ಚಂದ್ರಗುತ್ತಿಯಲ್ಲಿ ಯುವತಿ..?, ಶ್ರೀಗಂಧದ ತುಂಡು…, ವಿದ್ಯುತ್ ಕಂಬಕ್ಕೆ ಲಾರಿ… ದಿನದ ಘಟನೆಗಳು

news from shivamogga, soraba, bhadravati Shivamogga, malenadutoday news August 12 2025 :  ಶ್ರೀಗಂಧದ ಮರಗಳನ್ನು ಕಡಿದು ಮಾರಾಟ (selling) ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹ 15,000 ಮೌಲ್ಯದ 3.520 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಚಂದ್ರಗುತ್ತಿ ದೇವಾಲಯದ ಬಳಿ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ 

ಸೊರಬ ತಾಲೂಕಿನ ಪ್ರಸಿದ್ಧ ಚಂದ್ರಗುತ್ತಿ ದೇವಾಲಯದ ಬಳಿ ನೂಲು ಹುಣ್ಣಿಮೆ ಆಚರಣೆ ಸಂಬಂಧ ಬಂದಿದ್ದ ಯುವತಿಯೊಬ್ಬುಳು ಮಗುವೊಂದಕ್ಕೆ ಜನ್ಮ ನೀಡಿದ ಅನಿರೀಕ್ಷಿತ ಘಟನೆ ನಡೆದಿದೆ. ಹೊರ ಜಿಲ್ಲೆಯೊಂದರ ಯುವತಿ, ತನ್ನ ಕುಟುಂಬದ ಸದಸ್ಯರೊಂದಿಗೆ ರೇಣುಕಾಂಬೆ ದೇವಿಯ ದರ್ಶನಕ್ಕಾಗಿ ಬಂದಿದ್ದರು. ಮೆಟ್ಟಿಲು ಹತ್ತಲಾಗದೆ, ಅಲ್ಲಿಯೇ ತೇರು ಮನೆಯ ಬಳಿ ವಿಶ್ರಾಂತಿ ಪಡೆದಿದ್ದರು, ಅಷ್ಟೊತ್ತಿಗೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಆಂಬುಲೆನ್ಸ್​ನ ಸಹಾಯ ಪಡೆದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಬಳಿಕ ವೈದ್ಯರ ವಿಚಾರಣೆಯಲ್ಲಿ ಯುವತಿ ಅವಿವಾಹಿತೆ ಎಂದು ಗೊತ್ತಾಗಿದ್ದು, ಪೊಲೀಸರನ್ನ ಸಂಪರ್ಕಿಸಿದ್ದಾರೆ. ಬಳಿಕ ಸಖಿ ತಂಡದವರು ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಿಸುತ್ತಿದ್ದಾರೆ.

car decor

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ

ಭದ್ರಾವತಿ ತಾಲ್ಲೂಕು  ಉಜ್ಜನೀಪುರ ಸರ್ಕಲ್‌ನಲ್ಲಿ ತರೀಕೆರೆ ಕಡೆಗೆ ಹೊರಟಿದ್ದ ಲಾರಿಯೊಂದು ಅಪ್​ಸೆಟ್​ ಆಗಿದೆ. ಚಾಲಕನ  ನಿಯಂತ್ರಣ ತಪ್ಪಿದ ಲಾರಿಯು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.  ತುಮಕೂರು – ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಕಾಮಗಾರಿ ಮಾಡಿಲ್ಲ.ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಏನೂ ಸಹ ಆಗಿಲ್ಲ ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news

news from shivamogga, soraba, bhadravati

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು