SHIVAMOGGA NEWS / Malenadu today/ Nov 27, 2023 | Malenadutoday.com
SHIVAMOGGA | ಜಿಲ್ಲೆಯಲ್ಲಿ ಶುಂಠಿ ಹಾಗೂ ಅಡಿಕೆ ಯನ್ನು ಮಾರಾಟ ಮಾಡಿ ಲಾಭಗಳಿಸುವಷ್ಟರಲ್ಲಿ ಜನರು ಕೆಲವೊಮ್ಮೆ ಹೈರಾಣಾಗುತ್ತಾರೆ. ಒಂದೋ ತೋಟದಲ್ಲಿರುವ ಮರದಿಂದಲೇ ಹಸಿ ಅಡಿಕೆಯನ್ನ ಕದ್ದೊಯ್ದ ಘಟನೆಗಳು ನಡೆಯುತ್ತವೆ. ಇಲ್ಲವೇ ಸಂಗ್ರಹಿಸಿಟ್ಟ ಶುಂಠಿ ಚೀಲಗಳು ಇದ್ದಕ್ಕಿದ್ದ ಹಾಗೆ ಕಳ್ಳತನವಾಗುತ್ತವೆ. ಇಂತಹ ಘಟನೆಗಳು ಈ ಸಮಯದಲ್ಲಿ ಮಾಮೂಲಿನಂತಾಗಿದ್ದು, ಶುಂಠಿ ಹಾಗೂ ಅಡಿಕೆಯನ್ನು ಕಾಯವುದೇ ಭಯಂಕರ ಕೆಲಸವಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಶುಂಠಿಯನ್ನ ಲಾರಿಯಲ್ಲಿ ತುಂಬಿಸಿ ಅಮೃತಸರಕ್ಕೆ ಕಳುಹಿಸಿಟ್ಟ ವ್ಯಕ್ತಿಗೆ ಅಲ್ಲಿಂದ ವಾಟ್ಸ್ಯಾಪ್ನಲ್ಲೊಂದು ಶಾಕಿಂಗ್ ನ್ಯೂಸ್ ಬಂದ ಘಟನೆ ನಡೆದಿದೆ. ಘಟನೆ ಬಗ್ಗೆ ತಡವಾಗಿ ವಿಚಾರ ಬೆಳಕಿಗೆ ಬಂದಿದೆ. ಆಯನೂರು ಮೂಲದ ಶುಂಠಿ ವ್ಯಾಪಾರಸ್ಥರೊಬ್ಬರು ಎಲ್ಲಾ ಕಡೆಗಳಿಂದ ಶುಂಠಿ ಖರೀದಿಸಿ ಸುಮಾರು 180 ಕ್ವಿಂಟಾಲ್ ಒಟ್ಟು ಮಾಡಿದ್ದರು. ಅದನ್ನು ಅವರು ಪಂಜಾಬ್ ನ ಸಂಸ್ಥೆಯೊಂದಕ್ಕೆ ಮಾರುವವರಿದ್ದರು.
ಇದಕ್ಕಾಗಿ ಬೆಂಗಳೂರು ಮೂಲದ ಟ್ರಾನ್ಸಫೋರ್ಟ್ ಕಂಪನಿಯೊಂದರಲ್ಲಿ ಲಾರಿ ಬುಕ್ ಮಾಡಿದ್ದರು. ನಿಗದಿಯಂತೆ ಶಿವಮೊಗ್ಗದಿಂದ ಶುಂಠಿ ತುಂಬಿಕೊಂಡು ಹೊರಟ ಲಾರಿ ಅಮೃತಸರಕ್ಕೆ ಹೋಗುವವರೆಗೂ ಎಲ್ಲವೂ ನೀಟಾಗಿತ್ತು. ಅಲ್ಲಿಯವರೆಗೂ ಫೋನ್ ಸಂಪರ್ಕದಲ್ಲಿದ್ದ ಲಾರಿ ಚಾಲಕ,ಆನಂತರ ಸ್ವಿಚ್ ಆಫ್ ಮಾಡಿಕೊಂಡಿದ್ದ..
ಈ ಮಧ್ಯೆ ಶುಂಠಿ ವರ್ತಕರ ಗ್ರೂಪ್ಗೆ ಪಂಜಾಬ್ನಲ್ಲಿ ಕೆಜಿಗೆ 50 ರೂಪಾಯಿಯಂತೆ ಲಾರಿಯಿಂದ ಶುಂಠಿ ಮಾರುತ್ತಿರುವ ಬಗ್ಗೆ ವಾಟ್ಸ್ಯಾಪ್ ವಿಡಿಯೋ ವೊಂದು ಶೇರ್ ಆಗಿದೆ. ಇದನ್ನ ನೋಡಿ ಗಾಬರಿಬಿದ್ದ ಶುಂಠಿ ವರ್ತಕ ನೇರವಾಗಿ ಕುಂಸಿ ಪೊಲೀಸ್ ಸ್ಟೇಷನ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು IPC 1860 (U/s-34,407,409) ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ