bhadravati crime news : ಕ್ರಿಕೆಟ್ ವಿಚಾರಕ್ಕೆ ಓರ್ವನ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದೆ. ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭದ್ರಾವತಿಯಲ್ಲಿ ನಡೆದ ಈ ಘಟನೆ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ನಿನ್ನೆ ಮದ್ಯಾಹ್ನ 1:30 ಸುಮಾರಿಗೆ ಕೆಲ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅವರ ನಡುವೆ ಪರಸ್ಪರ ಜಗಳ ಉಂಟಾಗಿದೆ. ಆಗ ಅರುಣ್ ಎಂಬುವವನು ಸಚಿನ್ ಎಂಬಾತನ ಕೆನ್ನಗೆ ಹೊಡೆದಿದ್ದಾನೆ. ಅದೇ ಸಿಟ್ಟಿಗೆ ಸಚಿನ್ ಸೇರಿದಂತೆ ಇನ್ನಿತರೇ ಹುಡುಗರು ಅರಣ್ನನ್ನು ರಾತ್ರಿ ಕರೆಸಿಕೊಂಡು ಚಾಕುವಿನಿಂದ ಎದೆಗೆ ಚುಚ್ಚಿದ್ದಾರೆ. ಇದರಿಂದಾಗಿ ಅರುಣ್ ಸಾವನ್ನಪ್ಪಿದ್ದಾನೆ ಎಂದು ಎಸ್ ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದರು.
