ks eshwarappa : ಕಾಂಗ್ರೆಸ್​ನಲ್ಲಿ ಮೂರು ಜನರಿಗೆ ಬುದ್ದಿ ಭ್ರಮಣೆ ಆಗಿದೆ | ಕೆ ಎಸ್​ ಈಶ್ವರಪ್ಪ

This Article Written by / Prathapa thirthahalli / ಮೇ 21, 2025

ks eshwarappa :

ks eshwarappa : ಕಾಂಗ್ರೆಸ್​ನಲ್ಲಿ ಮೂರು ಜನರಿಗೆ ಬುದ್ದಿ ಭ್ರಮಣೆ ಆಗಿದೆ | ಕೆ ಎಸ್​ ಈಶ್ವರಪ್ಪ

ks eshwarappa : ಮಲ್ಲಿಕಾರ್ಜುನ್​ ಖರ್ಗೆ ಭಾಷಣದ ವೇಳೆ ನಮ್ಮ ಪಾಕಿಸ್ತಾನ ಎಂದು  ಹೇಳಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಇಂದು ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ ಸರ್ಕಾರದಲ್ಲಿ ಮೂರು ಜನಕ್ಕೆ ಬುದ್ದಿ ಭ್ರಮಣೆ ಆಗಿದೆ. ದೇಶದಲ್ಲಿ ಆಪರೇಷನ್​ ಸಿಂಧೂರ ನಡೆಯುತ್ತಿದ್ದಾಗ ಸಿದ್ದರಾಮಯ್ಯರವರು ಯುದ್ದ ಯಾಕೇ ಮಾಡಬೇಕು ಎಂದರು. ನಂತರ ಅವರೇ ಸಿಂಧೂರ ಹಾಕಿಕೊಂಡು ಬಂದು ಯುದ್ದದ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದರು. ಸಿಎಂ ಸಿದ್ದರಾಮಯ್ಯನವರಿಗೆ ಈಗ ಬುದ್ದಿ ಬಂದಿದೆ. ಎರಡನೇಯದಾಗಿ ಪ್ರಿಯಾಂಕ್​ ಖರ್ಗೆಯವರಿಗೂ ಬುದ್ದಿಭ್ರಮಣೆ ಆದಂತಿದೆ ಯಾವಾಗ ಏನು ಮಾತನಾಡುತ್ತಾರೋ ಅವರಿಗೇ ಗೊತ್ತಿಲ್ಲ. ಇವರೊಂದಿಗೆ ಕೊತ್ತೂರು ಮಂಜುನಾಥ್,ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಸೇರಿದಂತೆ ಅನೇಕರು ಸೇರಿಕೊಂಡಿದ್ದಾರೆ. ಕೊನೆಯದಾಗಿ ಮಲ್ಲಿಕಾರ್ಜುನ್​ ಖರ್ಗೆಯವರಿಗೂ ಬುದ್ದಿ  ಬುದ್ದಿ ಭ್ರಮಣೆ  ಆಗಿದ್ದು ಮೊದಲು ಯದ್ದದ ಸಂದರ್ಭದಲ್ಲಿ ಬೆಂಬಲ ಘೋಷಿಸಿದ್ದ ಅವರು ಈಗ ಏನೇನೋ ಮಾತನಾಡುತ್ತಾರೆ. ಪ್ರಪಂಚವೇ ಮೋದಿಯವರ ಪರವಾಗಿದೆ ಈ ಸಂದರ್ಭದಲ್ಲಿ ಇವರು ಈ ಹೇಳಿಕೆ ನೀಡುತ್ತಾರೆ. ಮುಂದೆ ಇವರೆಲ್ಲರು ಸರಿ ಆಗೇ ಆಗುತ್ತಾರೆ. ಭಾರತ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಮಾತನಾಡುವವರಿಗೆ ಗುಂಡಿಟ್ಟು ಹೊಡೆಯುವ ಕಾನೂನು ತರಬೇಕು ಎಂದರು.

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ks eshwarappa

ಮುಂದಿನ ಸುದ್ದಿ ಒದಿ

Leave a Comment