ಶಿವಮೊಗ್ಗದಲ್ಲೊಂದು ಗುತ್ತಿಗೆದಾರನ ಪ್ರಕರಣ | ಕೆಲಸದ ದುಡ್ಡು ರಿಲೀಸ್‌ ಮಾಡೋಕೆ ಲಂಚ | ಶಾಕ್‌ ಕೊಟ್ಟ ಲೋಕಾಯುಕ್ತ

This Article Written by / 13 / ಜನವರಿ 2, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 2, 2025 ‌‌ 

ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಹೊಸ ವರುಷದ ದಿನವೇ ಅಧಿಕಾರಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಟ್ರ್ಯಾಪ್‌ ಕಾರ್ಯಾಚರಣೆಯಲ್ಲಿ ಒಂದು ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರನ್ನ ಲೋಕಾಯುಕ್ತ ಪೊಲೀಸರು ಬಂದಿಸಿದ್ದಾರೆ. 

ಏನಿದು ಕೇಸ್‌ 

ಭದ್ರಾವತಿ ಗೊಂದಿ ಬಲದಂಡೆ ನಾಲೆ ಕಾಮಗಾರಿಗೆ ಸಂಬಂಧ ಇ-ಟೆಂಡ‌ರ್ ವಿಚಾರದಲ್ಲಿ ಕಾಮಗಾರಿ ಬಿಲ್ ಮಂಜೂರು ಮಾಡಲು ಗುತ್ತಿಗೆದಾರನಿಂದ ಕಂಪ್ಯೂಟರ್ ಆಪರೇಟರ್ ಮತ್ತು ಸೆಕ್ಷನ್ ಆಫೀಸರ್ ಲಂಚ ಕೇಳಿದ್ದರಂತೆ.ಇದೇ ಕಾರಣಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ 

ಕರ್ನಾಟಕ ನೀರಾವರಿ ನಿಗಮ ಭದ್ರಾಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿ ಯ ಗೊಂದಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್‌ ಕರೆಯಲಾಗಿತ್ತು. ಇದರಲ್ಲಿ ಲೋಕೋಪಯೋಗಿ ದ್ವಿತೀಯ ದರ್ಜೆ ಗುತ್ತಿಗೆದಾರ ರವಿ ಇ- ಟೆಂಡ‌ರ್ ಪಡೆದಿದ್ದರು.  ಕಾಮಗಾರಿ ಮೊತ್ತ 9,16,999 ರೂಪಾಯಿ. 2024ನೇ ಜನವರಿಯಲ್ಲಿಯೇ ಕಾಮಗಾರಿ ಮುಗಿದಿದೆ. ಆದರೆ ಬಿಲ್ ಮಂಜೂರಾಗಿಲ್ಲ. ಈ ಕಾರಣಕ್ಕೆ ಕಚೇರಿಗೆ ರವಿ ಅಲೆದಾಡುತ್ತಿದ್ದರು. 

ಕಳೆದ ಡಿಸೆಂಬರ್‌ 27ರಂದು ಡಿ.ಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಗಮದ ಕಛೇರಿಯಲ್ಲಿದ್ದ ಸೆಕ್ಸನ್ ಆಫೀಸರ್‌ಟಿ. ಕೊಟ್ರಪ್ಪರನ್ನು ಭೇಟಿ ಮಾಡಿ, ತಮ್ಮ ಕಾಮಗಾರಿ ಬಿಲ್ ಮಂಜೂರಿಗೆ ರವಿ ಕೇಳಿದ್ದಾರೆ. ಕೊಟ್ರಪ್ಪ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ 

ಕೊಟ್ರಪ್ಪ ಹಾಗೂ ಕಂಪ್ಯೂಟರ್ ಆಪರೇಟರ್ ಅರವಿಂದ್ 1,20,000 ರೂಪಾಯಿ ಕೊಟ್ಟರೆ ಬಿಲ್‌ ಸ್ಯಾಕ್ಷನ್‌ ಮಾಡುವುದಾಗಿ ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಬೇಸತ್ತ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಲೋಕಾಯುಕ್ತ  ಪೊಲೀಸ್ ಅಧೀಕ್ಷಕ ಎಂ.ಎಚ್ ಮಂಜುನಾಥ ಚೌದರಿ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಲೋಕಾಯುಕ್ತ ಪೊಲೀಸ್ ಠಾಣೆ ನಿರೀಕ್ಷಕ ವೀರಬಸಪ್ಪ.ಎಲ್.ಕುಸ ಲಾಪುರ, ಎಚ್.ಎಸ್ ಸುರೇಶ್, ಪ್ರಕಾಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಎಂ. ಮಂಜುನಾಥ್, ಪ್ರಶಾಂತ್, ಚೆನ್ನೇಶ್, ಅರುಣ್ ಕುಮಾ‌ರ್, ದೇವರಾಜ್, ಪ್ರಕಾಶ್, ಆದರ್ಶ, ಎನ್. ಪುಟ್ಟಮ್ಮ.. ಅಂಜಲಿ, ಗಂಗಾಧರ ಮತ್ತು ಪ್ರದೀಪ್ ಈ ಕಾರ್ಯಾಚರಣೆಯಲ್ಲಿದ್ದರು

SUMMARY |  Two officials suspended for demanding bribe from contractors

KEY WORDS |   Shivamogga Lokayukta, Bhadra Project, Karnataka Irrigation Corporation, Lokayukta Police, Shivamogga

ಮುಂದಿನ ಸುದ್ದಿ ಒದಿ

Leave a Comment