Shivamogga | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸ ಷಷ್ಠಿ ತಿಥಿ ರಾತ್ರಿ 3.57 ರವರೆಗೆ ಇರಲಿದ್ದು, ನಂತರ ಸಪ್ತಮಿ ತಿಥಿ ಆರಂಭವಾಗಲಿದೆ. ಚಿತ್ತಾ ನಕ್ಷತ್ರವು ರಾತ್ರಿ 3.48 ರವರೆಗೆ ಇದ್ದು ತದನಂತರ ಸ್ವಾತಿ ನಕ್ಷತ್ರ ಪ್ರವೇಶಿಸಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರುತ್ತದೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
ಮೇಷ | ಅಂದುಕೊಂಡ ಕೆಲಸ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ, ಸಮಾಜದಲ್ಲಿ ಗೌರವ.ಆಸ್ತಿ ಸಂಬಂಧಿತ ವ್ಯಾಜ್ಯದಿಂದ ಮುಕ್ತಿ ಪಡೆಯುವಿರಿ, ಆರ್ಥಿಕವಾಗಿ ಲಾಭ. ವಿದ್ಯಾಭ್ಯಾಸದ ಅವಕಾಶ ಒದಗಿ ಬರಲಿದ್ದು, ವ್ಯಾಪಾರದಲ್ಲಿ ವೃದ್ಧಿ , ಉದ್ಯೋಗಿಗಳಿಗೆ ಹೊಸ ಅವಕಾಶ ಸಿಗಲಿದೆ.
ವೃಷಭ | ಸಾಲ ಮಾಡುವ ಪ್ರಸಂಗ ಎದುರಾಗಲಿದ್ದು, ದೂರ ಪ್ರಯಾಣ ಬೆಳೆಸಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಹಾಗೂ ಬಂಧುಗಳೊಂದಿಗೆ ಮನಸ್ತಾಪ. ಕೈಗೊಂಡ ಕೆಲಸಗಳಲ್ಲಿ ಅಡೆತಡೆ, ಸ್ನೇಹಿತರಿಂದ ಒತ್ತಡ, ಉದ್ಯೋಗ ಹಾಗೂ ವ್ಯಾಪಾರದಲ್ಲಿಂದು ಸಾಮಾನ್ಯ ದಿನ.

ಮಿಥುನ | ಹಠಾತ್ ಪ್ರಯಾಣ, ಅಸ್ವಸ್ಥತೆ ಕಾಡಬಹುದು. ಕೆಲಸಗಳನ್ನು ಮುಂದೂಡುವ ಸಾಧ್ಯತೆ, ಉದ್ಯೋಗಕ್ಕಾಗಿ ಪ್ರಯತ್ನ. ಕಷ್ಟಪಟ್ಟು ದುಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗದ ಭಾವನೆ, ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಗೊಂದಲದ ವಾತಾವರಣ.
ಕರ್ಕಾಟಕ | ವರ್ಚಸ್ಸು ಹೆಚ್ಚಾಗಲಿದ್ದು, ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ. ಬಾಲ್ಯ ಸ್ನೇಹಿತರ ಭೇಟಿ, ಔತಣಕೂಟಗಳಲ್ಲಿ ಪಾಲ್ಗೊಳ್ಲುವಿರಿ. ವ್ಯಾಪಾರ ಚಟುವಟಿಕೆ ಚೇತರಿಸಿಕೊಳ್ಳಲಿದ್ದು, ಉದ್ಯೋಗಸ್ಥರಿಗೆ ಬದಲಾವಣೆ ನಿರೀಕ್ಷೆ ದೇವಾಲಯಗಳಿಗೆ ಭೇಟಿ
ಸಿಂಹ | ಸ್ನೇಹಿತರೊಂದಿಗೆ ಜಗಳ, ಸಾಲಕ್ಕಾಗಿ ಪ್ರಯತ್ನ. ಆಲೋಚನೆ ಸ್ಥಿರವಾಗಿರುವುದಿಲ್ಲ , ಕುಟುಂಬದಲ್ಲಿ ಆಂತರಿಕ ಸಮಸ್ಯೆ. ಆರೋಗ್ಯದಲ್ಲಿ ಸಮಸ್ಯೆ ಹಾಗೂ ವಿದ್ಯಾರ್ಥಿಗಳಿಗೆ ನಿರಾಸೆ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಧಾರಣ.
ಕನ್ಯಾ | ಹೊಸ ವ್ಯಕ್ತಿಗಳ ಪರಿಚಯ,ಶುಭ ಸುದ್ದಿಗಳನ್ನು ಕೇಳಲಿದ್ದಾರೆ. ಆಸ್ತಿ ಲಾಭ, ಹಳೆಯ ಘಟನೆ ಮರುಕಳಿಸಲಿವೆ. ಸಹೋದರರೊಂದಿಗೆ ಉತ್ತಮ ಬಾಂಧವ್ಯ, ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗಿಗಳಿಗೆ ಬಡ್ತಿ.
ತುಲಾ | ಭಿನ್ನಾಭಿಪ್ರಾಯ ಎದುರಾಗಬಹುದು, ಹಣಕಾಸಿನ ಮುಗ್ಗಟ್ಟು. ಹಠಾತ್ ಪ್ರಯಾಣ ಎದುರಾಗಲಿದ್ದು, ಮನೆಯ ಒಳಗೆ ಮತ್ತು ಹೊರಗೆ ಒತ್ತಡದ ಪರಿಸ್ಥಿತಿ ಇರುತ್ತದೆ. ಪುಣ್ಯಕ್ಷೇತ್ರಗಳ ದರ್ಶನ, ವ್ಯಾಪಾರದಲ್ಲಿ ಏರಿಳಿತ ಹಾಗೂ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ.
ವೃಶ್ಚಿಕ | ಶುಭ ವರ್ತಮಾನ ಬರಲಿದೆ. ಆರೋಗ್ಯ ಸುಧಾರಿಸಲಿದ್ದು, ಬಹುದಿನದ ಕೆಲವು ವಿವಾದ ಇತ್ಯರ್ಥವಾಗಲಿವೆ. ದೈವ ದರ್ಶನ. ಉದ್ಯೋಗ ಮತ್ತು ವ್ಯಾಪಾರ ಅಡೆತಡೆ ಇಲ್ಲದೆ ಸರಾಗವಾಗಿ ಸಾಗಲಿವೆ.
ಧನು | ಆರ್ಥಿಕವಾಗಿ ಲಾಭವಾಗಲಿದೆ.. ಔತಣಕೂಟ ಹಾಗೂ ಮನರಂಜನೆಯಲ್ಲಿ ದಿನ ಕಳೆಯವರು, ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗಿಗಳಿಗೆ ಪದೋನ್ನತಿ ಅಥವಾ ಉನ್ನತ ಸ್ಥಾನಮಾನ ದೊರೆಯಲಿದೆ.
ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
ಮಕರ | ಸಾಲಕ್ಕಾಗಿ ಯತ್ನ, ಅನಿರೀಕ್ಷಿತ ಪ್ರಯಾಣ. ಕುಟುಂಬದಲ್ಲಿ ಸಮಸ್ಯೆ ಹಾಗೂ ಅನಾರೋಗ್ಯ, ಸ್ನೇಹಿತರೊಂದಿಗೆ ಕಲಹ. ಉದ್ಯೋಗಕ್ಕಾಗಿ ಪ್ರಯತ್ನ, ಉದ್ಯೊಗ ಹಾಗೂ ವ್ಯಾಪಾರ ಸಾಧಾರಣ.
ಕುಂಭ | ಕೆಲಸ ಕಾರ್ಯಗಳಲ್ಲಿ ವಿಳಂಬ, ಹಣಕಾಸಿನ ತೊಂದರೆ. ದೂರ ಪ್ರಯಾಣದ ಸುಸ್ತು, ಕುಟುಂಬದಲ್ಲಿ ಕಿರಿಕಿರಿ ಹಾಗೂ ಅಧ್ಯಾತ್ಮದ ಕಡೆಗೆ ಒಲವು. ಸಮಸ್ಯೆಗಳನ್ನು ಎದುರಿಸಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರುಪೇರುಗಳನ್ನು ಕಾಣಲಿದ್ದಾರೆ.

ಮೀನ | ದೂರ ಸಂಬಂಧಿಗಳ ಭೇಟಿಯಾಗಲಿದ್ದು, ಔತಣಕೂಟಗಳಲ್ಲಿ ಭಾಗವಹಿಸಲಿದ್ದಾರೆ. ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ದೇವಾಲಯಗಳಿಗೆ ಭೇಟಿ, ಹೊಸ ಉದ್ಯೋಗ, ವಹಿವಾಟಲ್ಲಿ ಲಾಭದ ದಿನ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Daily Horoscope Panchanga 07-02-2026 : Financial Gain for Aries, Promotion for Virgo Today Astrology ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಧನಲಾಭ! ಉದ್ಯೋಗದಲ್ಲಿ ಬಡ್ತಿ! ಜಾಗ್ರತೆಯ ವಿಷಯವೂ ಇದೆ.

