Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶೆಟ್ಟಿ ಕೊಲೆ ಕೇಸ್‌ | ಸಿಕ್ಕವರು ಪ್ರಮುಖರಲ್ಲ | ಮೇನ್ ಆರೋಪಿಗಳು ಯಾರು |‌ FIR ನಲ್ಲಿ ಏನಿದೆ? | ಮಾಸ್ಟರ್‌ ಮೈಂಡ್?

13
Last updated: December 1, 2024 11:58 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ನಡೆದ ರಾಜೇಶ್‌ ಶೆಟ್ಟಿ ಕೊಲೆ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸುತ್ತಿದೆ. ಇವತ್ತು ಪ್ರಕರಣದಲ್ಲಿ ಅರೆಸ್ಟ್‌ ಆದವರು ಹೆಚ್ಚುವರಿ ಆರೋಪಿಗಳು ಎನ್ನಲಾಗುತ್ತಿದೆ. ಏಕೆಂದರೆ ಪ್ರಕರಣದ ಎಫ್‌ಐಆರ್‌ ಪ್ರಕಾರ, ಪ್ರಮುಖ ಆರೋಪಿಗಳು ಐವರು. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ  BHARATIYA NYAYA SANHITA (BNS), 2023 (U/s-189(2),189(4),191(2),191(3),103,190) ದಾಖಲಾದ  FIR ಪ್ರಕಾರ ಕರಿಯಾ ವಿನಯ್‌,  ಹೇಮಂತ , ಸಂದೀಪ , ಸಂದೇಶ , ರಮೇಶ್‌ ರೆಡ್ಡಿ ಪ್ರಮುಖ ಆರೋಪಿಗಳು ಉಳಿದವರು ಏ5 ಆಂಡ್‌ ಇತರರು ಎಂದು ತೋರಿಸಲಾಗಿದೆ. ಇವತ್ತು ಸೆರೆ ಸಿಕ್ಕವರು ಚಿಟ್ಟೆ ನಾಗ, ಗಣೇಶ, ಕಿರಣ್‌ ಗೌಡ, ವೆಂಕಟೇಶ್‌ ಎನ್ನಲಾಗುತ್ತಿದೆ. ಹಾಗಾದ ಪಕ್ಷದಲ್ಲಿ ಪ್ರಕರಣದ ಪ್ರಮುಖ ಆರೋಪಿಗಳು ಇನ್ನಷ್ಟೆ ಸಿಗಬೇಕಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

30/11/2024 ರಂದು ಮದ್ಯಾಹ್ನ  ನಡೆದ ಘಟನೆ ಸಂಬಂಧ ಮಂಜುನಾಥ ಅಲಿಯಾಸ್‌ ಚಳಿ ದೂರು ಕೊಟ್ಟಿದ್ದಾನೆ. ತನ್ನ 20 ವರ್ಷದ ಸ್ನೇಹಿತ ರಾಜೇಶ್‌ ಶೆಟ್ಟಿ ಕೊಲೆಗೆ ಕಾರಣ ಏನು ಎನ್ನುವುದನ್ನ ದೂರಿನಲ್ಲಿ ತಿಳಿಸಿರುವ ಆತ ಬಿಜೆಪಿ ಮುಖಂಡನ ಸಾವಿನ ಸಂದರ್ಭದಲ್ಲಿ ನಡೆದ ಗಲಾಟೆಯ ಕೃತ್ಯವನ್ನು ಸಹ ತಿಳಿಸಿದ್ದಾನೆ. 

 

car decor

ನಾನು ಮತ್ತು ರಾಜೇಶ್ ಶೆಟ್ಟಿರವರು 20 ವರ್ಷಗಳಿಂದ ಸ್ನೇಹಿತರಾಗಿದ್ದೆವು. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಳ್ಳುತ್ತಿದ್ದೆವು.. ರಾಜೇಶ್ ಶೆಟ್ಟಿ ತಂದೆ ತಾಯಿ ನಮ್ಮ ಮನೆಯ ಎದುರುಗಡೆ ವಾಸವಿದ್ದ. ಅವರ ಜೊತೆಯಲಿಯೇ ರಾಜೇಶ ಶೆಟ್ಟಿಯು ವಾಸವಿದ್ದ. ರಾಜೇಶ್ ಶೆಟ್ಟಿ ಮದುವೆಯಾಗಿ 20 ವರ್ಷಗಳಾಗಿದೆ. ಒಂದು ವರ್ಷದ ಹಿಂದೆ ಆತನ ಹೆಂಡತಿ ಮತ್ತು ಮಗ ರಾಜೇಶ್‌ನಿಂದ ದೂರವಾಗಿದ್ದರು. ಮೂರುವರೆ ತಿಂಗಳ ಹಿಂದೆ ಬೊಮ್ಮನಕಟ್ಟೆಯ ಪುರುಷೋತ್ತಮ ಎಂಬುವವರು ಮೃತ ಪಟ್ಟಿದ್ದರು. ಅವರ ಶವ ಸಂಸ್ಕಾರಕ್ಕೆ ರಾಜೇಶ್ ಶೆಟ್ಟಿ, ಕರಿಯ @ ವಿನಯ, ಕಿರಣ, ಸಂದೀಪ, ಸಂದೇಶ, ಹೇಮಂತ ರಮೇಶ್ ರೆಡ್ಡಿ ರವರುಗಳು ಹೋಗಿದ್ದರು. ಅಲ್ಲಿ ಮದ್ಯಪಾನ ಮಾಡಿದ ಬಳಿಕ ಮಾತು ಮಾತಲಿ. ಕರಿಯ ವಿನಯ್ ಮತ್ತು ರಾಜೇಶ್ ಶೆಟ್ಟಿ ಜಗಳ ಮಾಡಿಕೊಂಡಿದ್ರು. ನಂತರ ರಾಜೇಶ್ ಶೆಟ್ಟಿಯು ನನ್ನ ಮನೆಯ ಹತ್ತಿರ ಬಂದು ಕರಿಯ ವಿನಯ್ ಹಾಗು ಆತನ ಸ್ನೇಹಿತರು ನನಗೆ ಹೊಡೆದಿದ್ದಾರೆ. ನೀನು ಬಾ ಹೋಗೋಣ ಮಾತಾಡೋಣ ಅಂತಾ ಕರೆದಿದ್ದ. ಬಳಿಕ ನಾನು ಮತ್ತು ರಾಜೇಶ್ ಶೆಟ್ಟಿ ಬೈಕಿನಲಿ, ಮಚ್ಚು ಹಿಡಿದುಕೊಂಡು ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಹತ್ತಿರ ತೆರಳಿದ್ದೆವು. ಅಲ್ಲಿ ನಮಗೂ ಹಾಗು ಅವರಿಗೂ ಜಗಳವಾಗಿ ನಾನು ವಿನಯನ ಎಡಗೈ ಗೆ ಹೊಡೆದು ರಕ್ತಗಾಯ ಪಡಿಸಿದೆ ಅನಂತರ ನಾವು ತೀರ್ಥಹಳ್ಳಿ ಕಡೆಗೆ ಹೊರಟು ಹೋದೆವು ಈ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

30/11/2024 ರಂದು ಬೆಳಗ್ಗೆ ತನ್ನ ಮನೆಯಲಿಯೇ ಇದ್ದ ರಾಜೇಶ್ ಶೆಟ್ಟಿ ನನ್ನ ಮನೆಯ ಹತ್ತಿರ ಬಂದು ನನ್ನನ್ನು ಮಾತನಾಡಿಸಿ ತಿಂಡಿ ತಿಂದು ತೆರಳಿದ್ದ.  ಗ್ಯಾರೇಜಿನಲಿ ಬೈಕ್‌ ರಿಪೇರಿಗೆ ಬಿಟ್ಟಿದ್ದೇನೆ, ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋಗಿದ್ದ.  ಆ ಬಳಿಕ ವ್ಯಕ್ತಿಯೊಬ್ಬರು ಪೋನ್ ಮಾಡಿ ರಾಜೇಶನಿಗೆ ಯಾರೋ ಹೊಡೆದಿದ್ದಾರೆ ಎಂದು ಮಾಹಿತಿ ನೀಡಿದರು ಎಂದು ಮಂಜ ನೀಡಿದ ದೂರಿನನ್ವಯ ಎಫ್‌ಐಆರ್‌ ನಲ್ಲಿ ಹೇಳಲಾಗಿದೆ. 

ಇನ್ನೂ ಘಟನೆ ಸಂಬಂಧ ಇವತ್ತು ವಿನೋಬನಗರ ಪೊಲೀಸ್‌ ಠಾಣೆ ಪೊಲೀಸರು ನಾಲ್ವರನ್ನ ಅರೆಸ್ಟ್‌ ಮಾಡಿದ್ದಾರೆ. ಅವರನ್ನ ಮಾರಕಾಸ್ತ್ರಗಳನ್ನ ಜಪ್ತಿ ಮಾಡಲು ಕರೆದೊಯ್ದಿದ್ದ ಪೊಲೀಸರು ಬೊಮ್ಮನಕಟ್ಟೆ ಚಾನಲ್‌ ಬಳಿಯಲ್ಲಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನ ಸೀಜ್‌ ಮಾಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದಷ್ಟೆ ಅಲ್ಲದೆ ಪ್ರಕರಣದ ಮಾಸ್ಟರ್‌ ಮೈಂಡ್‌ ಬೇರೆಯವನಿದ್ದು, ಆತನ ಬಗ್ಗೆಯು ಪೊಲೀಸರು ತಲಾಶ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

SUMMARY |    Rajesh Shetty murder case at Bommanakatte, FIR registered at Vinobaganagar police station 

KEY WORDS  | Rajesh Shetty murder case at Bommanakatte, FIR registered at Vinobaganagar police station 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ಬಸ್‌ ಸ್ಟಾಪ್‌ನಲ್ಲಿ ಹರಿಹರ ಬಸ್‌ ಹತ್ತಿದ ಮಹಿಳೆಗೆ ಶಾಕ್‌ | ನಡೆದಿತ್ತು ಈ ಘಟನೆ
Next Article ಪೇಂಟ್‌ ಬಕೆಟ್‌ನಲ್ಲಿ ಮಾರುವ ಜೇನುತುಪ್ಪ ಖರೀಸುವಾಗ ಹುಷಾರ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

today gold rate
SHIVAMOGGA NEWS TODAY

today gold rate : ಏರತ್ತಲೇ ಇದೆ ಚಿನ್ನದ ಬೆಲೆ | ಎಷ್ಟಿದೆ ಇವತ್ತು 10 ಗ್ರಾಂ ಚಿನ್ನದ ರೇಟ್​

By Prathapa thirthahalli
shivamogga mescom power cut
SHIVAMOGGA NEWS TODAY

shivamogga mescom power cut ಜೂನ್​ 29 ರಂದು ಈ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ

By Prathapa thirthahalli
SHIVAMOGGA NEWS TODAY

ಮಂಡಿ ನೋವಿನ ಹೆಸರಲ್ಲಿ ಲಕ್ಷ ವಂಚನೆ/ ಬ್ರಾಸ್‌ಲೈಟ್‌, ತಾಳಿ ಸರ ಕದ್ದ ಕೇಸ್‌/ ಮಾವನ ಕೊಂದ ಅಳಿಯ ಅರೆಸ್ಟ್‌ / TODAY ಚಟ್‌ಪಟ್‌ ವಿಶೇಷ

By 13

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ಅಪರಿಚಿತನ ಶವಪತ್ತೆ | ಗೋದಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು ಗುರುತು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up