ಕಾರು-ಬಸ್​ ಡಿಕ್ಕಿ/ ತುಂಗಾ ನದಿಗೆ ಹೊಸ ಬೋಟ್/ ಅಳಿಮಯ್ಯನ ಗಲಾಟೆಗೆ ಪೊಲೀಸರ ಪಾಠ/ ಜನರ ಕೈಗೆ ಸಿಕ್ಕಿಬಿದ್ದ ಅಡಿಕೆ ಕಳ್ಳ! ಶಿವಮೊಗ್ಗ ಜಿಲ್ಲೆಯ ಟಾಪ್​ @5 ಸುದ್ದಿ

In today's top five, a brief summary of the events that took place in various taluks of Shivamogga district

ಕಾರು-ಬಸ್​ ಡಿಕ್ಕಿ/ ತುಂಗಾ ನದಿಗೆ ಹೊಸ ಬೋಟ್/ ಅಳಿಮಯ್ಯನ ಗಲಾಟೆಗೆ ಪೊಲೀಸರ ಪಾಠ/ ಜನರ ಕೈಗೆ ಸಿಕ್ಕಿಬಿದ್ದ ಅಡಿಕೆ ಕಳ್ಳ!   ಶಿವಮೊಗ್ಗ ಜಿಲ್ಲೆಯ ಟಾಪ್​ @5 ಸುದ್ದಿ

 KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ತೀರ್ಥಹಳ್ಳಿ/ ತಾಲ್ಲೂಕಿನ ಸುರಾನಿ ಬಳಿಯಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಅವರನ್ನ ಸ್ಥಳಕ್ಕೆ ಬಂದ ಪೊಲೀಸರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಸ್ಥಳದಲ್ಲಿದ್ದ ವಾಹನಗಳನ್ನ ತೆರವುಗೊಳಿಸಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್ ದಾಖಲಾಗಿದೆ. 



 

ಮಡಿಕೆ ಚೀಲೂರಿನಲ್ಲಿ ಆಸ್ತಿ ವಿಚಾರಕ್ಕೆ ಜಗಳ

ಶಿವಮೊಗ್ಗ/ ತಾಲ್ಲೂಕಿನ ಮಡಿಕೆಚೀಲೂರಿನಲ್ಲಿ ಜಮೀನಿನ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನ ಸಿಬ್ಬಂದಿ , ಗಲಾಟೆ ನಿಯಂತ್ರಿಸಿದ್ದು, ಸಂಬಂಧಿಸಿದಂತೆ ವ್ಯಾಜ್ಯ ಬಗೆಹರಿಸುವ ಭರವಸೆ ನೀಡಿದ್ದಾರೆ. 



 

ತುಂಗಾನದಿಗೆ ಹೊಸ ಬೋಟ್​

 ಸಕ್ರೆಬೈಲ್​ ಆನೆ ಬಿಡಾರದಲ್ಲಿರುವ ತುಂಗಾ ಹಿನ್ನೀರಿನಲ್ಲಿ ಪ್ರವಾಸಿಗರ ಗಮನ ಸೆಳೆಯಲು ಹೊಸ ಬೋಟಿನ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಇಂಡಿಯಾ ಟೂರಿಸಂ ಬೆಂಗಳೂರು ಟ್ವಿಟ್ಟರ್ ಅಕೌಂಟ್​ನಲ್ಲಿ ಮಾಹಿತಿ ನೀಡಲಾಗಿದ್ದು,  @jungle_lodges ಗೆ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು //junglelodges.com ಗೆ ಲಾಗಿನ್ ಆಗಲು ಸೂಚಿಸಲಾಗಿದೆ. 



 

ಆಗುಂಬೆಯಲ್ಲಿ ಅಡಿಕೆ ಕಳ್ಳನ ಬಂಧನ

 

ಆಗುಂಬೆ/  ಠಾಣಾ ವ್ಯಾಪ್ತಿಯ ಮುತ್ತುವಳ್ಳಿಯಲ್ಲಿ ಅಡಕೆ ಕಳ್ಳತನ ಮಾಡಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರೇ ಆತನನ್ನು ಹಿಡಿದಿದ್ದಾರೆ. ಇಲ್ಲಿನ ನಿವಾಸಿಯೊಬ್ಬರ ಮನೆಗೆ ಅಡಿಕೆ ಕಳ್ಳತನಕ್ಕೆ ಆರೋಪಿ ಸ್ಕೆಚ್​ ಹಾಕಿದ್ದ. ಶಬ್ದ ಆಗುತ್ತಿರುವುದನ್ನ ಗಮನಿಸಿದ ಮನೆಯ ಮಾಲೀಕರು ಹಾಗೂ ಗ್ರಾಮಸ್ಥರು, ಉಪಾಯ ಮಾಡಿ ಆರೋಪಿಯನ್ನ ಹಿಡಿದು  ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ಧಾರೆ



 

ಟೈಟಾಗಿ ಅಳಿಯನ ಗಲಾಟೆ

 

ಆನವಟ್ಟಿಯಲ್ಲಿ ಅಳಿಯನೊಬ್ಬ ಫುಲ್​ ಟೈಟಾಗಿ ಬಂದು ಗಲಾಟೆ ಮಾಡಿದ್ ಪ್ರಕರಣ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಿದೆ. ಈ ಸಂಬಂಧ ಮನೆಯವರು ಅಳಿಯನ ಗಲಾಟೆ ತಡೆಯಲಾಗದೆ ಪೊಲೀಸರಿಗೆ ಫೋನಾಯಿಸಿದ್ದಾರೆ. ತಕ್ಷಣ ದೂರು ಬಂದ ಗ್ರಾಮಕ್ಕೆ ತೆರಳಿದ ಪೊಲೀಸರು ನಶೆಯಲ್ಲಿದ್ದ ಅಳಿಮಯ್ಯನಿಗೆ ಪೊಲೀಸ್ ಭಾಷೆಯಲ್ಲಿಯೇ ಬುದ್ದಿವಾದ ಹೇಳಿದ್ದಾರೆ.