ಹೊಳೆಹೊನ್ನೂರು : ಭದ್ರ ನಾಲೆಯಲ್ಲಿ ಪತ್ತೆಯಾಯ್ತು 2 ನೇ ಮೃತದೇಹ 

 ಶಿವಮೊಗ್ಗ :  ಹೊಳೆಹೊನ್ನೂರು ಸಮೀಪದ ಅರಬಿಳಚಿ ಕ್ಯಾಂಪ್ ಬಳಿಯ ಭದ್ರಾ ನಾಲೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾಗಿದ್ದ ನಾಲ್ವರಲ್ಲಿ ಇಂದು ಎರಡನೇ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು 55 ವರ್ಷದ ನೀಲಾಬಾಯಿ ಎಂದು ಗುರುತಿಸಲಾಗಿದೆ. 

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ

Bhadra Canal Tragedy ಕಳೆದ ಭಾನುವಾರ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನಾಲ್ವರು ಕೊಚ್ಚಿ ಹೋಗಿದ್ದರು. ಈ ಪೈಕಿ ನೀಲಾಬಾಯಿ ಅವರ ಪುತ್ರ ರವಿಕುಮಾರ್ ಅವರ ಶವವನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡವು ಎರಡು ದಿನಗಳ ಹಿಂದೆಯೇ ಹೊರತೆಗೆದಿತ್ತು. ಇದೀಗ ಘಟನೆ ಸಂಭವಿಸಿದ ಮೂರು ದಿನಗಳ ನಂತರ ತಾಯಿಯ ಮೃತದೇಹವೂ ಲಭ್ಯವಾಗಿದೆ. 

Bhadra Canal Tragedy Four family members went missing in Bhadra Canal near Arabilichi Camp
Bhadra Canal Tragedy Four family members went missing in Bhadra Canal near Arabilichi Camp

ನಾಲೆಯಲ್ಲಿ ನಾಪತ್ತೆಯಾಗಿರುವ ಶ್ವೇತಾ ಮತ್ತು ಪರಶುರಾಮ್ ಎಂಬ ದಂಪತಿಗಳ ಪತ್ತೆಗಾಗಿ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡಗಳು ನಾಲ್ಕನೇ ದಿನವೂ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.

Bhadra Canal Tragedy Second Body Recovered