ಶಿವಮೊಗ್ಗ |ಹೊಳೆಯಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ 15 ದಿನ ಬಳಿಕ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
65 Year Old Man Suspected Washed Away in Malathi River Near Agumbe
65 Year Old Man Suspected Washed Away in Malathi River Near Agumbe

Malathi River / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ ತಾಲ್ಲೂಕಿನ ಮಾಲತಿ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ವೃದ್ಧರೊಬ್ಬ ರ ಮೃತದೇಹ 15 ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೇಳೂರು ಗ್ರಾಮದ ರಾಮಪ್ಪ (62) ಮೃತರು. 15 ದಿನಗಳ ಹಿಂದೆ ತಮ್ಮ ತೋಟಕ್ಕೆ ನೀರಿ ಮೋಟಾರ್ ಆಫ್ ಮಾಡಲು ಹೋದ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ತೋಟದ ಸಮೀಪ ಹರಿಯುವ ಮಾಲತಿ ನದಿಯ ದಂಡೆಯ ಮೇಲೆ ರಾಮಪ್ಪ ಅವರು ಚಪ್ಪಲಿ ಹಾಗೂ ಬಟ್ಟೆ ಪತ್ತೆಯಾಗಿತ್ತು.

ತುಂಗಾ ನದಿಯ ಉಪನದಿಯಾಗಿರುವ ಮಾಲತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇದ್ದ ಕಾರಣ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ವೃದ್ಧನ ಶಮ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor