ಪಿಯುಸಿ ಅಡ್ಮಿಶನ್​ಗೆ ತಂದೆ ಜೊತೆ ಹೋಗುತ್ತಿದ್ದಾಗ ಲಾರಿ ಡಿಕ್ಕಿ! ಬಾಲಕಿ ಸಾವು!

Girl dies after being hit by lorry while she was going with her father for PUC admission

ಪಿಯುಸಿ ಅಡ್ಮಿಶನ್​ಗೆ ತಂದೆ ಜೊತೆ ಹೋಗುತ್ತಿದ್ದಾಗ ಲಾರಿ ಡಿಕ್ಕಿ! ಬಾಲಕಿ ಸಾವು!

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗ/  ಪಿಯುಸಿ ಪ್ರವೇಶಕ್ಕೆಂದು ತಂದೆಯೊಂದಿಗೆ ಬೈಕ್‌ನಲ್ಲಿ ಹೋಗುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಭದ್ರಾವತಿ ತಾಲೂಕು ಅರಕೆರೆ ಗ್ರಾಮದ ಐಶ್ವರ್ಯ (16) ಮೃತರು. ಅರಕೆರೆಯಿಂದ ಶಿವಮೊಗ್ಗ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಪಿಳ್ಳಂಗೆರೆ ಪೆಟ್ರೋಲ್ ಬಂಕ್ ಸಮೀಪ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ . ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  

ಐಶ್ವರ್ಯ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು, ಆಕೆಯನ್ನ ಪಿಯುಸಿಗೆ ದಾಖಲು ಮಾಡಲು ಅವರ ತಂದೆ ಕರೆದೊಯ್ಯುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಲಾರಿಯ ಚಕ್ರವು ಬಾಲಕಿಯ ತಲೆಯ ಮೇಲಿಂದ ಹಾದು ಹೋಗಿದ್ದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಂದೆ ಜಯಪ್ರಕಾಶ್ ಅವರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bhadravati crime news/ ಕಾರಿನ ಮೇಲೆ ಉಗಿದಿದ್ದನ್ನ ಪ್ರಶ್ನಿಸಿದ್ದಕ್ಕೆ ದೊಣ್ಣೆಯಿಂದ ಹಲ್ಲೆ

ಭದ್ರಾವತಿ/  ಕಾರಿನ ಮೇಲೆ ಉಗಿದಿದ್ದನ್ನ ಪ್ರಶ್ನಿಸಿದ್ದಕ್ಕೆ , ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ (new town police bhadravati) ಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣ ಹೇಗಾಯ್ತು!? 

ಪ್ರಕಾಶ್ ಎಂಬವರು, ತಮ್ಮ ಕೆಲಸ ಮುಗಿಸಿಕೊಂಡು ಭದ್ರಾವತಿಯ ಹುತ್ತಾ ಕಾಲೋನಿಯಲ್ಲಿರುವ ತಮ್ಮ ಸ್ನೇಹಿತನನ್ನ ಮಾತನಾಡಿಸಿಕೊಂಡು ಶಿವಮೊಗ್ಗಕ್ಕೆ  ಹೊರಟಿದ್ದಾರೆ. ಈ ವೇಳೆ ಅವರ ಸಂಬಂಧಿ ನಿತಿನ್ ಎಂಬವರು , ಪ್ರಕಾಶ್​ರವರ ಕಾರಿನ ಮೇಲೆ ಉಗಿದಿದ್ದಾರೆ. ಯಾಕೆ ಉಗುಳುತ್ತೀಯಾ ಎಂದು ಪ್ರಶ್ನಿಸಿದ್ದಕ್ಕೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಎರಡು ಕುಟುಂಬಗಳ ನಡುವೆ ಆಸ್ತಿ ತಗಾದೆ ಇದ್ದು, ಸ್ನೇಹಿತನನ್ನ ನೋಡಿಕೊಂಡು ವಾಪಸ್ ಬರುವಾಗ ಹಲ್ಲೆ ಮಾಡಿದ್ಧಾರೆ ಎಂದು ದೂರಲಾಗಿದೆ. ಇನ್ನೂ ಪ್ರಕಾಶ್​ರ ಕಾರಿನಲ್ಲಿದ್ದಸ್ನೇಹಿತರು ಜಗಳ ಬಿಡಿಸಿ , ಪೆಟ್ಟು ತಿಂದು ಗಾಯಗೊಂಡಿದ್ದ ಪ್ರಕಾಶ್​ರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ಧಾರೆ. ಈ ಸಂಬಂಧ ನ್ಯೂಟೌನ್ ಪೊಲೀಸರು ಕೇಸ್ ದಾಖಲಿಸದ್ಧಾರೆ.