SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 27, 2024
ಶಿವಮೊಗ್ಗ | ದೇಶದ ಆರ್ಥಿಕತೆಯಲ್ಲಿ ಮಹಾನ್ ಶಿಸ್ತನ್ನು ತಂದ ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ನಿಧನರಾಗಿದ್ದು ಮನಸ್ಸಿಗೆ ಬಹಳ ಘಾಸಿಯನ್ನು ಉಂಟು ಮಾಡಿದೆ ಎಂದು ಶಾಸಕ ಎಸ್ಎನ್ ಚೆನ್ನಬಸಪ್ಪ ಸಂತಾಪವನ್ನು ಸೂಚಿಸಿದರು.
ಇಂದು ನಗರದ ಶಾಸಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಇಂದು ಒಂದು ಹೋರಾಟವನ್ನು ಕೈಗೊಂಡಿದ್ದೆವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನದ ಹಿನ್ನೆಲೆ ಆ ಹೋರಾಟವನ್ನು ಮುಂದೂಡಿದ್ದೇವೆ. ಈ ದೇಶಕ್ಕೆ ಬೇಕಾದ ಅನೇಕ ಸಂಗತಿಗಳನ್ನು ಜೋಡಿಸುವ ಅಭಿವೃದ್ಧಿ ಕೆಲಸವನ್ನು ಮನಮೋಹನ್ ಸಿಂಗ್ ಮಾಡಿದ್ದಾರೆ. ಅವರು ನಿಧನ ಹೊಂದಿರುವುದು ನಮ್ಮೆಲ್ಲರ ಮನಸ್ಸಿಗೆ ಬಹಳ ಘಾಸಿಯನ್ನುಂಟು ಮಾಡಿದೆ. ಹಾಗೆಯೇ ದೇಶದ ಆರ್ಥಿಕತೆಯಲ್ಲಿ ಶಿಸ್ತನ್ನು ತಂದ ಮಹಾನ್ ಮೇಧಾವಿಗಳಲ್ಲಿ ಮನಮೋಹನ್ ಸಿಂಗ್ ಒಬ್ಬರಾಗಿದ್ದರು. ಅವರ ಕುಟುಂಬಕ್ಕೆ ಅವರ ನಿಧನದ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದರು.

ಹಾಗೆಯೇ ನಮ್ಮ ಭಾರತೀಯ ಸೇನೆಯ ಐವರು ಯೋಧರು ಜಮ್ಮುಕಾಶ್ಮೀರದ ಪೂಂಚ್ನಲ್ಲಿ ಮತಪಟ್ಟಿದ್ದು, ಅದರಲ್ಲಿ ಮೂರು ಜನ ಕರ್ನಾಟಕದ ಯೋಧರು ಇದ್ದಾರೆ. ಕರ್ನಾಟಕದಿಂದ ಭಾರತ ಸೇನೆಗೆ ಸೇರಿದವರ ಸಂಖ್ಯೆ ಅಗಾಧವಾಗಿದೆ. ಮೃತ ಯೋಧರ ಕುಟುಂಬಕ್ಕೆ ನೋವನ್ನು ತದೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
SUMMARY | Mla Chennabasappa condoled the death of former Prime Minister Manmohan Singh and said that he was deeply hurt by the passing away of Manmohan Singh.
KEYWORDS | Mla Channabasappa, Prime Minister, Manmohan Singh,