SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 24, 2025
ಶಿವಮೊಗ್ಗ | ಕರ್ನಾಟಕ ದಲಿತ ಸಂಘರ್ಷ ಸಮಿತಿ 50 ವರ್ಷ ಪೂರೈಸಿದ ಹಿನ್ನಲೆ ಸಂವಿಧಾನ ಜಾಗೃತಿ ಸಮಾವೇಶವನ್ನು ವೀರಶೈವ ಸಭಾಭವನ ತಾಲೂಕು ಆಫಿಸ್ ರಸ್ತೆ ಭದ್ರಾವತಿಯಲ್ಲಿ ಜನವರಿ 29 ರಂದು ನಡೆಸಲಾಗುತ್ತಿದೆ. ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಚಿನ್ನಯ್ಯ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರೊ.ಬಿ. ಕೃಷ್ಣಪ್ಪನವರು 1974-75ರಲ್ಲಿ ಜಾತಿ ರಹಿತ, ವರ್ಗರಹಿತ, ಲಿಂಗ ರಹಿತ ಸಮಾಜ ರಚನೆಯ ಉದ್ದೇಶವನ್ನು ಹೊಂದಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಸಾಮಾಜಿಕ, ಸಾಂಸ್ಕೃತಿಕ, ಸಂಘಟನೆಯನ್ನು ಸ್ಥಾಪಿಸಿದರು.ಹಾಗೆಯೇ ಪ್ರಥಮ ಭಾರಿಗೆ ಕರ್ನಾಟಕ ದಲಿತ ಲೇಖಕರ ಮತ್ತು ಕಲಾವಿದರ ಒಕ್ಕೂಟದ ರಾಜ್ಯ ಮಟ್ಟದ ಸಮಾವೇಶವನ್ನು ಸಂಘಟಿಸಿದರು.

ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿದ್ದ. ಕೊಲೆ, ಸುಲಿಗೆ, ಶೋಷಣೆ, ಅತ್ಯಾಚಾರ ಪ್ರಕರಣಗಳ ವಿರುದ್ಧ ಅಸಂಖ್ಯಾತ ಪ್ರತಿಭಟನೆ ಚಳುವಳಿಯನ್ನು ನಡೆಸಿದರು. ಹೀಗೆ ಈ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಿಂದಿನಿಂದ ಮಾಡುತ್ತಾ ಬರುತ್ತಿದೆ. ಈ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷ ತಂಬಿದ್ದು ಅದರ ಹಿನ್ನಲೆ ಈ ಸಂವಿಧಾನ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ಕಾರ್ಯಕ್ರಮವು ಜನವರಿ 29 ರ ಬೆಳಿಗ್ಗೆ 11:30ಕ್ಕೆ ಪ್ರಾರಂಭವಾಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಲೊಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಮಾಡಲಿದ್ದಾರೆ. ಹಾಗೆಯೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉರಿಲಿಂಗಿ ಪೆದ್ದಿ ಮಠ ಮೈಸೂರು ಶ್ರೀ ಶ್ರೀ ಶ್ರೀ ಜ್ಙಾನ ಪ್ರಕಾಶ ಸ್ವಾಮೀಜಿಗಳು ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕರ್ನಾಟಕ ಪ,ಜಾ ಮತ್ತು ಪ,ಪಂಗಡಗಳ ಅಲೆಮಾರಿ ಅಭಿವೃದ್ಧಿ ಅಧ್ಯಕ್ಷರಾದ ಪಲ್ಲವಿ, ಭದ್ರಾವತಿ ನಗರ ಸಭೆಯ ಅಧ್ಯಕ್ಷರಾದ ಮಣಿ, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟದ ಕುಲಪತಿಗಳಾದ ಶರತ್ ಅನಂತಮೂರ್ತಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
SUMMARY | To mark the completion of 50 years of Karnataka Dalit Sangharsha Samiti, a constitution awareness conference will be held on January 29 at Bhadravathi on Office Road in Veerashaiva Sabha Bhavan taluk.
KEYWORDS | Karnataka Dalit Sangharsha Samiti, constitution awareness, Bhadravathi,