SHIVAMOGGA | Dec 12, 2023 | ಸಾಲಗಾರನ ಬೆನ್ನಿಗೆ ಚೂರಿ ಹಾಕಿರುವ ಘಟನೆಯೊಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ನಡೆದಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್
ಸ್ನೇಹಿತನ ಬಳಿ ಸಾಲಕ್ಕೆ ಹಣ ಪಡೆದು ಕೊನೆಗೆ ಹಿಂತಿರುಗಿಸದ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆಯಿದು. ಆಟೋ ಚಾಲಕ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ. ಸ್ನೇಹಿತನೊಬ್ಬನಿಂದ ಚಾಲಕ ಎರಡು ತಿಂಗಳ ಹಿಂದೆ ₹20 ಸಾವಿರ ಸಾಲ ಪಡೆದಿದ್ದರು.
ಈಚೆಗೆ ಹಣ ಹಿಂತಿರುಗಿಸುವಂತೆ ಸ್ನೇಹಿತ ಕೇಳಿದ್ದು, ಡಿಸೆಂಬರ್ 8 ರಂದು ರಾತ್ರಿ ಸಾಲ ವಸೂಲಿಗೆ ಸ್ನೇಹಿತ ಬಂದಿದ್ದಾನೆ. ಈ ವೇಳೆ ಸ್ನೇಹಿತ ಹಾಗೂ ಆತನ ಜೊತೆಗಿದ್ದ ಇನ್ನೊಬ್ಬ ಯುವಕ ಆಟೋ ಚಾಲಕನನ್ನ ಹೊಳೆಹೊನ್ನೂರು ರಸ್ತೆಗೆ ಕರೆದೊಯ್ದಿದ್ದಾರೆ.
READ : GOOD NEWS | ಕಡಿಮೆಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ದರ?
ಅಲ್ಲಿ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಅಲ್ಲದೇ, ಚಾಲಕನಿಗೆ ಹೊಡೆದು, ಬೆನ್ನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಈ ಬಗ್ಗೆ ಸಂತ್ರಸ್ತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
