ಕೊಲ್ಲೂರಿಗೆ ಕೋಟ್ಯಾಂತರ ಮೌಲ್ಯದ  ವಜ್ರಖಚಿತ ಕಿರೀಟ ಸಮರ್ಪಿಸಿದ ಖ್ಯಾತ ಸಂಗೀತ ನಿರ್ದೇಶಕ

ಹಂಚಿಕೊಳ್ಳಿ
WhatsApp Facebook X Telegram
Kollur temple
Kollur temple

Kollur temple : ಕೊಲ್ಲೂರು: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸ್ವರ ಮಾಂತ್ರಿಕ ಇಳಯರಾಜ ಅವರು, ತಮ್ಮ ಆರಾಧ್ಯ ದೇವತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ₹4 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ವಿವಿಧ ಆಭರಣಗಳನ್ನು ಸಮರ್ಪಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ ಅವರು, ಈ ಹಿಂದೆಯೂ ದೇಗುಲಕ್ಕೆ ಹಲವು ಬಗೆಯ ಆಭರಣಗಳನ್ನು ಅರ್ಪಿಸಿ ತಮ್ಮ ಭಕ್ತಿಭಾವವನ್ನು ತೋರಿದ್ದರು. ಈ ಬಾರಿ ವಜ್ರದ ಕಿರೀಟದ ಜೊತೆಗೆ, ವೀರಭದ್ರ ದೇವರಿಗೂ ರಜತ ಕಿರೀಟ ಮತ್ತು ಖಡ್ಗವನ್ನು ಅರ್ಪಿಸಿದ್ದಾರೆ.

ಆಭರಣಗಳನ್ನು ದೇಗುಲಕ್ಕೆ ಸಮರ್ಪಿಸುವ ಮೊದಲು, ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ಇಳಯರಾಜ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದರು. ಈ ವೇಳೆ ಭಕ್ತಿಪರವಶರಾಗಿದ್ದ ಇಳಯರಾಜ ಅವರು, “ನನ್ನ ಜೀವನದಲ್ಲಿ ಏನೂ ಇರಲಿಲ್ಲ, ಆದರೆ ಮೂಕಾಂಬಿಕೆಯ ಕೃಪೆ ಮತ್ತು ಆಶೀರ್ವಾದದಿಂದ ಪವಾಡಗಳು ನಡೆದಿವೆ. ಎಲ್ಲವೂ ದೈವಿಕ ತಾಯಿಯ ಇಚ್ಛೆಯಂತೆ ನಡೆಯುತ್ತಿದೆ ಎಂದರು.ಈ ಮಹಾದಾನಕ್ಕಾಗಿ ದೇಗುಲದ ವತಿಯಿಂದ ಇಳಯರಾಜ ಅವರಿಗೆ ಗೌರವಾರ್ಪಣೆ ಮಾಡಿ ಕೃತಜ್ಞತೆ ಸಲ್ಲಿಸಲಾಯಿತು. 

Kollur temple

Kollur temple

 

 

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor