Brother Kills Brother in Shivamogga ಶಿವಮೊಗ್ಗ, malenadu today news : August 21 2025 : ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕೊಲೆ ಘಟನೆ ವರದಿಯಾಗಿದೆ. ನಿನ್ನೆದಿನ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದ್ದು, ಆತ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದ್ದು ಆರೋಪಿ ಸಹ ಪೊಲೀಸ್ ವಶದಲ್ಲಿದ್ದಾನೆ.
ಸಾಗರ, ಶಿವಮೊಗ್ಗ, ರಿಪ್ಪನ್ಪೇಟೆ, ತೀರ್ಥಹಳ್ಳಿಯಲ್ಲಿ ಏನೆಲ್ಲಾ ನಡೀತು! ಬಾವಿಯಲ್ಲಿ ಯುವಕನ ದೇಹ!? ನಡೆದಿದ್ದೇನು? https://malenadutoday.com/sagar-shivamogga-ripponpet-thirthahalli-news-21/

ನಡೆದಿದ್ದೇನು?
ಶಿವಮೊಗ್ಗ ನಗರದ ಎಪಿಎಂಸಿ ಬಳಿಯ ಲೇಔಟ್ ಒಂದರಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಜನಾರ್ದನ ನಾಯ್ಕ್ ಎಂಬಾತ ಸಾವನ್ನಪ್ಪಿದ್ದಾನೆ. ಈತನ ದೊಡ್ಡಪ್ಪನ ಮಗ ಹನುಮಂತ ನಾಯ್ಕ್ನೇ ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರ ನಡುವೆ ನಡೆದ ಜಗಳದಲ್ಲಿ ಹನುಮಂತ ಜಗದೀಶನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಜಗದೀಶ ಹಾಗೂ ಹನುಮಂತ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಇವರಿಬ್ಬರ ನಡುವೆ ಈ ಹಿಂದೆ ಒಂದು ತಗಾದೆಯಾಗಿತ್ತು.ಅಪಘಾತ ಘಟನೆಯಲ್ಲಿ ಹನುಮಂತನಿಗೆ ಪ್ಯಾಕ್ಷರ್ ಆಗಿತ್ತು. ಅದರ ಆಸ್ಪತ್ರೆಯ ಖರ್ಚು ಜಗದೀಶ್ ನೀಡಿಲ್ಲ ಎಂಬುದು ಆರೋಪ. ಮೇಲಾಗಿ ಅಪಘಾತದಲ್ಲಾದ ಊನದ ಬಗ್ಗೆ ಹನುಮಂತನನ್ನು ಜಗದೀಶ್ ಆಡಿಕೊಳ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಜಗಳವಾಗಿ ಹನುಮಂತ ಜಗದೀಶನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಇನ್ನಷ್ಟು ವಿಚಾರ, ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ