Shivamogga | ಮಧು ಬಂಗಾರಪ್ಪರವರ ನೇತೃತ್ವದ ಕೆಡಿಪಿ ಸಭೆಗೆ ನಾಲ್ಕು ಶಾಸಕರ ಗೈರು!?

Shivamogga | Four MLAs absent from KDP meeting led by Madhu Bangarappa!? Shivamogga | ಮಧು ಬಂಗಾರಪ್ಪರವರ ನೇತೃತ್ವದ ಕೆಡಿಪಿ ಸಭೆಗೆ ನಾಲ್ಕು ಶಾಸಕರ ಗೈರು!?

Shivamogga |  ಮಧು ಬಂಗಾರಪ್ಪರವರ ನೇತೃತ್ವದ ಕೆಡಿಪಿ ಸಭೆಗೆ ನಾಲ್ಕು ಶಾಸಕರ ಗೈರು!?

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS

Shivamogga |  ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ತ್ರೈಮಾಸಿಕ ಕೆಡಿಪಿ ಸಭೆಗೆ ನಾಲ್ವರು ಶಾಸಕರು ಗೈರು ಹಾಜರಾಗಿದ್ದಾರೆ. ಅದರಲ್ಲಿಯು ಮುಖ್ಯವಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್​ರವರ ಗೈರುಹಾಜರಿ ಕುತೂಹಲ ಮೂಡಿಸಿದೆ. 

READ : ಚಿನ್ನ ಅಡಮಾನ ಸಾಲ! ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ! ಬ್ಯಾಂಕ್​ಗೆ ವಂಚಿಸಿದ ಇಬ್ಬರು ಮಹಿಳೆಯರು ಸೇರಿ 6 ಮಂದಿ ವಿರುದ್ಧ ಕೇಸ್

ಇವತ್ತಿನ ಸಭೆಯಲ್ಲಿ  ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್​ ಹಾಜರಾಗಿದ್ದರು. ಅಲ್ಲದೆ ಕ್ಷೇತ್ರದ ಸಮಸ್ಯೆಗಳನ್ನ ಸಭೆಯ ಮುಂದಿಟ್ಟರು.ಆದರೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಗೈರು ಹಾಜರಾಗಿದ್ದರು. ಇವತ್ತು ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಅವರು ನನಗೆ ಸಭೆಗೆ ಆಹ್ವಾನಿಸಿಲ್ಲ ಎಂದಿದ್ದರು. 

ಇನ್ನೂ ಭದ್ರಾವತಿ ಶಾಸಕ ಸಂಗಮೇಶ್​ ಸಹ ಸಭೆಗೆ ಗೈರು ಹಾಜರಾಗಿದ್ದಾರೆ. ಅವರ ಗೈರಿಗೆ ಕಾರಣ ತಿಳಿದುಬಂದಿಲ್ಲವಾದರು ಕಾಂಗ್ರೆಸ್​ ಶಾಸಕರು ಸಚಿವರಿಂದ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಇನ್ನೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಶಿಕಾರಿಪುರ ಶಾಸಕ ವಿಜಯೇಂದ್ರರವರು ಸಹ ಗೈರಾಗಿದ್ದಾರೆ.