stars predict for your zodiac sign / ಮಲೆನಾಡು ಟುಡೆ ಸುದ್ದಿ / ಪಂಚಾಂಗ/ ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸದ ಚತುರ್ದಶಿ ತಿಥಿಯು ಬೆಳಿಗ್ಗೆ 7.50 ರವರೆಗೆ ಇರಲಿದೆ. ಈ ನಂತರ ಅಮಾವಾಸ್ಯೆ ಆರಂಭವಾಗಲಿದೆ. ಇನ್ನೂ ಪೂರ್ವಭಾದ್ರ ನಕ್ಷತ್ರ ಮುಂಜಾನೆ 5.48 ರವರೆಗೆ, ತದನಂತರ ಉತ್ತರಭಾದ್ರ ನಕ್ಷತ್ರ ವಿರಲಿದೆ. ಅಮೃತ ಗಳಿಗೆ: ರಾತ್ರಿ 9.37 ರಿಂದ 11.11 ರವರೆಗೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ. ಯಮಗಂಡ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
ಮೇಷ / ಒಡನಾಟ ಬೆಳೆಯಲಿದೆ. ವಿಶೇಷ ಮನ್ನಣೆ ದೊರೆಯಲಿದ್ದು, ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ಕೈಗೊಂಡ ಕಾರ್ಯಗಳಲ್ಲಿ ಜಯಶೀಲರಾಗುವಿರಿ. ಹಳೆಯ ಬಾಕಿ ಹಣ ಕೈಸೇರಲಿದೆ. ವ್ಯಾಪಾರ ವಹಿವಾಟು ಚೇತರಿಕೆ ಕಾಣಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವಿರಿ.
ವೃಷಭ / ಮಂಗಳ ಕಾರ್ಯ ನಡೆಯಲಿದೆ. ಹಳೆಯ ಸಾಲ ಮರಳಿ ಬರಲಿವೆ. ದೈವಿಕ ಚಿಂತನೆ. ಪ್ರಮುಖ ಕೆಲಸ ಮುಗಿವುದು, ನಿಗದಿತ ಸಮಯದಲ್ಲಿ ಹೊಸ ವಿಚಾರ ಕೇಳುವುದು. ವ್ಯಾಪಾರ ಹಾಗೂ ಉದ್ಯೋಗ ರಂಗದಲ್ಲಿ ಗಮನಾರ್ಹ ಪ್ರಗತಿ.
ಮಿಥುನ / ಭಿನ್ನಾಭಿಪ್ರಾಯ ತಲೆದೋರಬಹುದು. ಆರ್ಥಿಕ ಮುಗ್ಗಟ್ಟು. ಕೆಲಸ ಮುಂದೂಡುವ ಪರಿಸ್ಥಿತಿ. ಅನಿರೀಕ್ಷಿತ ಪ್ರಯಾಣ, ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರ ವ್ಯವಹಾರ ಸಾಮಾನ್ಯ, ಉದ್ಯೋಗದಲ್ಲಿ ಸಣ್ಣ ಬದಲಾವಣೆ.
ಕರ್ಕಾಟಕ / ಶ್ರಮಕ್ಕೆ ತಕ್ಕ ಪ್ರತಿಫಲ, ಖರ್ಚು ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳತ್ತ ಮನಸ್ಸು ವಾಲಲಿದೆ. ದೈನಂದಿನ ಕೆಲಸಗಳಲ್ಲಿ ಅಲ್ಪ ಅಡೆತಡೆ. ಅನಾರೋಗ್ಯ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಾಮಾನ್ಯ ದಿನ.
ಸಿಂಹ / ಅಂದುಕೊಂಡ ಕೆಲಸ ನಿಗದಿತ ವೇಳೆಗೆ ಮುಕ್ತಾಯಗೊಳ್ಳುವುದು, ಸಮಾಜದಲ್ಲಿ ಗೌರವ ಆದರಗಳು ವೃದ್ಧಿಸಲಿವೆ. ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ, ಉದ್ಯೋಗಿಗಳಿಗೆ ಅನುಕೂಲಕರ ಸಮಯ.
ಕನ್ಯಾ / ಸ್ನೇಹಿತರ ಸಂಪರ್ಕ. ಶುಭ ಸಮಾಚಾರ. ಅಚ್ಚರಿಯ ಘಟನೆ. ಮಹತ್ವದ ಒಪ್ಪಂದ ಏರ್ಪಡಲಿವೆ. ಆಕಸ್ಮಿಕ ಧನಲಾಭದ ಯೋಗ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಆಶಾದಾಯಕ ವಾತಾವರಣ.
ತುಲಾ / ಆರ್ಥಿಕ ಸ್ಥಿತಿ ಆಶಾದಾಯಕವಾಗಿರುವುದಿಲ್ಲ. ಅಲೆದಾಟ ಹಾಗೂ ಶ್ರಮ ಹೆಚ್ಚಾಗಲಿದೆ. ಸಂಬಂಧಿಕರೊಂದಿಗೆ ಮನಸ್ತಾಪ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಒತ್ತಡ
ವೃಶ್ಚಿಕ / ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕುಟುಂಬದ ಸದಸ್ಯರಿಂದ ಹೆಚ್ಚಿನ ಒತ್ತಡ ನಿರ್ಮಾಣವಾಗಲಿದೆ. ದೇವಸ್ಥಾನಗಳಿಗೆ ಭೇಟಿ. ದಿಢೀರ್ ಪ್ರಯಾಣ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಸಾಧಾರಣ ಅಡಚಣೆ.

ಧನುಸ್ಸು / ವಿಶೇಷ ಆಮಂತ್ರಣ ಬರಲಿವೆ. ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ಕೆಲಸ ಯಶಸ್ವಿಯಾಗಲಿವೆ. ನೂತನ ಉದ್ಯೋಗಾವಕಾಶ. ಭೂವಿವಾದ ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ
ಮಕರ / ಕೌಟುಂಬಿಕ ವಲಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರೋಗ್ಯದ ಕಡೆ ಗಮನಹರಿಸುವುದು ಸೂಕ್ತ. ಅತಿಯಾದ ಶ್ರಮ. ಕೆಲಸಕಾರ್ಯಗಳಲ್ಲಿ ಆತುರ ಬೇಡ. ವ್ಯಾಪಾರ ಹಾಗೂ ಉದ್ಯೋಗದ ಸ್ಥಿತಿಗತಿ ಸಾಧಾರಣವಾಗಿರಲಿವೆ.
ಕುಂಭ / ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಶೈಕ್ಷಣಿಕ ಅವಕಾಶ ತೆರೆದುಕೊಳ್ಳಲಿವೆ. ಪ್ರಭಾವಿ ವ್ಯಕ್ತಿಗಳ ಪರಿಚಯ.ಕೆಲಸಗಳು ಚುರುಕಾಗಿ ಸಾಗಲಿದ್ದು, ವ್ಯಾಪಾರ ವಿಸ್ತರಣೆ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ.
ಮೀನ / ಕೆಲಸಗಳನ್ನು ಅನಿವಾರ್ಯವಾಗಿ ಮುಂದೂಡುವಿರಿ. ಆಕಸ್ಮಿಕ ಪ್ರಯಾಣ,. ಅನಾರೋಗ್ಯ. ಸಹೋದರರನ್ನು ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರ ಹಾಗೂ ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು
