ಶಿವಮೊಗ್ಗ: ಕೋಟೆ ಮಾರಿಕಾಂಬಾ ಜಾತ್ರೆಗೆ ಭರ್ಜರಿ ಸಿದ್ಧತೆ; ಮಾರಿಗದ್ದುಗೆಗೆ ಎಸ್‌.ಪಿ ನಿಖಿಲ್ ಬಿ ಭೇಟಿ.

ಶಿವಮೊಗ್ಗ: ನಗರದಲ್ಲಿ ಫೆಬ್ರವರಿ 24ರಿಂದ 28ರ ವರೆಗೆ ನಡೆಯಲಿರುವ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಲಕ್ಷಾಂತರ ಭಕ್ತರ ನಿರ್ವಹಣೆ, ವಾಹನ ಪಾರ್ಕಿಂಗ್ ಮತ್ತು ಭದ್ರತಾ ವ್ಯವಸ್ಥೆಗಳ ಕುರಿತು ಚರ್ಚಿಸಲು ಎಸ್‌.ಪಿ ನಿಖಿಲ್ ಬಿ. ಅವರು ಇಂದು ಜಾತ್ರಾ ಸಮಿತಿಯೊಂದಿಗೆ ಸಭೆ ನಡೆಸಿದರು.

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

ಇಂದು ಗಾಂಧಿ ಬಜಾರ್‌ನಲ್ಲಿ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನಾ ಸ್ಥಳವನ್ನು ಪರಿಶೀಲಿಸಿದ ಎಸ್‌.ಪಿ, ನಂತರ ಮಾರಿಗದ್ದುಗೆಗೆ ತೆರಳಿದರು. ಮಾರಿಗದ್ದುಗೆಯ ಬಳಿ ದೇವಿಯನ್ನು ಪ್ರತಿಷ್ಠಾಪಿಸುವ ಸ್ಥಳ, ಭಕ್ತರ ದರ್ಶನಕ್ಕಾಗಿ ಮಾಡಲಾದ ಸರತಿ ಸಾಲಿನ ವ್ಯವಸ್ಥೆ ಹಾಗೂ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ಸಮಿತಿಯಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕೋಟೆ ಶ್ರೀ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಜಾತ್ರೆಯ ಸಿದ್ಧತೆಗಳ ಕುರಿತು ಎಸ್‌.ಪಿಯವರಿಗೆ ವಿವರಣೆ ನೀಡಿದರು.

SP Nikhil B Reviews Kote Marikamba Jathre
SP Nikhil B Reviews Kote Marikamba Jathre

SP Nikhil B Reviews Kote Marikamba Jathre

shivamogga car decor sun control house
shivamogga car decor sun control house