ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು, ಭದ್ರಾವತಿ ಸಿಟಿಯಲ್ಲಿ ಇವತ್ತು ಹಲವೆಡೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತಿಳಿಸಿದೆ. ನಗರ ಉಪವಿಭಾಗ, ಘಟಕ– 4ರ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇವತ್ತು ಅಂದರೆ, ಮೇ 5ರಂದು ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಹೇಳಿದೆ,

power cut today news ಎಲ್ಲೆಲ್ಲಿ ಪವರ್ ಕಟ್
ಹೊಸಮನೆ, ಎನ್.ಎಂ.ಸಿ. ರಸ್ತೆ, ಸಂತೆ ಮೈದಾನ, ಚಾನೆಲ್ ಏರಿಯಾ, ಕೇಶವಪುರ, ಶಿವಾಜಿ ವೃತ್ತ, ತಮ್ಮಣ್ಣ ಕಾಲೊನಿ, ಸುಭಾಷ್ ನಗರ, ಚನ್ನಗಿರಿ ರಸ್ತೆ, ಎಪಿಎಂಸಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಇವತ್ತು ಕರೆಂಟ್ ಇರಲ್ಲ ಎಂದು ತಿಳಿಸಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ.