಿಯಲ್ಲಿ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ.

ಆಪರೇಷನ್ ಸಿಂದೂರ್ ಏಕೆ
ಏಪ್ರಿಲ್ 22 ರ ಪಹಲ್ಗಾಮ್ ದಾಳಿಯಲ್ಲಿ ಪುರಷರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿತ್ತು. ಆ ಮೂಲಕ ಮೃತರ ಪತ್ನಿಯರ ಸಿಂಧೂರವನ್ನು ಕಳೆಯಲಾಗಿತ್ತು. ಇದೇ ಕಾರಣಕ್ಕೆ ಮೃತರ ಕುಟುಂಬದ ಗೃಹಿಣಿಯರನ್ನು ಗೌರವಿಸುವ ಸಲುವಾಗಿ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರಿಡಲಾಗಿದೆ ಎನ್ನಲಾಗಿದೆ. ಭಾರತೀಯ ಭೂ ಸೇನೆ, ನೌಕಾಪಡೆ ಮತ್ತು ವಾಯುಸೇನೆಯು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಇದಾಗಿದೆ.