ದರ್ಶನ್‌ ತೂಗುದೀಪರವರ ಗನ್‌ ಲೈಸನ್ಸ್‌ ಕಿತ್ತುಕೊಂಡ ಪೊಲೀಸ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 21, 2025

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಇದೀಗ ಜಾಮೀನಿನ ಮೇಲೆ ಆಚೆ ಬಂದಿರುವ ನಟ ದರ್ಶನ್‌ಗೆ  ಬೆಂಗಳೂರು ಪೊಲೀಸರು ಶಾಕ್‌ ನೀಡಿದ್ದಾರೆ. ಅದೇನೆಂದರೆ ದರ್ಶನ್‌ ಗನ್‌ ಲೈಸನ್ಸ್‌ನ್ನು ತಾತ್ಕಾಲಿಕವಾಗಿ ಪೊಲೀಸರು ರದ್ದುಗೊಳಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್‌ರವರ ಗನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹಾಗೆಯೇ ದರ್ಶನ್‌ ಸಾಕ್ಷಿ ನಾಶಪಡಿಸಬಹುದು ಎಂಬ ಅನುಮಾನದಿಂದ ಲೈಸನ್ಸ್‌ ರದ್ದು ಪಡಿಸುವುದಾಗಿಯೂ ತಿಳಿಸಿದರು. ನಂತರ ದರ್ಶನ್‌ ರವರು ಸಾರ್ವಜನಿಕ ಪ್ರದೇಶದಲ್ಲಿ ಒಡಾಡುವುದರಿಂದ ನಾನು ಹೋದ ಕಡೆ ಜನ ಸೇರುತ್ತಾರೆ ಆದ್ದರಿಂದ ಆತ್ಮರಕ್ಷಣೆಗೆ ಗನ್‌ಬೇಕು ಎಂದು ಪೊಲೀಸರಿಗೆ ಪತ್ರ ಬರೆದಿದ್ದರು. ಇದರ ಬಗ್ಗೆ ಪರಿಶೀಲಿಸಿದ ಪೊಲೀಸರು ಕೇಸ್‌ ಮುಗಿಯುವವರೆಗೂ ಗನ್‌ ಲೈಸನ್ಸ್‌ ಅನ್ನು ತಾತ್ಕಾಲಿಕವಾಗಿ ರದ್ದುಮಾಡುವುದಾಗಿ ತಿಳಿಸಿದ್ದಾರೆ.

SUMMARY | Darshan’s gun licence has been temporarily cancelled by the Bengaluru police.

KEYWORDS | Darshan, gun licence, Bengaluru police,

Leave a Comment