ಶಿವಮೊಗ್ಗ ನಗರ ಉಪವಿಭಾಗ ಘಟಕ-1ರ ವ್ಯಾಪ್ತಿಯ ವಿದ್ಯಾನಗರ ಮಾರ್ಗದಲ್ಲಿ ನಾಳೆ ಅಂದರೆ ಏ. 19 ರಂದು 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಶಿವಮೊಗ್ಗ ತಿಳಿಸಿದೆ. ಅಲ್ಲದೆ ಈ ಕಾರಣಕ್ಕೇನೆ ನಾಳೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪವರ್ ಕಟ್ : ಸ್ಥಳಗಳು
ವಿದ್ಯಾನಗರ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಇಂದಿರಾ ಬಡಾವಣೆ, ಗುರುಪುರ, ಮಂಜುನಾಥ ಬಡಾವಣೆ, ವೆಂಕಟೇಶ ನಗರ, ಪುರಲೆ, ಅಪೂರ್ವ ಲೇಔಟ್, ಕಂಟ್ರಿ ಕ್ಲಬ್ ರಸ್ತೆ, ಗೋಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ, ಬಿ.ಎಚ್. ರಸ್ತೆ, ಮೀನಾಕ್ಷಿ ಭವನ, ಬಾಪೂಜಿ ನಗರ, ಟಿಜಿಎನ್ ಲೇಔಟ್, ಜೋಸೆಫ್ ನಗರ, ಚರ್ಚ್ ಕಾಂಪೌಂಡ್, ಕಾನ್ವೆಂಟ್ ರಸ್ತೆ, ಲೂರ್ದ್ ನಗರ, ಸರ್ ಎಂ.ವಿ. ರಸ್ತೆ, ಕುವೆಂಪು ರಂಗಮಂದಿರ, ಗಾಂಧಿ ಪಾರ್ಕ್, ಮಹಾನಗರ ಪಾಲಿಕೆ, ಪಾರ್ಕ್ ಬಡಾವಣೆ, ದುರ್ಗಿಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕರೆಂಟ್ ಇರಲ್ಲ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw