ಶಿವಮೊಗ್ಗ: ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧಕ್ಕೆ ಶಿವಮೊಗ್ಗದ ಸಿಗಹಟ್ಟಿ ಬಡಾವಣೆ ಸಾಕ್ಷಿಯಾಗಿದೆ. ತಾನು ಮಗನಂತೆ ಸಾಕಿದ್ದ ಫೈಟರ್ ಕುರಿ ಮೃತಪಟ್ಟಿದ್ದಕ್ಕೆ ಮಣಿ ಎಂಬುವವರು ವಿಶಿಷ್ಟ ರೀತಿಯಲ್ಲಿ ಉತ್ತರಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು
ಕಳೆದ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟ ಈ ಕುರಿಯನ್ನು ಮಣಿ ಮತ್ತು ಅವರ ಸ್ನೇಹಿತರು ಕೇವಲ ಪ್ರಾಣಿಯಂತೆ ನೋಡಿರಲಿಲ್ಲ. ಮನೆಯ ಸದಸ್ಯನಂತೆಯೇ ಅದಕ್ಕೆ ಪ್ರೀತಿ ನೀಡಿದ್ದರು. ಸಾವು ಸಂಭವಿಸಿದಾಗ ಸಕಲ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಿ ಅದರ ಮೇಲಿದ್ದ ಅತೀವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಸಾಮಾನ್ಯವಾಗಿ ತಿಥಿ ಕಾರ್ಯಕ್ರಮಗಳಲ್ಲಿ ನೆಂಟರಿಷ್ಟರಿಗೆ ಊಟ ಹಾಕುವುದು ರೂಢಿ. ಆದರೆ ಮಣಿ ಬಳಗವು ಈ ದಿನವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಂಡಿತು. ಸುಮಾರು 60ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೊಟ್ಟೆತುಂಬಾ ಊಟದ ವ್ಯವಸ್ಥೆ ಮಾಡಲಾಗಿತ್ತು.
ಊಟದ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಆಸರೆಯಾಗುವಂತೆ ನೋಟ್ ಪುಸ್ತಕಗಳು ಮತ್ತು ಪೆನ್ನುಗಳನ್ನು ವಿತರಿಸಲಾಯಿತು.
Shimoga Man Honors Pet Sheep with Book Donation


