ನವೆಂಬರ್ 12 2025 ಮಲೆನಾಡು ಟುಡೆ ಸುದ್ದಿ : ಚಿಕ್ಕಮಗಳೂರು: ಆಸ್ತಿಗಾಗಿ ಸಾಕಿದ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಮಗಳು, ನರಸಿಂಹರಾಜಪುರ ತಾಲ್ಲೂಕಿನ ಬಂದಿಮಡಿಯಲ್ಲಿ ನಡೆದ ಘಟನೆ, 1.5 ಎಕರೆ ಜಮೀನು, ಮನೆಗಾಗಿ ಕುಸುಮಾ(62) ರನ್ನು ಕೊಲೆಗೈದ ಸುಧಾ (53)
ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರಿಪೈಡ್ ಆಟೋ ಬಾಡಿಗೆ ವಿಚಾರದಲ್ಲಿ ದಂಡ ವಿಧಿಸಿದ ಪೊಲೀಸ್! ನಡೆದಿದ್ದು!?
ಆಸ್ತಿಗಾಗಿ ಸಾಕು ತಾಯಿಯನ್ನೇ ಮಗಳು ಉಸಿರುಗಟ್ಟಿಸಿ ಕೊಲೆ ಮಾಡಿರೋ ಆರೋಪವೊಂಧು ನರಸಿಂಹರಾಜಪುರ ತಾಲ್ಲೂಕಿನ ಬಂಡಿಮಠದಲ್ಲಿ ನಡೆದಿದೆ. 1.5 ಎಕರೆ ಜಮೀನು ಮತ್ತು ಒಂದು ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು, ಮಗಳು ಈ ಕೃತ್ಯ ಎಸಗಿದ್ದಾಳೆ ಎಂದು ದೂರಲಾಗಿದೆ. ಕೊಲೆಯಾದ ವೃದ್ಧೆಯನ್ನು ಕುಸುಮಾ (62) ಎಂದು ಗುರುತಿಸಲಾಗಿದೆ.ಆಸ್ತಿ ವಿವಾದದಿಂದಾಗಿ ಮಗಳು ಸುಧಾ (53) ತನ್ನ ತಾಯಿಯನ್ನು ಕೊಲೆಗೈದಿದ್ದಾಳೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿದುಕೊಂಡಿದ್ದಾರೆ.

ಶಿವಮೊಗ್ಗ ಗಾಂಧಿ ಬಜಾರ್ ತರಕಾರಿ ಮಾರ್ಕೆಟ್ನಲ್ಲಿ ಗೆರೆ ಎಳೆದ ಟ್ರಾಫಿಕ್ ಪೊಲೀಸ್! ಏಕೆ ಗೊತ್ತಾ
ಈ ಕುಟುಂಬ ಬೇರೆ ಕಡೆಯಿಂದ ಕೂಲಿಗಾಗಿ ಬಂಡಿಮಠದಲ್ಲಿ ಬಂದು ನೆಲಸಿತ್ತು. ತಮ್ಮ ಊರಿನಲ್ಲಿರುವ ಆಸ್ತಿ ವಿಚಾರಕ್ಕೆ ತಾಯಿ ಮಗಳ ನಡುವೆ ಏನು ನಡೆದಿದೆ ಎಂಬುದು ಗೊತ್ತಾಗಿಲ್ಲ. ಈ ಮಧ್ಯೆ ರಾತ್ರಿ ತಾಯಿ ಮಲಗಿದ್ದ ಹೊತ್ತಲ್ಲಿ, ದಿಂಬಿನಲ್ಲಿ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ ಸುದ್ದಿ ಓದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
