ಕುವೆಂಪು ವಿವಿಯಿಂದಲೇ ಆಯ್ತಾ ಯಡವಟ್ಟು!? ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದೇಕೆ?

SHIVAMOGGA NEWS / ONLINE / Malenadu today/ Nov 23, 2023 NEWS KANNADA

Shivamogga  |  Malnenadutoday.com |  ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದುವರೆ ತಿಂಗಳು ಕಳೆದರೂ, ಶಿವಮೊಗ್ಗ ಪ್ರತಿಷ್ಟಿತ  ಸಹ್ಯಾದ್ರಿ ಕಾಲೇಜಿನಲ್ಲಿ ಇನ್ನೂ ವಿದ್ಯಾರ್ಥಿಗಳಿಗೆ ಪಾಠಗಳು ಆರಂಭವಾಗಿಲ್ಲ. ಕಾರಣ ಏನು ಗೊತ್ತಾ? ಇದುವರೆಗೂ  ಅತಿಥಿ ಉಪನ್ಯಾಸಕರ ನೇಮಕವಾಗದೇ ಇರುವುದು . ಈ ಸಂಬಂಧ ಇವತ್ತು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. 

READ: ನವೆಂಬರ್ 25 ರಂದು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ?

2020-.2023ರ ಶೈಕ್ಷಣಿಕ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯದ ಡಿಗ್ರಿ ಕಾಲೇಜುಗಳ ಬಿ.ಎ/ಬಿ.ಎಸ್ಸಿ/ ಬಿ.ಕಾಂ(ಸ್ನಾತಕ) ತರಗತಿಗಳು ಆಗಸ್ಟ್ 23ಕ್ಕೆ ಮುಗಿದಿದೆ.  ಸೆಪ್ಟೆಂಬರ್ 23ರವರೆಗೆ ಪರೀಕ್ಷಾ ಕಾರ್ಯಗಳು ಸೇರಿದಂತೆ  ಎಲ್ಲಾ ಕಾರ್ಯಗಳಿಗೆ  ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆದು . ಸೆಪ್ಟೆಂಬರ್ 23ಕ್ಕೆ ಅವರನ್ನು  ರಿಲಿವ್ ಮಾಡಲಾಗಿದೆ.

ಈಗ 2022 -23ನೇ ಸಾಲಿನ ಶೈಕ್ಷಣಿಕ ಅವಧಿ ಮುಗಿದು 2023-2024ನೇ ಸಾಲಿಗೆ  ವಿದ್ಯಾರ್ಥಿ ಗಳು  ಪ್ರವೇಶ ಪಡೆದು  ಅವರಿಗೆ  ಸೆಪ್ಟೆಂಬರ್​ 19 ರಿಂದ ತರಗತಿಗಳು ಆರಂಭವಾಗಿವೆ.  ಇವರಿಗೆ  ಉಪನ್ಯಾಸ  ಮಾಡಬೇಕಾಗಿದ್ದ  ಖಾಯಂ ಅಧ್ಯಾಪಕರು ಮೌಲ್ಯಮಾಪನ ಕಾರ್ಯಕ್ಕೆ ಹೋಗಿದ್ದು  ಅಕ್ಟೊಂಬರ್ 20ಕ್ಕೆ ಬಂದಿದ್ದಾರೆ. ಅಂದರೆ  ಈ ನಡುವಿನ ಒಂದು ತಿಂಗಳು   ವಿದ್ಯಾರ್ಥಿಗಳಿಗೆ  ಪಾಠ ಪ್ರವಚನ  ನಡೆದಿಲ್ಲ. ಇದರ ನಡುವೆ ಬಂದ ಹಬ್ಬದ ರಜೆಗಳು  ಬೆರೆ   ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿವರಿಗೆ ಒಟ್ಟು 50 ದಿನಗಳಷ್ಟು ಪೂರ್ಣವಾಗಿ  ತರಗತಿಗಳು  ನಡೆದಿಲ್ಲ. ಇದರಿಂದ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.

READ :ಶಿವಮೊಗ್ಗ ಟು ಸಿಂಗಾಪುರಕ್ಕೆ ವಿಮಾನ? ಮಾರ್ಚ್ 24 ರ ನಂತರ ಇದೆಯಂತೆ ಬದಲಾವಣೆ! ಏನಿದು ವಿಷಯ!

3 ನೇ ಸೆಮ್  ಮತ್ತು 5ನೇ ಸೆಮ್ ವಿದ್ಯಾರ್ಥಿಗಳಿಗೆ  ಸೆಪ್ಟಂಬರ್ 5ಕ್ಕೆ ತರಗತಿಗಳು ಆರಂಭವಾಗಿವೆ ಆದರೆ ಇಲ್ಲಿವರೆಗೆ  ಅವರಿಗೂ ಸಹ ಉಪನ್ಯಾಸ  ನಡೆದಿರುವುದಿಲ್ಲ. ನಿಯಾಮವಳಿಯಂತೆ   8 ವಾರಕ್ಕೆ   ಕಿರು ಪರೀಕ್ಷೆ ನಡೆಯಬೇಕು. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳು ನವಂಬರ್ 15  ರಿಂದ ಕಿರು ಪರೀಕ್ಷೆ ಆಯೋಜಿಸುತ್ತಿವೆ. ಆದರೆ ಇಲ್ಲಿ ಏನೂ ಸಹ ನಡೆದಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು

READ : ಸೋಲಾರ್ ಪವರ್​ನಿಂದಲೂ ಹುಲ್ಲು ಕಟಾವ್ ಮಾಡಬಹುದು! ಹೊಸನಗರ ಹುಡುಗನ ಹೊಸ ಆವಿಷ್ಕಾರ!

2023-2024 ರ ಶೈಕ್ಷಣಿಕ ಸಾಲಿಗೆ ಆಕ್ಟೊಂಬರ್ 27ಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಪಡೆಯಲಾಗಿದೆ. ಅರ್ಜಿಗಳನ್ನು  ಪಡೆದು ಇಷ್ಟು ದಿನಗಳಾದ್ರೂ   ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲು  ಮುಂದಾಗುತ್ತಿಲ್ಲಾ ಕುವೆಂಪು ವಿವಿಯ ಆಡಳಿತ ಮಂಡಳಿ.  ಕುಲಪತಿಗಳ ನೇಮಕವಂತು ಆಗಿಲ್ಲಾ ಹಂಗಾಮಿ ಇರುವವರು, ಮತ್ತು  ಹಂಗಾಮಿ ರಿಜಿಸ್ಟರ್   ಈ ವಿಷಯಗಳನ್ನು  ಗಂಬೀರವಾಗಿ ಪರಿಗಣಿಸದೆ  ಇರುವುದು  ದುರಂತ.   ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಕೂಡಲೆ ಮದ್ಯ ಪ್ರವೇಶಿಸಬೇಕು,  ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು  ವಿವಿಗೆ ನಿರ್ದೇಶನ ನೀಡಬೇಕಿದೆ


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು