Sakrebailu Elephant Camp / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್ಒಪಿ ರಚಿಸುವ ಕಾರಣಕ್ಕೆ ಬಂದ್ ಆಗಿದ್ದ ಶಿವಮೊಗ್ಗ ದ ಸಕ್ರೆಬೈಲ್ ಆನೆ ಬಿಡಾರ ಸದ್ಯದಲ್ಲಿಯೇ ಮತ್ತೆ ಓಪನ್ ಆಗಲಿದೆ. ಈ ಸಂಬಂಧ ಸ್ಟೇಟ್ ಪೇಪರ್ ಒಂದು ಮಾಹಿತಿ ಪ್ರಕಟಿಸಿದ್ದು, ಆ ಮಾಹಿತಿ ಪ್ರಕಾರ, ಇದೇ ಮುಂದಿನ ತಿಂಗಳು ಆಗಸ್ಟ್ 15 ರಿಂದ ಸಕ್ರೆಬೈಲ್ ಆನೆ ಬಿಡಾರ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಮೇ 18ರಂದು ನಡೆದಿದ್ದ ಘಟನೆಯಲ್ಲಿ , ಆನೆಯ ಮೈತೊಳೆಯುವ ಸ್ಥಳದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೆ ಬಿಡಾರಗಳಲ್ಲಿ ಎಸ್ಒಪಿ ರಚನೆಗೆ ಇಲಾಖೆ ಮುಂದಾಗಿತ್ತು. ಈ ಕಾರಣಕ್ಕೆ ಎಲ್ಲ ಸಾಕಾನೆ ಶಿಬಿರಗಳನ್ನು ಮುಚ್ಚಲಾಗಿತ್ತು.
ಇದೀಗ ಎಸ್ಒಪಿ ರಚನೆಯಾಗಿದ್ದು, ಹೊಸ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಕ್ರೆಬೈಲು ಕ್ಯಾಂಪ್ನ್ನ ಸಹ ಸಜ್ಜುಗೊಳಿಸಲಾಗಿದೆಯಂತೆ. ಇನ್ನೂ ಆನೆಗಳನ್ನ ಸ್ನಾನ ಮಾಡಿಸುವ ಜಾಗಕ್ಕೆ ಜನರ ಪ್ರವೇಶ ಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಕ್ಯಾಂಪ್ನಲ್ಲಿ ರೆಡ್ ಜೋನ್ ನಿರ್ಬಂಧಿತ ಪ್ರದೇಶ, ಗ್ರೀನ್ ಜೋನ್ ಮಾತ್ರ ಜನರಿಗೆ ಮುಕ್ತವಾದ ಏರಿಯಾ ಆಗಿರಲಿದೆ. ಇದಷ್ಟೆ ಅಲ್ಲದೆ ಇನ್ನಷ್ಟು ಕಠಿನ ನಿಯಮಗಳನ್ನ ಜಾರಿಗೆ ತರಲಾಗಿದೆ ಎಂದು ಪತ್ರಿಕೆ ವರದಿಮಾಡಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
