ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಚಂದ್ರಗುತ್ತಿ ಶೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದೆ. ರೇಣುಕಾಂಬ ದೇವಿಯ ಜಾತ್ರೆ ಇದೇ ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ನಡೆಯಲಿದೆ.

*ಸೊರಬದಲ್ಲಿ ಭೀಕರ ಅಪಘಾತ! ಇಬ್ಬರು ಬೈಕ್ ಸವಾರರ ಸಾವು!*
ಜಾತ್ರೆಯಲ್ಲಿ ಏನೇನು ಇರಲಿದೆ!?
- ಫೆಬ್ರವರಿ 25 ರಂದು ಕಂಕಣ ಬಂಧನ, ಧ್ವಜಾರೋಹಣ ಭೇರಿತಾಡನೆ,
- ಫೆಬ್ರವರಿ 26 ರಂದು ಕಳಶ ಸ್ಥಾಪನೆ, ಯಾಗಶಾಲೆ ಪ್ರವೇಶ, ವೃಷಭ ಯಂತ್ಯೋತ್ಸವ,
- ಫೆಬ್ರವರಿ 27ಕ್ಕೆ “ಪುಷ್ಪ ಮಂಜರಿ ಯಂತ್ರೋತ್ಸವ” ಸಣ್ಣತೇರು,
- ಫೆಬ್ರವರಿ 28ಕ್ಕೆ ಮಹಾರಥೋತ್ಸವ ದೊಡ್ಡತೇರು,
- ಮಾರ್ಚ್ 1 ರಂದು ಅವಭ್ರಥೋತ್ಸವ ಓಕಳಿ,
- ಮಾರ್ಚ್ 2 ಕ್ಕೆ ತುಲಾಭಾರ ವಗೈರ ಹರಕೆ ಸೇವೆಗಳು ಜರುಗಲಿವೆ.
ಇನ್ನೂ ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಸ್ವಚ್ಚತೆ ಕಾರ್ಯಕ್ರಮ ಆರಂಭಗೊಂಡಿದೆ. ಬಣ್ಣ ಬಳಿಯುವ ಕೆಲಸದ ಜೊತೆಗೆ ಆವರಣ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಲೀನ್ ಮಾಡಲಾಗುತ್ತಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದು, ಈ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆಯನ್ನು ಸಹ ನಡೆಸಲಾಗಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com