ಕೆಎಸ್​ಆರ್​ಟಿಸಿ ಬಸ್​ಗಳನ್ನ ನಡುರಸ್ತೆಯಲ್ಲಿಯೇ ತಡೆದ ವಿದ್ಯಾರ್ಥಿಗಳು !ಕಾರಣ ಇಲ್ಲಿದೆ

The students blocked KSRTC buses and staged a protest, including Kaimara Circle, Holehonnur,

ಕೆಎಸ್​ಆರ್​ಟಿಸಿ ಬಸ್​ಗಳನ್ನ ನಡುರಸ್ತೆಯಲ್ಲಿಯೇ ತಡೆದ ವಿದ್ಯಾರ್ಥಿಗಳು !ಕಾರಣ ಇಲ್ಲಿದೆ
The students blocked KSRTC buses and staged a protest, including Kaimara Circle, Holehonnur,

SHIVAMOGGA  |  Dec 27, 2023  | ಶಿವಮೊಗ್ಗದ ಹೊಳೆಹೊನ್ನೂರು ಕೈಮರ ಸರ್ಕಲ್​ ನಲ್ಲಿ ಇವತ್ತು ವಿದ್ಯಾರ್ಥಿಗಳು ಕೆಎಸ್​ಆರ್​ಟಿಸಿ ಬಸ್ (KSRTC bus) ತಡೆದು ಪ್ರತಿಭಟನೆ ನಡೆಸಿದರು

ಕೆಎಸ್​ಆರ್​ಟಿಸಿ ಬಸ್

ಹೊಳೆಹೊನ್ನೂರು ಮಾರ್ಗದಲ್ಲಿ ಹಾದು ಹೋಗುವ ಸರ್ಕಾರಿ ಬಸ್​ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಇವತ್ತು ಬಸ್​ಗಳನ್ನ ತಡೆದು ಪ್ರತಿಭಟನೆ ನಡೆಸಿದರು. 

READ : ಹೆಲ್ತ್ ಚೆಕಪ್​ ಮಾಡಿಸ್ಕೋಬೇಕು ಅಂತಿದ್ದೀರಾ! ಶಿವಮೊಗ್ಗದಲ್ಲಿ ನಡೆಯುತ್ತಿದೆ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ! ವಿವರ ಇಲ್ಲಿದೆ

ಕೈಮರ ಸರ್ಕಲ್​ನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ವಿದ್ಯಾರ್ಥಿಗಳನ್ನ ಹತ್ತಿಸಿಕೊಳ್ಳುತ್ತಿಲ್ಲ. ಬಸ್​ಗಳನ್ನ ನಿಲ್ಲಿಸದೇ ಮುಂದಕ್ಕೆ ಸಾಗುತ್ತಾರೆ . ಹೀಗಾಗಿ ಕಾಲೇಜಿಗೆ ನಡೆದುಕೊಂಡೇ ಹೋಗಬೇಕಾದ ಸನ್ನಿವೇಶವಿದೆಯೆಂದು ಆರೋಪಿಸಿದ್ದಾರೆ. 

ವಿದ್ಯಾರ್ಥಿಗಳ ಸಮಸ್ಯೆಯನ್ನು ಕೆಎಸ್​​ಆರ್​ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬಂದು ಆಲಿಸಬೇಕು ಎಂದು ಪಟ್ಟು ಹಿಡಿದು ಬಸ್​ಗಳನ್ನು ಮುಂದಕ್ಕೆ ಸಂಚರಿಸಲು ಅವಕಾಶ ನೀಡದೇ ಪ್ರತಿಭಟಿಸಿದರು.