ತನಗೆ ತಾನೆ ಚಾಟಿಯಲ್ಲಿ ಹೊಡೆದುಕೊಂಡ ಅಣ್ಣಾಮಲೈ | ಚಪ್ಪಲಿ ಹಾಕಲ್ಲವೆಂದು ಶಪಥ ಮಾಡಿದ್ದೇಕೆ?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024 ‌‌ 

ಈ ಹಿಂದೆ ಮಲೆನಾಡಲ್ಲಿ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡಿದ್ದ ಹಾಗೂ ಪ್ರಸ್ತುತ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ನಿನ್ನೆದಿನ ಚಾಟಿಯಿಂದ ತಮ್ಮ ದೇಹಕ್ಕೆ ಹೊಡೆದುಕೊಂಡಿದ್ದಾರೆ. ತಮಿಳು ಶೈಲಿಯ ಹಸಿರು ಪಂಚೆ ಉಟ್ಟ ಅವರು ಚಾಟಿಯಿಂದ ತಮ್ಮ ನಿವಾಸದ ಎದುರು ತಮಗೆ ತಾವೆ ಹೊಡೆದುಕೊಂಡಿದ್ದಾರೆ. 

ಇತ್ತೀಚೆಗೆ ತಮಿಳುನಾಡಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದು ತೀವ್ರ ದೊಡ್ಡಮಟ್ಟಕ್ಕೆ ಸದ್ದು ಮಾಡಿತ್ತು. ಈ ವಿಚಾರದಲ್ಲಿ ಸುದೀರ್ಘ ಸುದ್ದಿಗೋಷ್ಟಿ ನಡೆಸಿದ್ದ ಅಣ್ಣಾಮಲೈ ಅತ್ಯಾಚಾರ ಸಂತ್ರಸ್ತೆಯ ವಿವರ ಬಹಿರಂಗ ಮಾಡಿದ್ದಕ್ಕೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಎಫ್‌ಐಆರ್‌ನ ಲೂಪೋಲ್ಸ್‌ಗಳನ್ನ ವಿವರಿಸಿ ಸರ್ಕಾರ ಬಡ ಸಂತ್ರಸ್ತೆಯ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಅದಕ್ಕಾಗಿ ಚಾಟಿಯಿಂದ ಹೊಡೆದುಕೊಳ್ಳುವುದಾಗಿ ಹೇಳಿದ್ದರು. ಅಲ್ಲದೆ ಡಿಎಂಕೆ ಸರ್ಕಾರವನ್ನು ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ತಿಳಿಸಿದ್ದರು. ಅದರಂತೆ ಇದೀಗ ನಡೆದುಕೊಂಡಿದ್ದಾರೆ.

SUMMARY | K. Annamalai, who previously worked as an IPS officer in Malenadu and is currently the president of the Tamil Nadu BJP unit, hit himself with a whip yesterday.

KEY WORDS |   K. Annamalai, IPS officer, Malenadu, president of the Tamil Nadu BJP unit, hit himself with a whip yesterday

Leave a Comment