ಡಿಕ್ಕಿ ಹೊಡೆದು ಬೈಕನ್ನು ಎಳೆದೊಯ್ದ ಕಾರು : ವೈದ್ಯರಿಗೆ ಥಳಿಸಿದ ಸ್ಥಳೀಯರು

prathapa thirthahalli
Prathapa thirthahalli - content producer

Shivamogga news today :  ಕಾರು ಚಾಲನೆ ಮಾಡುತ್ತಿದ್ದ ವೈದ್ಯರೊಬ್ಬರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ವಾಹನವನ್ನು ಎಳೆದೊಯ್ದ ಘಟನೆ ಶಿವಮೊಗ್ಗ ನಗರದ ಉಷಾ ನರ್ಸಿಂಗ್​ ಹೋಂ ಬಳಿ  ನಡೆದಿದೆ. ಈ ಹಿನ್ನೆಲೆ ಘಟನೆ ನಂತರ ರೊಚ್ಚಿಗೆದ್ದ ಜನ ವೈದ್ಯರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Shivamogga news today ಹೇಗಾಯ್ತು ಘಟನೆ

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಬೈಕ್‌ ಕಾರಿನ ಅಡಿಗೆ ಸಿಲುಕಿತ್ತು. ಆದರೂ ಕಾರು ಚಾಲಕ ನಿಲ್ಲಿಸದೆ, ಬೈಕ್‌ ಅನ್ನು ಹಾಗೆಯೇ ಸ್ವಲ್ಪ ದೂರದವರೆಗೆ ಎಳೆದೊಯ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಡ್ಡಾದಿಡ್ಡಿಯಾಗಿ ಚಲಿಸಿದ ಕಾರು ಕೊನೆಗೆ ಕಮಲಾ ನರ್ಸಿಂಗ್‌ ಹೋಂ ಮುಂಭಾಗದ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಈ ಸಂದರ್ಭದಲ್ಲಿ ಜಮಾಯಿಸಿದ ಸಾರ್ವಜನಿಕರು ಆಕ್ರೋಶಗೊಂಡು ಕಾರು ಚಲಾಯಿಸುತ್ತಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋಪಗೊಂಡ ಜನ ಕಾರಿನ ಬಾನೆಟ್‌ ಮೇಲೆ ಹತ್ತಿ ಒದ್ದು ಗಾಜು ಪುಡಿಮಾಡಿದ್ದರೆ. ಕೆಲವರು  ವೈದ್ಯರಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಸಾರ್ವಜನಿಕರು ವೈದ್ಯರನ್ನು ಪೂರ್ವ ಸಂಚಾರ ಪೊಲೀಸ್‌ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Shivamogga news today

Malenadu Today

Share This Article