ಧನಲಾಭದ ದಾರಿ! ಶುಭಫಲ, ಶುಭ ಘಳಿಗೆಯ ಈ ದಿನದ ಭವಿಷ್ಯ ಓದಿ

ಇಂದಿನ ಪಂಚಾಂಗ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷದ ಪಾಡ್ಯಮಿ ತಿಥಿಯು ಇಂದು ಸಂಜೆ 5.31 ರವರೆಗೆ ಇರಲಿದೆ. ನಂತರ ಬಿದಿಗೆ ತಿಥಿ ಇರುವುದು. ಶತಭಿಷ ನಕ್ಷತ್ರ ರಾತ್ರಿ 10.07 ರವರೆಗೆ ಇರಲಿದೆ ನಂತರ ಪೂರ್ವಾಬಾಧ್ರ ನಕ್ಷತ್ರವಿರಲಿದೆ. ಅಮೃತ ಘಳಿಗೆ ಮಧ್ಯಾಹ್ನ 2.44 ರಿಂದ 4.21 ರವರೆಗೆ, ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ,ಯಮಗಂಡ ಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ. 

ಇಂದಿನ ಪಂಚಾಂಗ / ದಿನಭವಿಷ್ಯ

ಮೇಷ  /  ಕೈಗೊಂಡ ಕೆಲಸಗಳಲ್ಲಿ ಜಯ, ಉತ್ತಮ ಅವಕಾಶ ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯುವ ಯೋಗವಿದೆ, ಹೊಸ ವಿಷಯಗಳಲ್ಲಿ ಆಸಕ್ತಿ ಮೂಡಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ. 

ವೃಷಭ /  ಯಶಸ್ಸು ದೊರೆಯಲಿದೆ, ಅಂದುಕೊಂಡ ಕೆಲಸ ನೆರವೇರುತ್ತವೆ. ಶುಭ ಸಮಾರಂಭ, ದೂರದ ಸಂಬಂಧಿಕರ ಭೇಟಿ, ವ್ಯಾಪಾರದಲ್ಲಿ ಲಾಭ ಹಾಗೂ ಉದ್ಯೋಗದಲ್ಲಿ ಪೂರಕ ವಾತಾವರಣವಿರಲಿದೆ.

Indina Panchanga Rashi Bhavishya ಇಂದಿನ ಪಂಚಾಂಗ, ರಾಹುಕಾಲ, ಯಮಗಂಡ ಕಾಲದ ವಿವರಗಳೊಂದಿಗೆ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯಿರಿ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಗ್ರಹಗತಿಗಳ ನಿಖರ ಭವಿಷ್ಯ ಇಲ್ಲಿದೆ.
Indina Panchanga Rashi Bhavishya ಇಂದಿನ ಪಂಚಾಂಗ,

ಶಿವಮೊಗ್ಗ ಕೋರ್ಟ್​ನಿಂದ ಹೊಸ ತೀರ್ಪು! ಹೊಲ ಹಾಳು ಮಾಡಿ ಹಲ್ಲೆ ಮಾಡಿದ ಕೇಸ್​ನಲ್ಲಿ ಹೊರಬಿತ್ತು ಅಪರೂಪದ ಆದೇಶ! ಏನಿದು?

ಮಿಥುನ /  ಕೆಲಸದಲ್ಲಿ ಹೆಚ್ಚಿನ ಶ್ರಮ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಮನಸ್ತಾಪ ಹಾಗೂ ಕಷ್ಟಪಟ್ಟರೂ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಆರ್ಥಿಕ ಮುಗ್ಗಟ್ಟು, ಪ್ರಯತ್ನಗಳಿಗೆ ಅಡೆತಡೆ. 

ಕರ್ಕಾಟಕ / ಕುಟುಂಬದಲ್ಲಿ ಸಮಸ್ಯೆ ತಲೆದೋರಬಹುದು ಹಾಗೂ ಅನಾರೋಗ್ಯ. ಸಂಬಂಧಿಕರೊಂದಿಗೆ ಕಲಹ  ಹಾಗೂ ಅನಿರೀಕ್ಷಿತ ಪ್ರಯಾಣ ಸ್ನೇಹಿತರಿಂದ ತೊಂದರೆ ಹಾಗೂ ಖರ್ಚು ಹೆಚ್ಚಾಗಲಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನವಿರಲಿದೆ.

ಸಿಂಹ / ಮನ್ನಣೆ ಸಿಗಲಿದ್ದು ,ಗೌರವ ಹೆಚ್ಚಾಗುತ್ತದೆ,ಅಚ್ಚರಿ ಮೂಡಿಸುವ ಸಂಗತಿ ತಿಳಿಯಲಿವೆ. ಹಳೆಯ ಜಗಳ ಬಗೆಹರಿಯಲಿದ್ದು, ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ವ್ಯಾಪಾರದಲ್ಲಿ ಅಭಿವೃದ್ಧಿ ಹಾಗೂ ಉದ್ಯೋಗದಲ್ಲಿ ಹೊಸ ಅವಕಾಶ. 

ಕನ್ಯಾ / ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ವಿವಾದ ಬಗೆಹರಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣವಿದ್ದು, ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆಯಾಗಲಿವೆ.

Indina Panchanga Rashi Bhavishya ಇಂದಿನ ಪಂಚಾಂಗ, ರಾಹುಕಾಲ, ಯಮಗಂಡ ಕಾಲದ ವಿವರಗಳೊಂದಿಗೆ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯಿರಿ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಗ್ರಹಗತಿಗಳ ನಿಖರ ಭವಿಷ್ಯ ಇಲ್ಲಿದೆ.
Indina Panchanga Rashi Bhavishya ಇಂದಿನ ಪಂಚಾಂಗ,

ಕೇರಳದಿಂದ ಶಿವಮೊಗ್ಗಕ್ಕೆ ನಕ್ಸಲ್​ ಬಿ.ಜಿ.ಕೃಷ್ಣಮೂರ್ತಿ! ಕೋರ್ಟ್​ಗೆ ಹಾಜರ್​ ಸಾಧ್ಯತೆ!

ತುಲಾ / ಕೆಲಸಗಳಲ್ಲಿ ವಿಘ್ನ ಎದುರಾಗಲಿದ್ದು, ಅನಗತ್ಯ ಖರ್ಚು ಹೆಚ್ಚಾಗಲಿವೆ. ಬಂಧು ಮಿತ್ರರೊಂದಿಗೆ ಮನಸ್ತಾಪ, ದೂರದ ಊರಿಗೆ ಪ್ರಯಾಣ. ದೇವಸ್ಥಾನಗಳಿಗೆ ಭೇಟಿ , ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. 

ವೃಶ್ಚಿಕ / ಹಣಕಾಸಿನ ತೊಂದರೆ, ದೈಹಿಕ ಶ್ರಮ ಅಧಿಕವಾಗಿರುತ್ತದೆ. ಮನಸ್ಸು ಚಂಚಲವಾಗಿರಲಿದ್ದು, ಕುಟುಂಬ ಸದಸ್ಯರಿಂದ ಸಮಸ್ಯೆ ಎದುರಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲದ ವಾತಾವರಣವಿರುತ್ತದೆ.

ಧನು / ಉತ್ಸಾಹದ ದಿನ, ಪ್ರೀತಿಪಾತ್ರರ ಬೆಂಬಲ ಸಿಗುವುದು. ಹೊಸ ವ್ಯಕ್ತಿಗಳ ಪರಿಚಯ, ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಚುರುಕಿನಿಂದ ನಡೆಯಲಿದೆ. 

ಮಕರ / ಹೊಸದಾಗಿ ಸಾಲ ಮಾಡುವ ಪರಿಸ್ಥಿತಿ ಹಾಗೂ ಆಪ್ತರೊಂದಿಗೆ ಜಗಳ ಸಾಧ್ಯತೆಯಿದೆ. ಆರೋಗ್ಯದ ಕಡೆ ಗಮನ ಹರಿಸಬೇಕು. ಕುಟುಂಬದಲ್ಲಿ ಸಣ್ಣ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದೈವ ದರ್ಶನ ಪಡೆಯುವಿರಿ.

ಕುಂಭ / ವ್ಯವಹಾರ ಸುಗಮವಾಗಿ ಸಾಗಲಿದೆ, ಹಳೆಯ ಸ್ನೇಹಿತರ ಭೇಟಿ, ಧಾರ್ಮಿಕ ಕಾರ್ಯ. ವ್ಯಾಪಾರದಲ್ಲಿ ಏಳಿಗೆ, ಉದ್ಯೋಗದಲ್ಲಿನ ಅಡೆತಡೆ ದಾಟುವಿರಿ. 

ಮೀನ /  ಮಾತುಕತೆಯ ದಿನ, ಇತ್ಯರ್ಥಕ್ಕೆ ಬರುವಿರಿ, ಮನಸ್ಸಿಗೆ ನೆಮ್ಮದಿ. ಕೆಲಸ ಮಂದಗತಿಯಲ್ಲಿ ಸಾಗಲಿದ್ದು, ಅನಿರೀಕ್ಷಿತ ಪ್ರಯಾಣ ಎದುರಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ 

Indina Panchanga Rashi Bhavishya ಇಂದಿನ ಪಂಚಾಂಗ, ರಾಹುಕಾಲ, ಯಮಗಂಡ ಕಾಲದ ವಿವರಗಳೊಂದಿಗೆ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯಿರಿ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಗ್ರಹಗತಿಗಳ ನಿಖರ ಭವಿಷ್ಯ ಇಲ್ಲಿದೆ.
Indina Panchanga Rashi Bhavishya ಇಂದಿನ ಪಂಚಾಂಗ,

Shivamogga airport ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಮತ್ತೊಂದು ಗುಡ್‌ ನ್ಯೂಸ್‌! ಏನದು ಗೊತ್ತಾ?

 ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Indina Panchanga Rashi Bhavishya ಇಂದಿನ ಪಂಚಾಂಗ, ರಾಹುಕಾಲ, ಯಮಗಂಡ ಕಾಲದ ವಿವರಗಳೊಂದಿಗೆ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯಿರಿ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಗ್ರಹಗತಿಗಳ ನಿಖರ ಭವಿಷ್ಯ ಇಲ್ಲಿದೆ.