ಸಾಗರದಲ್ಲಿ ಭಟ್ಕಳ ಯುವಕರ ಕೈಚಳಕ! ಮೂರು ದಿನದಲ್ಲಿ ಕೇಸ್ ಖಲ್ಲಾಸ್! ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಏನಿದು ಪ್ರಕರಣ?

Bhatkal youth arrested in theft case under Sagar Town police station limits

ಸಾಗರದಲ್ಲಿ ಭಟ್ಕಳ ಯುವಕರ ಕೈಚಳಕ! ಮೂರು ದಿನದಲ್ಲಿ ಕೇಸ್ ಖಲ್ಲಾಸ್! ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಏನಿದು ಪ್ರಕರಣ?

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಟೌನ್ ಪೊಲೀಸರು 24-06-2023 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಕೇವಲ ಒಂದು ವಾರದ ಅವಧಿಯಲ್ಲಿ ಭೇದಿಸಿದ್ದಾರೆ. ಸಾಗರ ಟೌನ್ ನ ತೋಟಗಾರಿಕೆ ಇಲಾಖೆಯ ಹತ್ತಿರವಿರುವ ಮಹಮ್ಮದ್ ರಫೀಕ್ ರವರ ವಾಸದ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರು ವೆಂಟಿಲೇಟರ್ ನ ಕಬ್ಬಿಣದ ಮೆಸ್ ಮುರಿದು ಮನೆಯ ಒಳಗೆ ಬಂದು ಗಾರ್ಡೇಜ್ ಬೀರುವಿನಲ್ಲಿದ್ದ ಕೈ ಗಡಿಯಾರ, ಆಭರಣಗಳನ್ನು ಕದ್ದಿದ್ದರು. ಈ ಸಂಬಂಧ   ಸಾಗರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0145/2023  ಕಲಂ 454, 457, 380 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಸಾಗರ ಟೌನ್​ ಪೊಲೀಸರು ಮೂರು ದಿನಗಳ ಒಳಗಾಗಿ ಆರೋಪಿಗಳನ್ನ ಬಂಧಿಸಿದೆ  

ಬಂಧಿತರು

1) ಮಹಮದ್ ಇಫ್ಜಾಲ್  @ ಇಫ್ಜಾಲ್, 25 ವರ್ಷ, 2 ನೇ ಕ್ರಾಸ್, ಮದೀನಾ ಕಾಲೋನಿ ಭಟ್ಕಳ,  

2) ಯಾಸೀನ್ ಸಾಹೇಬ, 38 ವರ್ಷ, ಶಿರೂರು ಭಟ್ಕಳ 

3) ಮಹಮದ್ ಮುಸಾಧಿಕ್, 33 ವರ್ಷ, ಅಮರ್ ಕಾಲೋನಿ ಹೆಗ್ಗಲ್ ರಸ್ತೆ, ಭಟ್ಕಳ

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ 03 ವಾಚ್, ಆಭರಣಗಳು ಮತ್ತು ಕೃತ್ಯಕ್ಕೆ ಬಳಸಲಾದ ಕಾರು ಸೇರಿ ಅಂದಾಜು ಮೌಲ್ಯ 7,45,729 ರೂಗಳ ಮಾಲನ್ನು ಅಮಾನತ್ತುಪಡಿಸಿಕೊಂಡಿದ್ದಾರೆ. 


ಟ್ರಕ್ಕಿಂಗ್​ಗೆ ಬಂದಿದ್ದ ಯುವಕ ಸಾವು! ನೇತ್ರಾವತಿ ಪೀಕ್​ ಸ್ಪಾಟ್​ನಲ್ಲಿ ನಡೆದಿದ್ದೇನು?

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಟ್ರಕ್ಕಿಂಗ್​ಗೆ ಎಂದು ಬಂದಿದ್ದ ಪ್ರವಾಸಿಗನೊಬ್ಬ ಹೃದಯಘಾತದಿಂದಾಗಿ ಸಾವನ್ನಪ್ಪಿದ್ಧಾನೆ. 27 ವರ್ಷದ ರಕ್ಷಿತ್ ಮೃತ ಯುವಕ. ಮೂಲತಃ ಮೈಸೂರು ಕಡೆಯವರು. ಮೈಸೂರಿನಿಂದ ಒಟ್ಟಾರೆ ಏಳು ಮಂದಿ ಟ್ರಕ್ಕಿಂಗ್​ಗೆ ಅಂತಾ ಚಿಕ್ಕಮಗಳೂರಿಗೆ ಆಗಮನಿಸಿದ್ದರು, ಕುದುರೆ ಮುಖದಿಂದ ನೇತ್ರಾವತಿ ಪೀಕ್ ಸ್ಪಾಟ್​ಗೆ ತೆರಳುತ್ತಿದ್ದರು. ಈ ನಡುವೆ ದಾರಿಯಲ್ಲಿಯೇ ರಕ್ಷಿತ್​ಗೆ ಎದೆನೋವು ಕಾಣಿಸಿದೆ. ತಕ್ಷಣಕ್ಕೆ ಅವರಿಗೆ ಚಿಕಿತ್ಸೆ ನೀಡಲು ಸಹ ಅಲ್ಲಿ ಸಾಧ್ಯವಿರಲಿಲ್ಲ. ಇನ್ನೂ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಕಳಸಕ್ಕೆ ರವಾನೆ ಮಾಡಿದ್ದು, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.