Today Astrology Predictions in Kannada / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ ಶುಕ್ಲ ಪಕ್ಷದ ದಶಮಿ ತಿಥಿಯು ರಾತ್ರಿ 12.41 ರವರೆಗೆ ಇರಲಿದ್ದು, ತದನಂತರ ಏಕಾದಶಿ ಆರಂಭವಾಗಲಿದೆ. ಮೃಗಶಿರ ನಕ್ಷತ್ರವು ಮಧ್ಯಾಹ್ನ 12.38 ರವರೆಗೆ ಇರಲಿದ್ದು, ಬಳಿಕ ಆರಿದ್ರ ನಕ್ಷತ್ರ ಶುರುವಾಗಲಿದೆ. ಅಮೃತ ಘಳಿಗೆ ರಾತ್ರಿ 1.43 ರಿಂದ 3.13 ರವರೆಗೆ ಇರಲಿದೆ.ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

ದಿನಭವಿಷ್ಯ/Today Astrology Predictions in Kannada
ಮೇಷ / ಗೌರವ ಹೆಚ್ಚಲಿದ್ದು, ಗಣ್ಯ ವ್ಯಕ್ತಿಗಳ ಒಡನಾಟ ಬೆಳೆಯಲಿದೆ. ಆಸ್ತಿ ವಿವಾದ ಬಗೆಹರಿಯಲಿದ್ದು, ಶುಭ ಸುದ್ದಿ ಕೇಳಲಿದ್ದೀರಿ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಡಲಿದ್ದೀರಿ
ವೃಷಭ / ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದ್ದು, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ
ಮಿಥುನ / ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ, ಮನರಂಜನೆಯಲ್ಲಿ ದಿನ ಕಳೆಯಲಿದ್ದೀರಿ. ಅಂದುಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಅಭಿವೃದ್ಧಿ, ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆ.

ಶಿವಮೊಗ್ಗ ,ಸಾಗರದಲ್ಲಿ ಅಡಿಕೆ ದರ ಏರಿಕೆ! ಉಳಿದೆಡೆ ಎಷ್ಟಿದೆ ಗಮನಿಸಿ ಅಡಿಕೆ ರೇಟು!
ಕರ್ಕಾಟಕ / ಆರ್ಥಿಕ ಸಂಕಷ್ಟ, ಪ್ರಯಾಣ ಮುಂದೂಡುವಿರಿ. ಕೆಲಸಗಳಲ್ಲಿ ವಿಘ್ನ ಎದುರಾಗಲಿದ್ದು, ಅನಾರೋಗ್ಯದ ಸಮಸ್ಯೆ. ಪುಣ್ಯಕ್ಷೇತ್ರಗಳಿಗೆ ಭೇಟಿ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈದಿನ ಸಾಧಾರಣವಾಗಿರಲಿದೆ.
ಸಿಂಹ / ಕೌಟುಂಬಿಕ ಸಮಸ್ಯೆ. ಆಪ್ತರ ಸಲಹೆ ಪಡೆದುಕೊಳ್ಳಲಿದ್ದೀರಿ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಉದ್ಯೋಗಿಗಳಲ್ಲಿ ಹೊಸ ಭರವಸೆ.
ಕನ್ಯಾ / ಹೊಸ ವ್ಯಕ್ತಿಗಳ ಸಂಪರ್ಕ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೊಸ ಅವಕಾಶ ಒದಗಿಬರಲಿವೆ. ದೇವಾಲಯಗಳಿಗೆ ಭೇಟಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ.
ತುಲಾ / ಆದಾಯಕ್ಕಿಂತ ಖರ್ಚು ಅಧಿಕವಾಗುವ ಸಾಧ್ಯತೆ ಇದೆ. ಸಂಬಂಧಿಕರೊಂದಿಗೆ ವಿವಾದ ಉಂಟಾಗಲಿದ್ದು, ಆಲೋಚನೆಗಳಲ್ಲಿ ಅಸ್ಥಿರತೆ. ಅನಾರೋಗ್ಯದ ಸಮಸ್ಯೆ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿವೆ.
ವೃಶ್ಚಿಕ / ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಮುಗ್ಗಟ್ಟು ಎದುರಾಗಲಿದ್ದು, ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಬಹುದು. ಆರೋಗ್ಯದಲ್ಲಿ ಏರುಪೇರು, ವ್ಯಾಪಾರ, ಉದ್ಯೋಗದಲ್ಲಿ ಒತ್ತಡ ಜಾಸ್ತಿ ಇರಲಿದೆ.
ಧನುಸ್ಸು / ಆಸ್ತಿ ಲಾಭ, ಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು. ವ್ಯಾಪಾರದಲ್ಲಿ ವೃದ್ಧಿ, ಉದ್ಯೋಗಿಗಳಿಗೆ ಉತ್ತಮ ಮನ್ನಣೆ ದೊರೆಯಲಿದೆ.

ಶಿವಮೊಗ್ಗಕ್ಕೆ ಮಣ್ಣು ಸಾಗಿಸ್ತಿದ್ದಾಗ ಮೇಲೆ ಕೆಳಗಾಗಿ ರಸ್ತೆ ಬದಿ ಬಿದ್ದ ಲಾರಿ!
ಮಕರ / ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಕೆಲಸಕ್ಕೆ ಚಾಲನೆ ನೀಡಲಿದ್ದೀರಿ. ಶುಭವಾರ್ತೆ, ವಾಹನ ಹಾಗೂ ವಸ್ತು ಲಾಭ. ವ್ಯಾಪಾರದಲ್ಲಿ ಉತ್ಸಾಹ, ಉದ್ಯೋಗದಲ್ಲಿ ಪ್ರೋತ್ಸಾಹ.
ಕುಂಭ / ಶ್ರಮ ಹೆಚ್ಚಾಗಲಿದೆ. ಭೂಮಿಗೆ ಸಂಬಂಧಿಸಿದ ವಿವಾದ ಇತ್ಯರ್ಥ. ಆರ್ಥಿಕ ಪರಿಸ್ಥಿತಿಯು ಚೇತರಿಸಿಕೊಳ್ಳಲಿದೆ. ಆರೋಗ್ಯದ ಬಗ್ಗೆ ಎಚ್ಚರ. ವ್ಯಾಪಾರ ಹಾಗೂ ಉದ್ಯೋಗ ಸಾಧಾರಣ ಮಟ್ಟದಲ್ಲಿ ಸಾಗಲಿದೆ.
ಮೀನ / ಸ್ನೇಹಿತರೊಂದಿಗೆ ವಾಗ್ವಾದ. ಅಧಿಕ ಶ್ರಮ, ಕೆಲಸದಲ್ಲಿ ಅಡೆತಡೆ. ಆಧ್ಯಾತ್ಮಿಕ ಚಿಂತನೆ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ನಿಧಾನಗತಿಯಲ್ಲಿ ಸಾಗಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.