SHIVAMOGGA | Jan 12, 2024 | ಶಿವಮೊಗ್ಗ ನಗರದ ಫ್ರೀಡಂಪಾರ್ಕ್ನಲ್ಲಿ ಯುವನಿಧಿ ಯೋಜನೆ ಕಾರ್ಯಕ್ರಮ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಂ ಡಿಕೆ ಶಿವಕುಮಾರ್ ರವರ ಆಗಮನದೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಸಾವಿರಾರು ಜನರು ವಿದ್ಯಾರ್ಥಿಗಳು ಯುವಕರು ಫ್ರೀಡಂಪಾರ್ಕ್ನಲ್ಲಿ ಜಮಾಯಿಸಿದ್ದು, ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಇನ್ನೂ ಕಾರ್ಯಕ್ರಮದ ಆರಂಭ ನಾಡಗೀತೆಯೊಂದಿಗೆ ಪ್ರಾರಂಭಗೊಂಡಿತು. ಇದಕ್ಕೂ ಮೊದಲು ವೇದಿಕೆ ಏರಿ ಬಂದ ಸಿಎಂ ಸಿದ್ದರಾಮಯ್ಯ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಚೆನ್ನಬಸಪ್ಪರವರು ಮತ್ತು ಡಿಎಸ್ ಅರುಣ್ರವರ ಸನ್ಮಾನವನ್ನು ಸ್ವೀಕರಿಸಿದರು.
ಬಳಿಕ ಬಂದ ಡಿಸಿಎಂ ಡಿಕೆಶಿವಕುಮಾರ್ ರವರು ಸಹ ಜನಸ್ತೋಮಕ್ಕೆ ಕೈಮುಗಿದು ಸಿದ್ದರಾಮಯ್ಯರ ಬಳಿಯಲ್ಲಿ ಆಸೀನರಾದರು. ಅವರಿಗೂ ಬಿಜೆಪಿ ಜನಪ್ರತಿನಿಧಿಗಳು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಇನ್ನೂ ಸ್ವಾಗತ ಭಾಷಣವನ್ನು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ನಡೆಸಿಕೊಟ್ಟರು
ಮಧು ಬಂಗಾರಪ್ಪರವರು ಮಾತನಾಡಿ ಫ್ರೀಡಂಪಾರ್ಕ್ಗೆ ಅಲ್ಲಮಪ್ರಭುರವರ ಹೆಸರನ್ನ ಇಡಬೇಕು ಎಂದುಸಿಎಂ ಬಳಿ ಮನವಿ ಮಾಡಿದರು. ಈ ಬಳಿಕ ತೆಂಗಿನ ಹಿಂಗಾರವನ್ನ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.
