SHIVAMOGGA | MALENADUTODAY NEWS | Sep 5, 2024
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗ ಜಿಲ್ಲೆಯಲ್ಲಿ (shimoga live news ) ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವವರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ. ಅಷ್ಟೆಅಲ್ಲದೆ ಬ್ಯಾಡ್ ಮ್ಯಾನರ್ಸ್ ಅಥವಾ ಬ್ಯಾಡ್ ಕಾರೆಕ್ಟರ್ಸ್ ಎಂಬ ಹೊಸ ಪದವನ್ನ ಬಳಿಸಿದ್ದು ಅಂತಹವರ ವಿರುದ್ಧ ಕೇಸ್ ದಾಖಲಿಸುವುದಷ್ಟೆ ಅಲ್ಲದೆ, ಅವರ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾಗ ಇಡುವುದಕ್ಕೆ ಆರಂಭಿಸಿದ್ದಾರೆ.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ (shivamogga sp)
ಸೈಲೆಂಟ್ ಆಗಿ ಪೊಲೀಸ್ ಇಲಾಖೆ ಈ ಆಪರೇಷನ್ ಆರಂಭಿಸಿದ್ದು, ಈ ಸಂಬಂಧ ಇವತ್ತು ಎಸ್ಪಿ ಮಿಥುನ್ ಕುಮಾರ್ರವರು ಮಾಹಿತಿಯನ್ನು ನೀಡಿದ್ದಾರೆ. ಅವರು ನೀಡಿರುವಂತೆ ಇವತ್ತಿನವರೆಗೂ 644 ಮಂದಿ ಬ್ಯಾಡ್ ಕಾರೆಕ್ಟರ್ಸ್ ರನ್ನ ಗುರುತಿಸಿ ಅವರನ್ನ ಸ್ಟೇಷನ್ಗೆ ಕರೆಸಿ ವಾರ್ನ್ ಮಾಡಿ ಕೆಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಅಂತಹವರ ಪೋಷಕರನ್ನ ಕರೆದು ತಮ್ಮ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದ್ದು, ಅವರ ಚಟುವಟಿಕೆಗಳನ್ನ ಪೊಲೀಸರು ಗಮನಿಸುತ್ತಿದ್ದಾರೆ.
ಏನಿದು ಬ್ಯಾಡ್ ಕಾರೆಕ್ಟರ್ಸ್ ?
ಶಿವಮೊಗ್ಗ ನಗರವೂ (shimoga city news ) ಸೇರಿದಂತೆ ಜಿಲ್ಲೆಯ ಹಲವೆಡೆ ಏರಿಯಾಗಳಲ್ಲಿ ಕೆಲವು ಯುವಕರು ಪೊಗರಿನಿಂದ ಆಡುತ್ತಿರುತ್ತಿರುತ್ತಾರೆ. ಏರಿಯಾಗಳಲ್ಲಿ ಬೇಕಂತಲೇ ಜೋರಾಗಿ ಸೌಂಡ್ ಮಾಡಿಕೊಂಡು ಗಾಡಿ ಓಡಿಸುವುದು, ತ್ರಿಬಲ್ ರೈಡಿಂಗ್ ಮಾಡಿ ಹವಾ ಸೃಷ್ಟಿಸುವ ಪ್ರಯತ್ನ ಮಾಡುವುದು, ಸೈಲೆನ್ಸರ್ ಆಲರ್ಟ್ ಮಾಡಿಕೊಂಡು ಅನಗತ್ಯ ಕಿರಿಕಿರಿ ಕೊಡುವುದು, ವೀಲ್ಹಿಂಗ್ ಮಾಡಿ ಹೆದರಿಸುವುದು, ಸಣ್ಣಪುಟ್ಟ ಗಲ್ಲಿಗಳಲ್ಲಿ ಹಿರಿಯರನ್ನ ಗೌರವಿಸಿದೇ ಕಿರಿಕ್ ಮಾಡುವುದು ಹೀಗೆ ಏರಿಯಾಗಳಲ್ಲಿ ಬೇಕಂತಲೇ ತಮ್ಮ ವರ್ತನೆಗಳ ಮೂಲಕ ನ್ಯೂಸೆನ್ಸ್ ಮಾಡುವವರನ್ನ ಪೊಲೀಸ್ ಇಲಾಖೆ ಬ್ಯಾಡ್ ಕಾರೆಕ್ಟರ್ಸ್ ಎಂದು ಗುರುತಿಸಿದೆ. ಅಂತವರಿಗೆ ಪೊಲೀಸ್ ಇಲಾಖೆ (shimoga police contect ) ಬ್ಯಾಡ್ ಮ್ಯಾನರ್ಸ್ ಸ್ಟೈಲ್ನಲ್ಲಿ ಉತ್ತರ ನೀಡುತ್ತಿದೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ