KSRTC : ಕಡೂರು, ಚಿಕ್ಕಮಗಳೂರು: malenadutoday news : ಕೆಎಸ್ಆರ್ಟಿಸಿ ಬಸ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರ ಗೇಟ್ ಬಳಿ ಸಂಭವಿಸಿದೆ.
ಈ ಘಟನೆ ನಿನ್ನೆ ದಿನ ಅಂದರೆ, ಮಂಗಳವಾರ ಮುಂಜಾನೆ ಸಂಭವಿಸಿದ್ದು, ಘಟನೆಯಲ್ಲಿ ಕ್ಯಾಂಟರ್ನ ಚಾಲಕ ಹುಬ್ಬಳ್ಳಿಯ ನಿವಾಸಿ, 30 ವರ್ಷದ ಮೋಹನ್ ಮತ್ತು ಧಾರವಾಡದ 40 ವರ್ಷದ ಕ್ಲೀನರ್ ಮೊಹಮ್ಮದ್ ಆಸಿಫ್ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
