SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 19, 2024
ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ಆಗುಂಬೆ ಘಾಟಿಯಲ್ಲಿ ಇವತ್ತು ವಾಹನವೊಂದರ ಕಾರಣಕ್ಕಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದರ ಬ್ರೇಕ್ ಫೆಲ್ ಆಗಿ ವಾಹನ ರಸ್ತೆ ಮಧ್ಯೆಯೇ ನಿಂತು ಬಿಟ್ಟಿತ್ತು. ಹೀಗಾಗಿ ಉಳಿದ ವಾಹನಗಳ ಓಡಾಟಕ್ಕೆ ಅಡ್ಡಿಯಾಗಿತ್ತು. ಶಿವಮೊಗ್ಗ ಕಡೆಯಿಂದ ಉಡುಪಿ ಕಡೆಗೆ ಉಡುಪಿ ಕಡೆಯಿಂದ ಶಿವಮೊಗ್ಗ ಕಡೆಗೆ ವಾಹನಗಳು ಸಂಚರಿಸಲಾಗದೆ ಕಿಲೋಮೀಟರ್ ಉದ್ದದ ವಾಹನಗಳ ಕ್ಯೂ ನಿರ್ಮಾಣವಾಗಿತ್ತು.
ಭದ್ರಾವತಿಯಲ್ಲಿ ಪ್ಲೆಕ್ಸ್ ತೆರವು
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ವಿರೋಧಕ್ಕೆ ಕಾರಣವಾಗಿದ್ದ ಫ್ಲೆಕ್ಸ್, ಟಿಪ್ಪು ಖಡ್ಗವನ್ನ ತೆರವುಗೊಳಿಸಲಾಗಿದೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಫ್ಲೆಕ್ಸ್, ಖಡ್ಗ ಅಳವಡಿಸಲಾಗಿತ್ತು. ಈ ಬಗ್ಗೆ ಕಳೆದ ವರ್ಷವೇ ವಿರೋಧ ವ್ಯಕ್ತವಾಗಿತ್ತು. ಇದೀಗ ಅವುಗಳನ್ನ ಪೊಲೀಸರು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಓಂ ಗಣಪತಿ ಮೆರವಣಿಗೆ ಆರಂಭ
ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಇರದಿದ್ಧಾಗ ಪರ್ಯಾಯ ಗಣಪತಿ ಏನಿಸಿದ್ದ ಓಂ ಗಣಪತಿಯ ಮೆರವಣಿಗೆ ಆರಂಭವಾಗಿದ್ದು, ವಾದ್ಯ ಮೇಳದೊಂದಿಗೆ ಗಣಪತಿ ಸಾಗುತ್ತಿದೆ. ತಹಶೀಲ್ದಾರ್ ಗಿರೀಶ್ ಮೆರವಣಿಗೆಗೆ ಚಾಲನೆ ನೀಡಿದ್ದು ವಿವಿಧ ರಾಜಕೀಯ ಮುಖಂಡರು ಸಹ ಈ ವೇಳೆ ಹಾಜರಿದ್ದರು. ಗಣಪತಿಯು ಅಶೋಕ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಬಿಹೆಚ್ ರಸ್ತೆ, ಕೃಷ್ಣಕೆಫೆ ಮೂಲಕ ಸಾಗಿ ಬಂದು ಬೀಮನ ಮಡುವಲ್ಲಿ ವಿಸರ್ಜನೆಗೊಳ್ಳಲಿದೆ.

ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ