Get accurate daily horoscope for January 1 2026 ಬೆಂಗಳೂರು : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿ ರಾತ್ರಿ 8.49 ರವರೆಗೆ ಇರಲಿದ್ದು, ತದನಂತರ ಚತುರ್ದಶಿ ಆರಂಭವಾಗಲಿದೆ. ರೋಹಿಣಿ ನಕ್ಷತ್ರದ ಈ ದಿನ ಅಮೃತ ಘಳಿಗೆಯು ಸಂಜೆ 6.55 ರಿಂದ 8.24 ರವರೆಗೆ ಇರಲಿದೆ.ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲವು ಬೆಳಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.
ಅಡಿಕೆ ಬೆಳೆಗಾರರ ಗಮನಕ್ಕೆ ! ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಓದಿ

ಇವತ್ತಿನ ರಾಶಿಫಲ
ಮೇಷ : ಆರ್ಥಿಕವಾಗಿ ಹಿನ್ನಡೆ, ಹೊಸದಾಗಿ ಸಾಲ ಆಗಬಹುದು. ಮನಸ್ತಾಪ , ಅನಾರೋಗ್ಯ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿರೀಕ್ಷಿತ ಲಾಭ
ವೃಷಭ : ಆರ್ಥಿಕ ಸಹಾಯ ದೊರೆಯಲಿದೆ, ವಾಹನ ಖರೀದಿ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ವಾರ್ತೆ, ಹಳೆಯ ಸ್ನೇಹಿತರ ಭೇಟಿ. ವೃತ್ತಿ ಜೀವನದಲ್ಲಿನ ಅಡೆತಡೆ ನಿವಾರಣೆ.
ಮಿಥುನ : ಅನಗತ್ಯ ವೆಚ್ಚ. ಕೌಟುಂಬಿಕ ಒತ್ತಡ, ಧಾರ್ಮಿಕ ಕೇಂದ್ರಗಳಿಗೆ ಭೇಟಿ , ಕೆಲಸದ ಸ್ಥಳದಲ್ಲಿ ಕೆಲವು ಅನಿರೀಕ್ಷಿತ ಸಮಸ್ಯೆ, ಉದ್ಯೋಗ ಮತ್ತು ವ್ಯವಹಾರದಲ್ಲಿಂದು ಹೊಸದಿನ.
ಕರ್ಕಾಟಕ : ಹೊಸ ಕೆಲಸ, ಹೊಸ ಹುರುಪು, ಪ್ರಮುಖ ಕಾರ್ಯಕ್ರಮಗಳಲ್ಲಿ ವಿಶೇಷ ಗೌರವ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿಪರ ವಾತಾವರಣ ಕಂಡುಬರಲಿದೆ

ಸಿಂಹ : ಮನೆಯಲ್ಲಿ ಶುಭ ಕಾರ್ಯ. ಧನ ಲಾಭದ ಜೊತೆಗೆ, ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ, ಸಹೋದರರಿಂದ ಬೆಂಬಲ. ದೂರದ ಪ್ರಯಾಣ ಲಾಭದಾಯಕ. ಉದ್ಯೋಗ ಮತ್ತು ವೃತ್ತಿಯಲ್ಲಿ ಉತ್ಸಾಹ
ಕನ್ಯಾ : ಕೆಲವು ವಿಘ್ನಗಳು ಎದುರಾಗಲಿದೆ, ಅನಗತ್ಯ ಖರ್ಚು, ಕೆಲವು ವಿಷಯ ಚಿಂತೆಗೀಡು ಮಾಡಬಹುದು. ಕುಟುಂಬದೊಳಗೆ ವಿವಾದ, ಸಮಾಧಾನದಿಂದ ವರ್ತಿಸುವುದು ಉತ್ತಮ. ವ್ಯಾಪಾರದಲ್ಲಿ ಅಲ್ಪ ಹಿನ್ನಡೆ, ಉದ್ಯೋಗದಲ್ಲಿ ಒತ್ತಡ
ತುಲಾ : ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ, ಕಷ್ಟಕ್ಕೆ ತಕ್ಕ ಫಲ ಸಿಗದೆ ನಿರಾಸೆ ಅನುಭವಿಸಬಹುದು. ಆಯಾಸ ಮತ್ತು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು, ದೈವದರ್ಶನದಿಂದ ಸಮಾಧಾನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಮಾನ್ಯ

ಶಿವಮೊಗ್ಗ ಆಡಳಿತದಲ್ಲಿ ಮೇಜರ್ ಬದಲಾವಣೆ! ಜಿಲ್ಲೆಗೆ ಹೊಸ ಡಿಸಿ ಎಂಟ್ರಿ! ಗುರುದತ್ ಹೆಗೆಡೆ ವರ್ಗಾವಣೆ
ವೃಶ್ಚಿಕ : ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಿದ್ದು, ಗೌರವ ಸಿಗಲಿದೆ. ಬೆಲೆಬಾಳುವ ವಸ್ತು ಖರೀದಿ, ಇಂಟರ್ವ್ಯೂಗಳಲ್ಲಿ ಯಶಸ್ಸು ಸಿಗಲಿದೆ. ಉತ್ತಮ ಪ್ರಗತಿ ಕಂಡುಬರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ಧನು : ದೃಢ ನಿರ್ಧಾರದಿಂದ ಕೆಲಸ ಯಶಸ್ವಿಯಾಗಿ ಮುಗಿಸುವ ಸಾಮರ್ಥ್ಯ ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಶುಭ ಸಮಾಚಾರ, ಪ್ರಮುಖ ವ್ಯಕ್ತಿಗಳಿಂದ ಗೌರವ ಸಿಗಲಿದೆ. ವ್ಯಾಪಾರ ಮತ್ತು ವ್ಯವಹಾರ ಸುಗಮವಾಗಿ ಸಾಗಲಿವೆ (Growth).
ಮಕರ : ಕೆಲವು ಕೆಲಸಗಳು ಮುಂದೂಡಲ್ಪಡುವ ಸಾಧ್ಯತೆಯಿದೆ. ವೈಮನಸ್ಸು ಉಂಟಾಗಬಹುದು. ಅಮೂಲ್ಯವಾದ ವಸ್ತುಗಳ ಬಗ್ಗೆ ಜಾಗ್ರತೆ ವಹಿಸುವುದು ಮುಖ್ಯ, ಆರೋಗ್ಯದಲ್ಲಿ ಏರುಪೇರಾಗಬಹುದು. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಗೊಂದಲದ ವಾತಾವರಣವಿರಲಿದೆ
ಕುಂಭ : ಕೌಟುಂಬಿಕ ಟೀಕೆಗಳಿಗೆ ಗುರಿಯಾಗುವ ಸಾಧ್ಯತೆಯಿದ್ದು, ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಹಾಗೂ ಪ್ರಮುಖ ಕೆಲಸ ಮುಂದೂಡುವುದು ಉತ್ತಮ. ಉದ್ಯೋಗ ಮತ್ತು ವೃತ್ತಿಯಲ್ಲಿ ಹೊಸ ದಿನ
ಮೀನ : ಸಮಾಜದಲ್ಲಿ ಹೊಸ ಸಂಪರ್ಕ ಏರ್ಪಡಲಿವೆ ಹಾಗೂ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆಯ ಅವಕಾಶ ಸಿಗಲಿವೆ. ಪ್ರಯತ್ನಿಸಿದ ಕೆಲಸಗಳಲ್ಲಿ ಸಿದ್ಧಿ ದೊರೆಯಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದಾಯಕ ಬೆಳವಣಿಗೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!




