SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 23, 2024
ಶಿವಮೊಗ್ಗ | 20 ನೇ ವರ್ಷದ ಮಾರ್ಗಶಿರ ರಾಷ್ಟ್ರೀಯ ವೀಣಾ ಮಹೋತ್ಸವ ಸಪ್ತಾಹದ ಅಂಗವಾಗಿ ಡಿ. 25 ರಿಂದ 31 ರ ವರೆಗೆ ವೀಣಾನಾದ ಯಜ್ಞ ಎಂಬ ಕಾರ್ಯಕ್ರಮವು ಗುರುಗುಹ ಸಂಸ್ಥೆ ವತಿಯಿಂದ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಗುರುಗಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ ಹೆಚ್ಎಸ್ ನಾಗರಾಜ್ ಹೇಳಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಸಂಗೀತದ ವೇದಿಕೆಗಳಲ್ಲಿ ಬಹಳಷ್ಟು ಶಾಸ್ತ್ರೀಯ ಸಂಗೀತಗಳು, ಅಬ್ಬರ, ಚಮತ್ಕಾರ, ಓಟ, ಗಲಾಟೆಗಳಿಂದ ಕೇಳುಗನ ಚಪ್ಪಾಳೆ ಗಳಿಸುತ್ತಿದೆ. ಆದರೆ ಭಾರತೀಯ ಸಂಗೀತದ ಗುರಿ, ಅಬ್ಬರ ರಹಿತವಾದ ರಂಜನೆ ಹಾಗೂ ಆನಂದದ ಅನುಭವವನ್ನು ನೀಡುವುದಾಗಿದೆ. ಇವತ್ತಿನ ಜೀವನ ಶೈಲಿಯಲ್ಲಿ ಪುನ: ಶೋತೃಗಳನ್ನು ಸರಿ ದಾರಿಗೆ ತರಬೇಕಾದರೆ ಅಥವಾ ಈ ಸತ್ಯದ ಅರಿವನ್ನು ಉಂಟುಮಾಡಬೇಕಾದರೆ, ವೀಣಾ ವಾದನದ ನಿರಂತರ ಕೇಳ್ಮೆಯಿಂದ ಮಾತ್ರ ಸಾಧ್ಯ.

ಕರ್ನಾಟಕ ಶಾಸ್ತ್ರೀಯ ಸಂಗೀತದ ವೇದಿಕೆಯಲ್ಲಿ ವೀಣಾವಾದನಕ್ಕೆ ಅವಕಾಶಗಳು ಕಳೆದ 20 ವರ್ಷಗಳಿಂದ ಕಡಿಮೆಯಾಗುತ್ತಿರುವುದು ಗಮನಿಸಬೇಕಾದ ವಿಚಾರ. ಕರ್ನಾಟಕ ಸಂಗೀತದ ಶುದ್ಧತೆ ಹಾಗೂ ಸಂಗೀತಕ್ಕೆ ತನ್ಮಯಗೊಳಿಸುವ ಕ್ರಿಯೆ ಇರಬೇಕಾದರೆ, ಅವಕಾಶವಿರಬೇಕು. ವೀಣಾವಾದನವನ್ನು ನಿರಂತರವಾಗಿ ಕೇಳುವ ಅವಾಕಾಶವಿರಬೇಕು. ಆ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು
ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಹಾಗೂ ಶ್ರೀ ಗುರುಗುಹ ಗಾನಸಭಾವು ನಿರಂತರವಾಗಿ ಕಳೆದ 19 ವರ್ಷಗಳಿಂದ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ, ಹೊರ ದೇಶಗಳ ಹಾಗೂ ಕರ್ನಾಟಕದ ಮತ್ತು ಸ್ಥಳೀಯ ಪ್ರಸಿದ್ಧ ಹಾಗೂ ನುರಿತ ಸಂಗೀತ ವಿದ್ವಾಂಸರುಗಳನ್ನು ಕರೆತಂದು, ಅವರ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ಒಂದು ಉತ್ತಮ ಪರಂಪರೆಯನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದೆ. ಈ ವೀಣಾ ಉತ್ಸವವನ್ನು, ಸಂಗೀತಕ್ಕೆ ಸೇವೆಗೈದ ಶಿವಮೊಗ್ಗೆಯ ಹಿರಿಯ ಸಂಗೀತ ವಿದ್ವಾಂಸರಾದ, ಕೀರ್ತಿಶೇಷ ವಿದ್ವಾನ್ ಗುರು ಶ್ರೀ * ಹೆಚ್.ಆರ್.ಪ್ರಸನ್ನ ವೆಂಕಟೇಶ್ ರವರಿಗೆ ಸಮರ್ಪಿಸಲಿದ್ದೇವೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳು ಒಟ್ಟಿನಲ್ಲಿ ಒಂದು ವಾರದ ವೀಣಾ ನಾದೋಪಾಸನೆಯ ಯಜ್ಞವೇ ಆಗಿರುತ್ತದೆ. ಶಿವಮೊಗ್ಗೆಯ ಖ್ಯಾತ ವೈದ್ಯರು ಹಾಗೂ ಅಭಿರುಚಿ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಯುತ ಡಾ|ಎ.ಶಿವರಾಮಕೃಷ್ಣ ರವರ ಅಧ್ಯಕ್ಷತೆಯಲ್ಲಿ, ಶ್ರೀಯುತ ಬಿ.ಎಂ.ಕುಮಾರಸ್ವಾಮಿ, ಖ್ಯಾತ ಆರ್ಥಿಕ ಹಾಗೂ ಪರಿಸರ ತಜ್ಞರು, ಅಧ್ಯಕ್ಷರು, ಪರಿಯಾವರ್ಣ ಟ್ರಸ್ಟ್, ಶಿವಮೊಗ್ಗ. ಇವರಿಂದ ಈ ಉತ್ಸವದ ಉದ್ಘಾಟನೆಯು ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ ವೀಣಾ ವಿದುಷಿ ರೇವತಿ ಕಾಮತ್.ಅಧ್ಯಕ್ಷರು,ರೇವತಿ ರಘುರಾಮ್ ಕಾಮತ್ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು, ಶಿವಮೊಗ್ಗೆಯ ಕರ್ನಾಟಕ ಸಂಗೀತ ವಿದುಷಿ, ರಂಗಕರ್ಮಿ, ವಿಜಯಾ ಕಾಂತೇಶ್, ಶಿವಮೊಗ್ಗೆಯ ಕೆನರಾ ಬ್ಯಾಂಕ್ ಉದ್ಯೋಗಿ, ಕಲಾಪೋಷಕರು,ಶ್ಗೀತಾಂಜಲಿ ಪ್ರಸನ್ನಕುಮಾರ್ ವೇದಿಕೆಯನ್ನು ಅಲಂಕರಿಸಲಿದ್ದಾರೆ.
ಅಂತೆಯೇ ಡಿ, 31 ರಂದು ರಂದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗೆಯ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಡಾ|ಹೆಚ್.ಆರ್.ಶಂಕರನಾರಾಯಣ ಶಾಸ್ತ್ರಿಗಳು ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗೆಯ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿರುವ ಡಾ॥ ಶ್ರೀಧರ್ ಎಸ್., ಶಿವಮೊಗ್ಗೆಯ ಎಸ್.ಎನ್.ಕೆ.ಟ್ರಸ್ಟ್ನ ಅಧ್ಯಕ್ಷರಾಗಿರುವ ನಿರ್ಮಲ ಕಾಶಿ, ಶಿವಮೊಗ್ಗೆಯ ನಿವೃತ್ತ ಪ್ರಾಂಶುಪಾಲರಾಗಿರುವ ಡಾ|ನಾಗಮಣಿ ಎಸ್. ವೇದಿಕೆಯನ್ನು ಅಲಂಕರಿಸಲಿದ್ದಾರೆ ಎಂದರು.
SUMMARY | As part of the 20th year of Margashirsha National Veena Mahotsav Week, D. A programme titled ‘Veenanada Yajna’ will be held at Sri Prasanna Ganapathi Temple auditorium in Ravindranagar from 25th to 31st
KEYWORDS | Veena Mahotsav, Veenanada Yajna, Gurugaha Vaggeya Pratishthana Trust,