ಕಾರು-ಬಸ್ ಡಿಕ್ಕಿ/ ತುಂಗಾ ನದಿಗೆ ಹೊಸ ಬೋಟ್/ ಅಳಿಮಯ್ಯನ ಗಲಾಟೆಗೆ ಪೊಲೀಸರ ಪಾಠ/ ಜನರ ಕೈಗೆ ಸಿಕ್ಕಿಬಿದ್ದ ಅಡಿಕೆ ಕಳ್ಳ! ಶಿವಮೊಗ್ಗ ಜಿಲ್ಲೆಯ ಟಾಪ್ @5 ಸುದ್ದಿ
In today's top five, a brief summary of the events that took place in various taluks of Shivamogga district
![ಕಾರು-ಬಸ್ ಡಿಕ್ಕಿ/ ತುಂಗಾ ನದಿಗೆ ಹೊಸ ಬೋಟ್/ ಅಳಿಮಯ್ಯನ ಗಲಾಟೆಗೆ ಪೊಲೀಸರ ಪಾಠ/ ಜನರ ಕೈಗೆ ಸಿಕ್ಕಿಬಿದ್ದ ಅಡಿಕೆ ಕಳ್ಳ! ಶಿವಮೊಗ್ಗ ಜಿಲ್ಲೆಯ ಟಾಪ್ @5 ಸುದ್ದಿ](https://malenadutoday.com/uploads/images/202306/image_750x_64813df93343d.jpg)
KARNATAKA NEWS/ ONLINE / Malenadu today/ Jun 8, 2023 SHIVAMOGGA NEWS
ತೀರ್ಥಹಳ್ಳಿ/ ತಾಲ್ಲೂಕಿನ ಸುರಾನಿ ಬಳಿಯಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಅವರನ್ನ ಸ್ಥಳಕ್ಕೆ ಬಂದ ಪೊಲೀಸರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಸ್ಥಳದಲ್ಲಿದ್ದ ವಾಹನಗಳನ್ನ ತೆರವುಗೊಳಿಸಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.
ಮಡಿಕೆ ಚೀಲೂರಿನಲ್ಲಿ ಆಸ್ತಿ ವಿಚಾರಕ್ಕೆ ಜಗಳ
ಶಿವಮೊಗ್ಗ/ ತಾಲ್ಲೂಕಿನ ಮಡಿಕೆಚೀಲೂರಿನಲ್ಲಿ ಜಮೀನಿನ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನ ಸಿಬ್ಬಂದಿ , ಗಲಾಟೆ ನಿಯಂತ್ರಿಸಿದ್ದು, ಸಂಬಂಧಿಸಿದಂತೆ ವ್ಯಾಜ್ಯ ಬಗೆಹರಿಸುವ ಭರವಸೆ ನೀಡಿದ್ದಾರೆ.
ತುಂಗಾನದಿಗೆ ಹೊಸ ಬೋಟ್
ಸಕ್ರೆಬೈಲ್ ಆನೆ ಬಿಡಾರದಲ್ಲಿರುವ ತುಂಗಾ ಹಿನ್ನೀರಿನಲ್ಲಿ ಪ್ರವಾಸಿಗರ ಗಮನ ಸೆಳೆಯಲು ಹೊಸ ಬೋಟಿನ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಇಂಡಿಯಾ ಟೂರಿಸಂ ಬೆಂಗಳೂರು ಟ್ವಿಟ್ಟರ್ ಅಕೌಂಟ್ನಲ್ಲಿ ಮಾಹಿತಿ ನೀಡಲಾಗಿದ್ದು, @jungle_lodges ಗೆ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು //junglelodges.com ಗೆ ಲಾಗಿನ್ ಆಗಲು ಸೂಚಿಸಲಾಗಿದೆ.
Congratulations to @jungle_lodges
for introducing a new boat for boating in the Tunga River backwaters near the Sakrebyle Elephant Camp Shivamogga. This will boost #ecotourism in the area.
For more details visit : https://t.co/0gVFuu8SHk@KarnatakaWorld @incredibleindia pic.twitter.com/LRRm9dm8bG — India Tourism Bengaluru (@IndiaTourismBa2) June 7, 2023
ಆಗುಂಬೆಯಲ್ಲಿ ಅಡಿಕೆ ಕಳ್ಳನ ಬಂಧನ
ಆಗುಂಬೆ/ ಠಾಣಾ ವ್ಯಾಪ್ತಿಯ ಮುತ್ತುವಳ್ಳಿಯಲ್ಲಿ ಅಡಕೆ ಕಳ್ಳತನ ಮಾಡಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರೇ ಆತನನ್ನು ಹಿಡಿದಿದ್ದಾರೆ. ಇಲ್ಲಿನ ನಿವಾಸಿಯೊಬ್ಬರ ಮನೆಗೆ ಅಡಿಕೆ ಕಳ್ಳತನಕ್ಕೆ ಆರೋಪಿ ಸ್ಕೆಚ್ ಹಾಕಿದ್ದ. ಶಬ್ದ ಆಗುತ್ತಿರುವುದನ್ನ ಗಮನಿಸಿದ ಮನೆಯ ಮಾಲೀಕರು ಹಾಗೂ ಗ್ರಾಮಸ್ಥರು, ಉಪಾಯ ಮಾಡಿ ಆರೋಪಿಯನ್ನ ಹಿಡಿದು ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ಧಾರೆ
ಟೈಟಾಗಿ ಅಳಿಯನ ಗಲಾಟೆ
ಆನವಟ್ಟಿಯಲ್ಲಿ ಅಳಿಯನೊಬ್ಬ ಫುಲ್ ಟೈಟಾಗಿ ಬಂದು ಗಲಾಟೆ ಮಾಡಿದ್ ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಈ ಸಂಬಂಧ ಮನೆಯವರು ಅಳಿಯನ ಗಲಾಟೆ ತಡೆಯಲಾಗದೆ ಪೊಲೀಸರಿಗೆ ಫೋನಾಯಿಸಿದ್ದಾರೆ. ತಕ್ಷಣ ದೂರು ಬಂದ ಗ್ರಾಮಕ್ಕೆ ತೆರಳಿದ ಪೊಲೀಸರು ನಶೆಯಲ್ಲಿದ್ದ ಅಳಿಮಯ್ಯನಿಗೆ ಪೊಲೀಸ್ ಭಾಷೆಯಲ್ಲಿಯೇ ಬುದ್ದಿವಾದ ಹೇಳಿದ್ದಾರೆ.