ಹೊಸನಗರ : ಹರಿದ ಬೂಟು, ಕುಸಿದ ಮಣ್ಣು, ಸವಾರರನ್ನು ಪರ್ಯಾಯ ಮಾರ್ಗಕ್ಕೆ ಹೋಗಲು ಸೂಚಿಸುತ್ತಿರುವ ಸ್ಥಳೀಯರು, ಸ್ಥಳದಲ್ಲಿ ನೀರವ ಮೌನ ಇದಕ್ಕೆ ಸಾಕ್ಷಿಯಾಗಿದ್ದು ಹೊಸನಗರ ತಾಲೂಕಿನ ಹುಲಿಕಲ್ ಘಾಟಿ.
ನಿನ್ನೆ ಸಂಜೆ ಸುಮಾರು 6:30 ಕ್ಕೆ ಹುಲಿಕಲ್ ಘಾಟಿಯಲ್ಲಿ ಧರೆ ಕುಸಿದು ಸುಮಾರು 7 ಜನ ಕಾರ್ಮಿಕರು ಮಣ್ಣಿನೊಳಗೆ ಸಿಲುಕಿದ್ದರು, ಅದರಲ್ಲಿ ದುರಾದೃಷ್ಟವಶಾತ್ 3 ಕಾರ್ಮಿಕರು ಸಾವನ್ನಪ್ಪಿದ್ದರು, ನಂತರ ಉಳಿದವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು.
ಈ ಘಟನೆ ಸಂಭವಿಸಿದ್ದು, ಕೇವಲ 24 ಘಂಟೆಯಲ್ಲಿ, ನಿನ್ನೆ ಈ ಸಮಯದಲ್ಲಿ ಸದ್ದು ಮಾಡುತ್ತಾ ಹುಮ್ಮಸ್ಸಿಂದ ಕೆಲಸ ಮಾಡುತ್ತಿದ್ದ ಕೆಲ ಕಾರ್ಮಿಕರು ಇಂದಿಲ್ಲ. ಈಗ ಆ ಸ್ಥಳ ನೀರವ ಮೌನಕ್ಕೆ ಜಾರಿದ್ದು, ಅದರ ಕೆಲ ದೃಷ್ಯಾವಳಿಗಳು ಮಲೆನಾಡು ಟುಡೆಗೆ ಲಭ್ಯವಾಗಿದೆ ನೋಡಿ,
Hulikal Ghat Landslide Ground Report


