ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ಸಪ್ತಮಿ ಬೆಳಿಗ್ಗೆ 9.01 ರವರೆಗೆ ಇದ್ದು ಆನಂತರ ಅಷ್ಟಮಿ ಆರಂಭವಾಗಲಿದೆ. ಉತ್ತರಾಭಾದ್ರ ನಕ್ಷತ್ರ ಭಾನುವಾರ ಬೆಳಿಗ್ಗೆ 5.18 ರವರೆಗೆ ಇರಲಿದ್ದು ನಂತರ ರೇವತಿ ನಕ್ಷತ್ರ ಇರಲಿದೆ. ಅಮೃತ ಘಳಿಗೆ ರಾತ್ರಿ 12.31 ರಿಂದ 2.02 ರವರೆಗೆ ಇರಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ

ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್ ಆಫ್! ಸಿಗದ ಮಾಹಿತಿ
ಇಂದಿನ ರಾಶಿಫಲ
ಮೇಷ : ಶ್ರಮ ಅನಿವಾರ್ಯವಾಗಲಿದ್ದು ಅಂದುಕೊಂಡ ಕೆಲಸ ನಿರೀಕ್ಷೆಯಂತೆ ಸಾಗುವುದಿಲ್ಲ. ಮಾನಸಿಕ ಒತ್ತಡ ಅನಿರೀಕ್ಷಿತವಾಗಿ ದೂರದ ಪ್ರಯಾಣ. ಉದ್ಯೋಗ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಸಾಮಾನ್ಯ ದಿನ
ವೃಷಭ : ನಿರುದ್ಯೋಗಿಗಳಿಗೆ ಇಂದು ಶುಭ ಸುದ್ದಿ ,ಆರ್ಥಿಕವಾಗಿ ಉತ್ತಮ ಪ್ರಗತಿ. ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸೂಕ್ತ ದಿನ. ವ್ಯವಹಾರ ಸುಗಮವಾಗಿ ಸಾಗಲಿವೆ. ಹೊಸ ವ್ಯಕ್ತಿಗಳ ಪರಿಚಯದೊಂದಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿದ್ದ ಅಡೆತಡೆ ದೂರವಾಗಲಿವೆ (Success).
ಮಿಥುನ : ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ಭಾಗವಹಿಸುವ ಅವಕಾಶ ಪಡೆಯುವಿರಿ. ಪ್ರಭಾವಿ ವ್ಯಕ್ತಿಗಳ ಪರಿಚಯ. ಬಾಲ್ಯದ ಗೆಳೆಯರನ್ನು ಭೇಟಿ,ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಿಸುವಿರಿ,

ಶಿವಮೊಗ್ಗಕ್ಕೆ ಹೊಸ ವರ್ಷ ಸಿಗಲಿದೆ ಬಂಪರ್, ಬಂಗಾರ ಪುಣ್ಯಸ್ಮರಣೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಕರ್ಕಾಟಕ : ಕೌಟುಂಬಿಕ ಸಮಸ್ಯೆ, ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ. ಕೆಲಸ ಕಾರ್ಯಗಳಲ್ಲಿ ಅನಗತ್ಯ ವಿಳಂಬ, ಹೊಸಬರನ್ನು ಭೇಟಿಯಾಗುವ ಸಂದರ್ಭ ಬರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು
ಸಿಂಹ :ಸಾಲದ ಪ್ರಯತ್ನ, ಹಠಾತ್ ಪ್ರಯಾಣ. ದೈವಿಕ ಚಿಂತನೆ, ದೇವಾಲಯಗಳಿಗೆ ಭೇಟಿ, ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ , ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಕನ್ಯಾ ; ಧನ ಲಾಭ, ಹೊಸ ವಸ್ತುಗಳ ಸೇರ್ಪಡೆ. ಹಳೆಯ ಸ್ನೇಹಿತರ ಭೇಟಿ, ಮನೆಯಲ್ಲಿ ಮತ್ತು ಹೊರಗಡೆ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ, ವ್ಯಾಪಾರದಲ್ಲಿ ಉತ್ತಮ ಪ್ರಗತಿ
ತುಲಾ : ನೆನಪುಗಳು ಮರುಕಳಿಸಲಿದೆ. ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಬಾಕಿ ಹಣವು ಕೈ ಸೇರಲಿದ್ದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗ ಮತ್ತು ವೃತ್ತಿ ರಂಗದಲ್ಲಿ ನೂತನ ಉತ್ಸಾಹವಿರಲಿದೆ.
ವೃಶ್ಚಿಕ: ಸ್ನೇಹಿತರೊಂದಿಗೆ ವಾದವಿವಾದ. ಆರೋಗ್ಯದ ಸಮಸ್ಯೆ, ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ದೂರದ ಪ್ರಯಾಣ, ಅನಗತ್ಯ ಖರ್ಚು, ವ್ಯಾಪಾರಸ್ಥರಲ್ಲಿ ನಿರುತ್ಸಾಹ, ಉದ್ಯೋಗದಲ್ಲಿ ಕೆಲಸ ಜಾಸ್ತಿ.
ಧನು : ಕೆಲಸದ ಒತ್ತಡ ಮತ್ತು ಶ್ರಮ ಹೆಚ್ಚಾಗಲಿದ್ದು ,ಅಡೆತಡೆಗಳು ಎದುರಾಗಲಿವೆ. ಬಂಧುಗಳೊಂದಿಗೆ ಸಣ್ಣಪುಟ್ಟ ಕಲಹ,ಮಾನಸಿಕವಾಗಿ ಅಸ್ಥಿರತೆ. ವ್ಯಾಪಾರ ಹಾಗೂ ಉದ್ಯೋಗದ ವಿಚಾರದಲ್ಲಿ ಗೊಂದಲಮಯ ವಾತಾವರಣ ಇರಲಿದೆ
ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ, ಕಾರಣವೇನು

ಮಕರ : ಹೊಸ ವ್ಯಕ್ತಿಗಳ ಸ್ನೇಹ, ಶುಭ ಸಮಾಚಾರ. ಆರ್ಥಿಕವಾಗಿ ಸದೃಢ ಹೊಸ ಉದ್ಯೋಗದ ಅವಕಾಶ ಹುಡುಕಿಕೊಂಡು ಬರಲಿವೆ. ಸಮಾಜದಲ್ಲಿ ಗೌರವ ಮತ್ತು ಪ್ರಭಾವ ಹೆಚ್ಚಾಗಲಿದ್ದು , ಈ ದಿನ ಉದ್ಯೋಗ ಮತ್ತು ವ್ಯಾಪಾರವೂ ಅನುಕೂಲಕರವಾಗಿರಲಿದೆ (Opportunity).
ಕುಂಭ : ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳದೆ ಅರ್ಧಕ್ಕೆ ನಿಲ್ಲುವ ಸಾಧ್ಯತೆಯಿದ್ದು ಆರ್ಥಿಕ ಸಂಕಷ್ಟ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ , ಮನಸ್ಸಿಗೆ ಶಾಂತಿ ದೊರೆಯಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು ,ವಹಿವಾಟುಗಳು ಮಂದಗತಿಯಲ್ಲಿ ಸಾಗಲಿವೆ
ಮೀನ : ಹೊಸ ಪರಿಚಯಗ, ಸಂತೋಷದ ಸಮಯ. ಅನಿರೀಕ್ಷಿತವಾಗಿ ಹಣದ ಹರಿವು , ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿದ್ದ ಕಿರಿಕಿರಿ ದೂರವಾಗಿ ನೆಮ್ಮದಿ ಸಿಗಲಿದೆ
ಹಿರಿಯೂರು ಬಸ್ ದುರಂತ: ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮೊಬೈಲ್ ಸ್ವಿಚ್ ಆಫ್! ಸಿಗದ ಮಾಹಿತಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Today Horoscope December 27 2025 Daily Astrology Predictions for All Zodiac




