todays Panchanga details / ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ತ್ರಯೋದಶಿ ತಿಥಿಯು ಬೆಳಿಗ್ಗೆ 8.08ರ ವರೆಗೆ ಇರಲಿದ್ದು, ತದನಂತರ ಚತುರ್ದಶಿ ಆರಂಭವಾಗಲಿದೆ. ಶತಭಿಷ ನಕ್ಷತ್ರ ಬೆಳಗಿನ ಜಾವ 5.50ರ ತನಕ (ಬುಧವಾರ ಮುಂಜಾನೆ) ಇರಲಿದ್ದು, ಬಳಿಕ ಪೂರ್ವಾಭಾದ್ರ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ರಾತ್ರಿ 10.20ರಿಂದ 11.57ರ ವರೆಗೆ ಒದಗಿಬರಲಿದೆ. ಮಧ್ಯಾಹ್ನ 3.00ರಿಂದ 4.30ರ ವರೆಗೆ ರಾಹುಕಾಲವಿದ್ದು, ಬೆಳಿಗ್ಗೆ 9.00ರಿಂದ 10.30ರ ವರೆಗೆ ಯಮಗಂಡ ಕಾಲವಿರಲಿದೆ.

ಇವತ್ತಿನ ರಾಶಿಭವಿಷ್ಯ
ಮೇಷ / ದೂರದ ಊರುಗಳಿಂದ ಸಂದೇಶ. ಪ್ರಮುಖ ತೀರ್ಮಾನ. ದೈನಂದಿನ ಕೆಲಸಕಾರ್ಯಗಳು ಅಡೆತಡೆಯಿಲ್ಲದೆ ಸಾಗಲಿವೆ. ವಾಹನ ಹಾಗೂ ಮನೆ ಖರೀದಿ ಯೋಗ. ವ್ಯಾಪಾರ ವಹಿವಾಟಿನಲ್ಲಿ ಆರ್ಥಿಕ ಲಾಭ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.
ಶಿವಮೊಗ್ಗ: ಒತ್ತುವರಿ ತೆರವು ನೆಪದಲ್ಲಿ ಫಸಲು ನೀಡುತ್ತಿದ್ದ 300 ಅಡಿಕೆ ಮರಗಳ ನಾಶ; ಮಾಲೀಕನ ಆಕ್ರೋಶ
ವೃಷಭ / ಬರಬೇಕಾಗಿದ್ದ ಹಣ ಕೈಸೇರಲಿದೆ. ಕೆಲಸದಲ್ಲಿ ಮುನ್ನಡೆ. ದೂರದ ಸಂಬಂಧಿ ಭೇಟಿ. ಮನರಂಜನೆಯಲ್ಲಿ ದಿನ ಕಳೆಯುವಿರಿ. ವ್ಯಾಪಾರ ವಿಸ್ತರಣೆಗೆ ಪ್ರಯತ್ನ, ಉದ್ಯೋಗಿಗಳಲ್ಲಿ ಹೊಸ ಉತ್ಸಾಹ.

ಮಿಥುನ / ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಆಲೋಚನೆಗಳಲ್ಲಿ ಅಸ್ಥಿರತೆ. ಕೆಲವು ಕೆಲಸ ಮುಂದಕ್ಕೆ ಹೋಗುವುದು, ದಿನ ನಿಧಾನಗತಿಯಲ್ಲಿ ಸಾಗಲಿದೆ. ದೈಹಿಕ ಶ್ರಮ ಹೆಚ್ಚಾಗಲಿದ್ದು, ವ್ಯಾಪಾರದಲ್ಲಿ ಅಡಚಣೆ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ.
ಕರ್ಕಾಟಕ / ಆಪ್ತರೊಂದಿಗೆ ವಾಗ್ವಾದ. ಕೈಗೊಳ್ಳಬೇಕಾಗಿದ್ದ ಪ್ರಯಾಣ ಮುಂದೂಡುವಿರಿ. ಮನಸ್ಸಿನಲ್ಲಿ ಗೊಂದಲ. ನಿಗದಿತ ಕೆಲಸ ತಡವಾಗುವುದು. ಆರೋಗ್ಯ ಸಮಸ್ಯೆ. ವ್ಯಾಪಾರದಲ್ಲಿ ಸಾಮಾನ್ಯ ದಿನ, ಉದ್ಯೋಗದಲ್ಲಿ ಹೆಚ್ಚಿನ ಒತ್ತಡ.
ಸಿಂಹ / ಅಂದುಕೊಂಡಂತೆ ಎಲ್ಲ ಕೆಲಸ ಪೂರ್ಣಗೊಳ್ಳಲಿವೆ. ಆಸ್ತಿಗೆ ಸಂಬಂಧಿಸಿದಂತೆ ಇದ್ದ ತೊಡಕು ನಿವಾರಣೆ. ಅನಿರೀಕ್ಷಿತ ಧನಾಗಮ. ಅಚ್ಚರಿಯ ಘಟನೆ ನಡೆಯಲಿವೆ. ವ್ಯಾಪಾರದಲ್ಲಿ ಲಾಭ ,ಉದ್ಯೋಗಿಗಳಲ್ಲಿ ಹೆಚ್ಚಿನ ಹುಮ್ಮಸ್ಸು ಕಂಡುಬರಲಿದೆ.
ಕನ್ಯಾ / ಯಶಸ್ವಿಯಾಗಿ ಕೆಲಸ ನೆರವೇರಲಿವೆ. ಆಸ್ತಿ ವಿಚಾರದಲ್ಲಿ ಹೊಸ ಒಪ್ಪಂದ. ಆರ್ಥಿಕ ಸ್ಥಿತಿಗತಿಸುಧಾರಿಸಲಿವೆ. ಶುಭ ಕಾರ್ಯಗಳಿಗೆ ಆಮಂತ್ರಣ ಬರಲಿವೆ. ವ್ಯಾಪಾರ ವಹಿವಾಟುಗಳು ಚೇತರಿಕೆ ಕಾಣಲಿದ್ದು, ಉದ್ಯೋಗದಲ್ಲಿ ಉನ್ನತಿ ಕಾಣಲಿದೆ.
ತುಲಾ / ವಾಗ್ವಾದ ಆಗಬಹುದು. ಆಧ್ಯಾತ್ಮಿಕ ವಿಚಾರಗಳತ್ತ ಒಲವು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಪರಿಶ್ರಮದ ದಿನ, ಕೆಲಸಗಳಲ್ಲಿ ವಿಳಂಬವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ದಿನ, ಉದ್ಯೋಗಿಗಳಿಗೆ ಜವಾಬ್ದಾರಿ ಹೆಚ್ಚಾಗಲಿವೆ.
14 ವರ್ಷದವಳ ಮೇಲೆ ಲೈಂಗಿಕ ದೌರ್ಜನ್ಯ! ಶಿವಮೊಗ್ಗದ FTSC-1 ನ್ಯಾಯಾಲಯದ ಪ್ರಕರಣದಲ್ಲಿ ಏನಾಯ್ತು ಓದಿ!
ವೃಶ್ಚಿಕ / ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ದೈವಿಕ ಚಿಂತನೆ. ದೈನಂದಿನ ಆಗುಹೋಗುಗಳಲ್ಲಿ ಸಣ್ಣಪುಟ್ಟ ಅಡೆತಡೆ. ದೂರ ಪ್ರಯಾಣ. ಅನಾರೋಗ್ಯದ ಸಮಸ್ಯೆ. ವ್ಯಾಪಾರದಲ್ಲಿ ಸಾಮಾನ್ಯ ದಿನ, ಉದ್ಯೋಗಿಗಳಿಗೆ ಒತ್ತಡದ ದಿನ
ಧನುಸ್ಸು/ ಶುಭ ಸುದ್ದಿ. ವಾಹನ ಖರೀದಿ ಯೋಗ. ಕೆಲಸ ಚುರುಕಾಗಿ ಸಾಗಲಿವೆ. ಆಸ್ತಿ ವಿವಾದಗಳಿಗೆ ಪರಿಹಾರ. ಸಭೆ ಹಳೆಯ ಬಾಕಿ ವಸೂಲಾಗಲಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮ ಪ್ರೋತ್ಸಾಹ ಸಿಗಲಿದೆ.
ಮಕರ / ಖರ್ಚು ಮತ್ತು ಪರಿಶ್ರಮ ಹೆಚ್ಚಾಗಲಿದೆ. ಕೈಗೊಂಡ ಕೆಲಸ ಮುಂದೂಡುವಿರಿ. ಮನಸ್ಸಿನ ಯೋಚನೆಗಳು ಅಸ್ಥಿರವಾಗಿರಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಸವಾಲುಗ ಎದುರಿಸಬೇಕಾಗುತ್ತದೆ.

ಕುಂಭ / ಔತಣಕೂಟಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ಪ್ರಯತ್ನಗಳಲ್ಲಿ ಯಶಸ್ಸು ಲಭಿಸಲಿದೆ. ಹೊಸ ಉದ್ಯೋಗಾವಕಾಶ. ವ್ಯಾಪಾರ ಲಾಭದಾಯಕವಾಗಿರಲಿದ್ದು, ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ.
ಮೀನ / ಕೆಲಸಕಾರ್ಯಗಳಲ್ಲಿ ಕೊಂಚ ನಿರಾಸಕ್ತಿ. ಬಂಧುಮಿತ್ರರೊಡನೆ ವೈಮನಸ್ಯ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ದಿಢೀರ್ ಪ್ರಯಾಣ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಬದಲಾವಣೆ
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.