SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 7, 2025

ಬೆಂಗಳೂರು | ಬ್ಯಾಂಕ್ಗೆ 3.5 ಕೋಟಿ ರೂಪಾಯಿಗಳಷ್ಟು ಹಣವನ್ನು ವಂಚನೆ ಮಾಡಿರುವ ಆರೋಪದಲ್ಲಿ ಬಿಜೆಪಿಯ ಮಾಜಿ ಶಾಸಕ ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಮ್ಯಾನೇಜರ್ ಸೇರಿದಂತೆ ಮೂವರನ್ನು ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಪ್ಪಿತಸ್ಥರೆಂದು ತೀರ್ಪುನೀಡಿದೆ.
ಅಷ್ಟೇ ಅಲ್ಲದೆ ಮೂವರಿಗೂ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 4.2 ಲಕ್ಷ ದಂಡ ವಿಧಿಸಲಾಗಿದೆ. ಹಾಗೆಯೇ ಬ್ಯಾಂಕ್ಗೆ ವಂಚಿಸಿ ಫೋರ್ಜರಿ ಮಾಡಿದ್ದಕ್ಕಾಗಿ ಕೃಷ್ಣಯ್ಯ ಶೆಟ್ಟಿ ಮತ್ತು ವ್ಯವಸ್ಥಾಪಕ ಎಂಟಿವಿ ರೆಡ್ಡಿ ಅವರಿಗೆ ಹೆಚ್ಚುವರಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ
1993ರಲ್ಲಿ ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕೆ ಜಿ ರೋಡ್ ಶಾಖೆಯಿಂದ ನಕಲಿ ವೇತನ ಪ್ರಮಾಣ ಪತ್ರಗಳನ್ನು ಬಳಸಿ ಸುಮಾರು 7.2 ಕೋಟಿ ರೂ.ಗಳ ಸಾಲ ಪಡೆದು ವಂಚನೆ ಎಸಗಿದ ಆರೋಪ ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಮತ್ತಿತರರ ಮೇಲಿತ್ತು. ಆ 7.2 ಕೋಟಿ ಹಣದಲ್ಲಿ ಎಸ್ ಎನ್ ಕೃಷ್ಣಯ್ಯ ಸೆಟ್ಟಿ ಸ್ವಲ್ಪಮಟ್ಟಿಗೆ ಬ್ಯಾಂಕ್ಗೆ ತೀರಿಸಿದ್ದರು. ಆದರೆ ಬಾಕಿ ಉಳಿದಿರುವ 3.5 ಕೋಟಿ ರೂಪಾಯಿ ತೀರಿಸಿರಲಿಲ್ಲ. ಈ ಕೇಸ್ನ್ನು 2008ರಲ್ಲಿ ಸಿಬಿಐ ಕೈಗೆತ್ತಿಕೊಂಡಿತ್ತು.
SUMMARY | A special court for elected representatives in the city has convicted three persons, including former BJP MLA S N Krishnaiah Shetty and a State Bank of Mysore (now State Bank of India) manager, for allegedly duping a bank of Rs 3.5 crore.
KEYWORDS | Krishnaiah Shetty, BJP MLA, fraud,