Veg Biryani ಮಲೆನಾಡು ಟುಡೆ ಸುದ್ದಿ / ಉತ್ತರಾಖಂಡ ರಾಜ್ಯದ ಪ್ರಸಿದ್ಧ ಪವಿತ್ರ ಪುಣ್ಯಕ್ಷೇತ್ರವಾಗಿರುವ ಹರಿದ್ವಾರದಲ್ಲಿ ವೆಜ್ ಬಿರಿಯಾನಿ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ವಿಶಿಷ್ಟವಾದ ಅಭಿಯಾನವೊಂದು ಆರಂಭಗೊಂಡಿದೆ. ಅಖಂಡ ಪರಶುರಾಮ ಅಖಾಡದ ನೇತೃತ್ವದಲ್ಲಿ ಒಗ್ಗೂಡಿರುವ ಸ್ವಾಮೀಜಿಗಳ ಗುಂಪೊಂದು ಈ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದು, ಹೋಟೆಲ್ ಹಾಗೂ ಉಪಹಾರ ದರ್ಶಿನಿಗಳಲ್ಲಿ ಸಸ್ಯಾಹಾರಿ ಆಹಾರಕ್ಕೆ ಬಿರಿಯಾನಿ ಎಂಬ ಪದವನ್ನು ಬಳಸದಂತೆ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬದಲಾಗಿ ವೆಜ್ ಪಲಾವ್ ಎಂದು ಕರೆಯುವಂತೆ ಅಗ್ರಹಿಸ್ತಿದ್ದಾರೆ. ಸದ್ಯ ಈ ಅಭಿಯಾನ ಸದ್ದು ಮಾಡುತ್ತಿದೆ.
ಬಿರಿಯಾನಿ ಎಂಬ ಪದ ಮೂಲತಃ ಮಾಂಸಾಹಾರಿ ಖಾದ್ಯವನ್ನು ಪ್ರತಿನಿಧಿಸುತ್ತದೆ . ಇದನ್ನ ತಯಾರಿಸುವಾಗ ಯಾವುದೇ ರೀತಿಯ ಮಾಂಸ ಬಳಸದೇ ಇದ್ದರೂ ಸಹ, ಕೇವಲ ‘ಬಿರಿಯಾನಿ’ ಎಂಬ ಪದದ ಬಳಕೆಯು ಶುದ್ಧ ಸಸ್ಯಾಹಾರಿಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ ಎಂಬುದು ಸ್ವಾಮೀಜಿಗಳ ವಾದ. ಅಲ್ಲದೆ ಈ ಕಾರಣಕ್ಕಾಗಿ ಬಿರಿಯಾನಿ ಎನ್ನುವ ಬದಲಾಗಿ ವೆಜ್ ಪಲಾವ್ ಎಂದೇ ಹೆಸರಿಸಬೇಕು ಎಂದು ಸ್ವಾಮೀಜಿಗಳು ಆಗ್ರಹಿಸ್ತಿದ್ದಾರೆ.. ಈ ಅಭಿಯಾನದ ಭಾಗವಾಗಿ ಅಖಂಡ ಪರಶುರಾಮ ಅಖಾಡದ ಸ್ವಯಂಸೇವಕರು ಹರಿದ್ವಾರ ನಗರದಾದ್ಯಂತ ಕಾರ್ಯಾಚರಣೆಗಿಳಿದಿದ್ದಾರೆ.
