ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ರಾಜ್ಯ ರಾಜಧಾನಿ ದೆಹಲಿಯಲ್ಲಿ ರಾಜ್ಯದ ಮಠವೊಂದಕ್ಕೆ ಸಂಬಂಧಿಸಿದ ಸಂಸ್ಥೆಯೊಂದರ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ನೈರುತ್ಯ ದೆಹಲಿಯಲ್ಲಿ ರಾಜ್ಯದ ಆಶ್ರಮವೊಂದಕ್ಕೆ ಸೇರಿದ ಸಂಸ್ಥೆಯೊಂದರ ವ್ಯವಸ್ಥಾಪಕನಾದ ಚೈತನ್ಯಾನಂದ ಸರಸ್ವತಿ ವಿರುದ್ಧ 17 ಮಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು ಆರೋಪಿ ಎಸ್ಕೇಪ್ ಆಗಿದ್ದಾರೆ. ಇನ್ನೂ ವಿಷಯ ಅಂದರೆ, ಈ ಸ್ವಾಮೀಜಿ ಓಡಾಡುತ್ತಿದ್ದ ಕಾರಿಗೆ ಯುಎನ್ ಹೆಸರಿನ ನಂಬರ್ ಪ್ಲೇಟ್ ಬಳಸಲಾಗಿದೆ. ಮತ್ತಿದು ಫೇಕ್ ಬೋರ್ಡ್ ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ 2016 ರಲ್ಲಿ ಇವರ ವಿರುದ್ಧ ದಾಖಲಾದ ದೂರು ಸೇರಿದಂತೆ ಇದುವರೆಗೂ ಐದು ಪ್ರಕರಣಗಳನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇನ್ನೂ ಕಳೆದ ಆಗಸ್ಟ್ 4 ರಂದು ಕೇಸ್ ದಾಖಲಿಸಿದ್ದ ಪೊಲೀಸರು 32 ವಿದ್ಯಾರ್ಥಿನಿಯರ ಹೇಳಿಕೆಯನ್ನ ಸಹ ದಾಖಲಿಸಿದ್ದು, ಅವರಿಗೂ ಸ್ವಾಮೀಜಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದರು ಎಂಬ ವಿಚಾರಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 75(2) (ಲೈಂಗಿಕ ಕಿರುಕುಳ), 79 (ಮಹಿಳೆಯರ ಘನತೆಗೆ ಅವಮಾನ ಮಾಡುವ ಉದ್ದೇಶ) ಮತ್ತು 351(2) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ

Delhi case against Swami Chaitanyananda Saraswati
Delhi case, Ashram manager booked, EWS students harassed, Chaitanyananda Saraswati ಆಶ್ರಮ ವ್ಯವಸ್ಥಾಪಕ, ದೆಹಲಿ ಪೊಲೀಸ್, ಚೈತನ್ಯಾನಂದ ಸರಸ್ವತಿ, ನಕಲಿ ನಂಬರ್ ಪ್ಲೇಟ್, ದೆಹಲಿ ಅಪರಾಧ,
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!



