05 February 2026 ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಪುಣ್ಯಕಾಲ ಶಿಶಿರ ಋತು ಮಾಘ ಮಾಸದ ಈ ದಿನ ಕೃಷ್ಣ ಪಕ್ಷದ ಚೌತಿ ತಿಥಿ ರಾತ್ರಿ 2.04 ರವರೆಗೆ ಇರಲಿದ್ದು, ಆ ಬಳಿಕ ಪಂಚಮಿ ತಿಥಿ ಆರಂಭವಾಗಲಿದೆ. ಉತ್ತರ ನಕ್ಷತ್ರವು ರಾತ್ರಿ 12.53 ರವರೆಗೆ ಇರುತ್ತದೆ ಮತ್ತು ನಂತರ ಹಸ್ತ ನಕ್ಷತ್ರ ಪ್ರವೇಶಿಸಲಿದೆ. ಇಂದು ಸಂಕಟಹರ ಚತುರ್ಥಿಯ ವಿಶೇಷ ದಿನ.ಅಮೃತ ಗಳಿಗೆ ಸಂಜೆ 5.26 ರಿಂದ ಆರಂಭವಾಗಿ 7.06 ರವರೆಗೆ ಇರಲಿವೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

ಇವತ್ತಿನ ರಾಶಿಭವಿಷ್ಯ
ಮೇಷ | ನವಚೈತನ್ಯ ಮತ್ತು ಉತ್ಸಾಹದ ದಿನ. ಆರ್ಥಿಕವಾಗಿ ಪ್ರಗತಿ, ಯಶಸ್ಸನ್ನು ಪಡೆಯಲಿದ್ದಾರೆ. ಕೈಗೊಂಡ ಕಾರ್ಯ ಮತ್ತು ವ್ಯವಹಾರಗಳಲ್ಲಿ ಜಯ. ಉದ್ಯೊಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ವಾತಾವರಣ ಅನುಕೂಲಕರವಾಗಿರುತ್ತದೆ.
ವೃಷಭ | ಬಂಧುಗಳಿಂದ ಒತ್ತಡ. ದೂರ ಪ್ರಯಾಣ, ಮನೆಯಲ್ಲಿ ಹಾಗೂ ಹೊರಗಡೆ ಜವಾಬ್ದಾರಿ ಹೊರೆ ಹೆಚ್ಚಾಗಲಿದೆ. ಅತಿಯಾದ ಶ್ರಮ ,ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಫಲ.
ಶಿವಮೊಗ್ಗದಲ್ಲಿ ಡಾಕ್ ಅದಾಲತ್ | ಯಾವಾಗ
ಮಿಥುನ | ಆಪ್ತರೊಂದಿಗೆ ಮನಸ್ತಾಪ ,ಮಾತಿನ ಚಕಮಕಿ. ಅನಗತ್ಯ ಖರ್ಚು ಮತ್ತು ಆಯಾಸ. ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸಣ್ಣಪುಟ್ಟ ಅಡೆತಡೆ ಎದುರಾಗಬಹುದು.
ಕರ್ಕಾಟಕ | ಸ್ನೇಹಿತರ ಕಡೆಯಿಂದ ಶುಭ ಸುದ್ದಿ, ಬರಬೇಕಾಗಿದ್ದ ಹಣ ಕೈಸೇರಲಿದೆ. ಅಂದುಕೊಂಡ ಕೆಲಸ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ, ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ.
ಸಿಂಹ | ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆ ಎದುರಿಸಬೇಕಾಗುತ್ತದೆ. ದೂರ ಪ್ರಯಾಣ. ಒತ್ತಡ ಬರಬಹುದು. ದೇವಾಲಯಗಳಿಗೆ ಭೇಟಿ. ಧನವ್ಯಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪರಿಸ್ಥಿತಿ ಸಾಧಾರಣವಾಗಿರಲಿದೆ.

ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? ಪಟ್ಟಿ ಇಲ್ಲಿದೆ
ಕನ್ಯಾ | ಹೊಸ ಯೋಜನೆಗಳಿಗೆ ನಾಂದಿ. ಶುಭ ಸುದ್ಧಿ. ಹಳೆಯ ಬಾಕಿ ಹಣ ವಸೂಲಾಗಲಿದ್ದು, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಔತಣಕೂಟ. ಉದ್ಯೋಗ ಮತ್ತು ವ್ಯಾಪಾರ ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ಸಾಗಲಿದೆ .
ತುಲಾ | ವ್ಯಾಪಾರ ಮತ್ತು ಉದ್ಯೋಗ ಸ್ಥಳದಲ್ಲಿ ಒತ್ತಡದ ವಾತಾವರಣ ಇರಲಿದೆ. ಹೆಗಲ ಮೇಲಿನ ಜವಾಬ್ದಾರಿ ಹೆಚ್ಚಾಗಲಿವೆ. ಪ್ರಮುಖವಾದ ಕೆಲಸ ನಿಧಾನಗತಿಯಲ್ಲಿ ಸಾಗಲಿದ್ದು, ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ಕಿರಿಕಿರಿ ಉಂಟಾಗಬಹುದು.
ವೃಶ್ಚಿಕ | ಉದ್ಯೋಗದ ಪ್ರಯತ್ನ ಫಲಪ್ರದವಾಗಲಿವೆ. ಸಹೋದರರು ಮತ್ತು ಸ್ನೇಹಿತರೊಂದಿಗೆ ಇದ್ದ ಭಿನ್ನಾಭಿಪ್ರಾಯ ಬಗೆಹರಿಯಲಿವೆ. ಶುಭ ವರ್ತಮಾನ ಕೇಳಲಿದ್ದೀರಿ. ಆಸ್ತಿ ಪಾಸ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ
ಧನುಸ್ಸು | ಸಮಾಜದಲ್ಲಿ ಗೌರವ. ಮಾಹಿತಿಯೊಂದು ಇವರಿಗೆ ಲಭ್ಯವಾಗಲಿದೆ. ಬಾಲ್ಯ ಸ್ನೇಹಿತರ ಭೇಟಿ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ಮಕರ | ಕುಟುಂಬದಲ್ಲಿ ಅಶಾಂತಿ ಅಥವಾ ಕಿರಿಕಿರಿ. ನಿರೀಕ್ಷೆಗೂ ಮೀರಿದ ,ಅನಿರೀಕ್ಷಿತ ಧನವ್ಯಯ. ವ್ಯಾಪಾರ ವ್ಯವಹಾರ ಕೊಂಚ ಮಂದಗತಿಯಲ್ಲಿ ಸಾಗಬಹುದು. ಉದ್ಯೋಗಿಗಳಿಗೆ ಕೆಲಸದ ಒತ್ತಡ.
ಕುಂಭ | ಖರ್ಚು ಮತ್ತು ಪ್ರಯಾಸದ ದಿನ, ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಮಹತ್ವದ ಮಾಹಿತಿಯೊಂದು ಬಂದು ತಲುಪಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಚಟುವಟಿಕೆ ಸ್ವಲ್ಪ ಮಟ್ಟಿಗೆ ಕಡಿಮೆ ಇರಲಿದೆ.

ಮೀನ | ಹೊಸ ಉದ್ಯೋಗ ದೊರೆಯುವ ಯೋಗ. ಪ್ರಮುಖವಾದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ವ್ಯವಹಾರ ನಿಮಗೆ ಪೂರಕವಾಗಿರಲಿವೆ. ಹಳೆಯ ಘಟನೆ ಮತ್ತೆ ನೆನಪಿಗೆ ಬರಬಹುದು. ವಸ್ತು ಲಾಭವಾಗುವ ಸಾಧ್ಯತೆ ಇದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಚುನಾವಣೆಗಾಗಿ ಹೊಸ ಟೆಕ್ನಿಕ್ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ
