bhadravati / ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ

Bhadravathi Assembly Constituency Who is crucial? How is the competition in the field

bhadravati /  ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ

KARNATAKA NEWS/ ONLINE / Malenadu today/ May 7, 2023 GOOGLE NEWS

ಭದ್ರಾವತಿ/ ಶಿವಮೊಗ್ಗಭದ್ರಾವತಿ ವಿಧಾನಸಭಾ ಕ್ಷೇತ್ರ ದಲ್ಲಿ ಈ ಸಲ ಯಾರ ಪರ ಅಲೆಯಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಹಾಗಾಗಿ ಬಿರುಸಿನ ಪೈಪೋಟಿ ಸ್ಪರ್ಧಿಗಳ ನಡುವೆ ನಡೆಯುತ್ತಿದೆ. ವ್ಯಕ್ತಿಗತ ಪ್ರತಿಷ್ಟೆ ಚುನಾವಣೆಯು ನಡೆಯುತ್ತಿದ್ದ ಕ್ಷೇತ್ರದಲ್ಲಿ ಈ ಸಲ ಶಾರದಾ ಅಪ್ಪಾಜಿಯವರ ಸ್ಪರ್ಧೆ ಮುಖ್ಯವಾಗಿ ಕಂಡು ಬರುತ್ತಿದೆ. ಇನ್ನೂ ಬಿಕೆ ಸಂಗಮೇಶ್ ತಮ್ಮೆಲ್ಲಾ ಅನುಭವವನ್ನು ಚುನಾವಣೆಗೆ ದಾರೆಯೆರಿಯುತ್ತಿದ್ದಾರೆ. 

ಭದ್ರಾವತಿ ವಿಧಾನಸಭಾ ಕ್ಷೇತ್ರ

  1. ಪುರುಷ ಮತದಾರರು 102236

  2. ಮಹಿಳಾ ಮತದಾರರು-107971

  3. ಒಟ್ಟು ಮತದಾರರು-210212

ಜಾತಿ ಲೆಕ್ಕಾಚಾರ

ಬೋವಿ(ಎಸ್ಸಿ)-1700,ಬಂಜಾರ-11000, ಕ್ರಿಶ್ವಿಯನ್ (ಕನ್ ವರ್ಟೆಡ್) 7000, ಇತರೆ ಎಸ್ಸಿ 13,000, ವಾಲ್ಮಿಕಿ ಮತ್ತು ಇತರೆ ಎಸ್ಟಿ -4000, ಒಕ್ಕಲಿಗ-36000, ಮುಸ್ಲಿಂ-33,000, ತಮೀಳ್- 30,000, ಲಿಂಗಾಯಿತ- 19,000, ಮರಾಠಿ-13,500, ಕುರುಬ-8000, ಈಡಿಗ-2200, ಇತರೆ- 15,25, ಕ್ಷೇತ್ರದಲ್ಲಿ ಒಕ್ಕಲಿಗರು ಹಾಗು ಲಿಂಗಾಯಿತರು ತಮಿಳರು ಹೆಚ್ಚುಕಮ್ಮಿ ಸಮಬಲದಲ್ಲಿದ್ದಾರೆ.ಅಂತಿಮವಾಗಿ ಮುಸ್ಲಿಂ ಮತಗಳು ನಿರ್ಣಾಯಕ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಭದ್ರಾವತಿ ವಾತವರಣ

ಶಿವಮೊಗ್ಗ ಜಿಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಭದ್ರಾವತಿ ಕ್ಷೇತ್ರ..ಅತ್ಯಂತ ಭಿನ್ನವಾಗಿದೆ.ಇಲ್ಲಿ ಪಕ್ಷಕ್ಕಿಂತಲೂ  ವ್ಯಕ್ತಿಗೆ ಹೆಚ್ಚಿನ ಮಾನ್ಯತೆ ನೀಡಿದ್ದಾರೆ ಕ್ಷೇತ್ರದ ಮತದಾರರು.ದಶಕಗಳಿಂದಲೂ ರಾಜಕೀಯ ಎದುರಾಳಿಗಳಾಗಿ  ಇದ್ದಾರೆ..

ಕಾಂಗ್ರೇಸ್ ನ ಹಾಲಿ ಶಾಸಕ ಬಿ.ಕೆ ಸಂಗಮೇಶ್ ಮತ್ತು ಜೆಡಿಎಸ್ ಮಾಜಿ ಶಾಸಕ ಎಂ.ಜೆ ಅಪ್ಪಾಜಿಗೌಡ.ಕ್ಷೇತ್ರವನ್ನು ಇವರಿಬ್ಬರೂ ದಶಕಗಳಿಂದಲೂ ರಾಜಕಾರಣವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುತ್ತಾ ಬಂದಿದ್ದಾರೆ.

ಶಿವಮೊಗ್ಗ ಜಿಲ್ಲೆ ಬಿಜೆಪಿ ಶಕ್ತಿಕೇಂದ್ರವಾಗಿದ್ದರೂ,ಭದ್ರಾವತಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ.ಇದಕ್ಕೆ ಕಾರಣ ಮತ್ತದೆ ಅಪ್ಪಾಜಿ ಮತ್ತು ಸಂಗಮೇಶ್.  

ಈಗ ಅಪ್ಪಾಜಿ ಗೌಡರಿಲ್ಲ. ಕೊರೊನಾ ದಿಂದ ಸಾವನ್ನಪ್ಪಿದ ಅಪ್ಪಾಜಿ ಗೌಡರ ಸ್ಥಾನವನ್ನು  ಪತ್ನಿ ಶಾರದ ಅಪ್ಪಾಜಿ ತುಂಬಿದ್ದಾರೆ. ಅಪ್ಪಾಜಿಗೌಡರಿಲ್ಲದ ಮೊದಲ ಚುನಾವಣೆ ಭದ್ರಾವತಿ ಕ್ಷೇತ್ರದಲ್ಲಿ ನಡೆಯುತ್ತಿದೆ.

ಹಾಲಿ ಕಣದಲ್ಲಿರುವ ಸ್ಪರ್ಧಿಗಳು

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಎಷ್ಟು ಜನ ಕಣದಲ್ಲಿದ್ದಾರೆ

ಭದ್ರಾವತಿ-112 ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್, ಐಎನ್‍ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ)ಶಶಿಕುಮಾರ್ ಬಿ.ಕೆ, ಜನತಾದಳ(ಎಸ್) ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ, ಕಣದಲ್ಲಿದ್ದಾರೆ.

2018 ರ ಚುನಾವಣೆಯಲ್ಲಿ ಏನಾಗಿತ್ತು

2018 ರ ಚುನಾವಣೆಯಲ್ಲಿ ಕಾಂಗ್ರೇಸ್ ನ ಬಿ.ಕೆ ಸಂಗಮೇಶ್ವರ ಅಪ್ಪಾಜಿಗೌಡರ ಎದುರು ಗೆಲುವನ್ನು ಕಂಡಿದ್ದರು. ಸಂಗಮೇಶ್ವರ 75722 ಮತಗಳನ್ನು ಪಡೆದರೆ ಜೆಡಿಎಸ್ ನ ಅಪ್ಪಾಜಿ ಗೌಡರು 64155 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

ಯಾರಿಗೆ ಪ್ಲಸ್ ಯಾರಿಗೆ ಮೈನಸ್ 

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಬಿ.ಕೆ ಸಂಗಮೇಶ್ ಮತಯಾಚನೆ ಮಾಡುತ್ತಿದ್ದಾರೆ. ತಾವು ಮಾಡಿದ ಕಾರ್ಯಗಳ ಪುಸ್ತಕವನ್ನೇ ಮತದಾರರಿಗೆ ಹಂಚುತ್ತಿದ್ದಾರೆ. ತಾವು ಗೆದ್ದರೆ ಮಂತ್ರಿಯಾಗುತ್ತೇನೆ. ಭದ್ರಾವತಿ ಎಂಪಿಎಂ ಕಾರ್ಖಾನೆಯನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳುತ್ತಾ ಮತಬೇಟೆಗೆ ನಿಂತಿದ್ದಾರೆ. ಇದು ವರವಾಗಬಹುದು. ಇಲ್ಲ ಇವರ ಐದು ವರ್ಷಗಳ ಅಧಿಕಾರಲ್ಲಿನ ವಿರಸಗಳು ಮುಳುವಾಗಬಹುದು. 

ಇನ್ನು ಅಪ್ಪಾಜಿಗೌಡರ ಸಾವಿನ ಅನುಕಂಪದಲ್ಲಿಯೇ ಸೆರುಗು ಒಡ್ಡಿ ಮತ ಕೇಳುತ್ತಿರುವ ಶಾದರ ಅಪ್ಪಾಜಿಯವರಿಗೆ ಭದ್ರಾವತಿ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ಒಲವು ತೋರುತ್ತಿದ್ದಾರೆ. ಇದು ಶಾರದ ಅಪ್ಪಾಜಿಯವರಿಗೆ ವರವಾಗಬಹುದು ಅಥವಾ ಜನರ ಅನುಕಂಪ ಸಿಗದೇ ಹೋದರೆ  ಸೋಲಿಗೂ ಕಾರಣವಾಗಬಹುದು.





ಸೊರಬ /ಶಿವಮೊಗ್ಗ/ಅನಾರೋಗ್ಯದವೆಂದು ಚುನಾವಣಾ ಕಾರ್ಯದಿಂದ ದೂರವುಳಿಯಲು ಯತ್ನಿಸಿದ ಹಾಗೂ ಸುಳ್ಳು ಪ್ರಮಾಣ ಪತ್ರ ನೀಡಿದ ಆರೋಪದಲ್ಲಿ  ಇಂಡುವಳ್ಳಿ ಪಿಡಿಒ ಉಮೇಶ್ ಡಿ. ಗೌಡ‌ರನ್ನ ಅಮಾನತ್ತು ಮಾಡಲಾಗಿದೆ.  ಈ ಸಂಬಂಧ ಜಿಲ್ಲಾ ಪಂಚಾಯತ್ ಸಿಇಒ ಆದೇಶವನ್ನು ಮಾಡಿದ್ದಾರೆ. 

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

ಏನಿದು ಪ್ರಕರಣ

ಇಂಡುವಳ್ಳಿ ಪಿಡಿಒ, ಶಾಸಕ ಕುಮಾರ ಬಂಗಾರಪ್ಪ ಅವರ ಮಾಜಿ ಆಪ್ತ ಸಹಾಯಕ ಉಮೇಶ್ ಡಿ.ಗೌಡರ್‌ ಅವರನ್ನು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಅಮಾನತು ಮಾಡಿದ್ದಾರೆ.  ಇದಕ್ಕೂ ಮೊದಲು ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಉಮೇಶ್​,  ಅನಾರೋಗ್ಯದ ಕಾರಣ ರಜೆ ಪಡೆದಿದ್ದೇನೆ  ಎಂದು ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಏ.20ರಂದು  ಉತ್ತರಿಸಿದ್ದರು.

ಪ್ರಮಾಣಪತ್ರದ ಬಗ್ಗೆ ಬಂದಿತ್ತು ಅನುಮಾನ

ಉಮೇಶ್ ಸಲ್ಲಿಸಿದ್ದ ಪ್ರಮಾಣ ಪತ್ರದ ನೈಜತೆ ಬಗ್ಗೆ ಪರಿಶೀಲಿಸುವಂತೆ ಮೆಗ್ಗಾನ್ ಅಸ್ಪತ್ರೆ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್‌ ಅವರಿಗೆ ಜಿಪಂ ಸಿಇಒ ಸೂಚನೆ ನೀಡಿದ್ದರು. ಮೆಗ್ಗಾನ್ ಆಸ್ಪತ್ರೆ ಕೀಲು ಮತ್ತು ಮೂಲೆ ತಜ್ಞ ಡಾ.ಲೋಹಿತ್ ಕುಮಾರ್, ಉಮೇಶ್ ಆರೋಗ್ಯ ಪರೀಕ್ಷಿಸಿ ಅವರಿಗೆ ಕೀಲು ಮತ್ತು ಮೂಳೆ ಸಂಬಂಧಿತ ಯಾವುದೇ ಸಮಸ್ಯೆಗಳಿಲ್ಲ ಎಂದು ವರದಿ ನೀಡಿದ್ದರು. ಆಗ ಕೂಡಲೇ ಕೆಲಸಕ್ಕೆ  ಹಾಜರಾಗುವಂತೆ ಸೂಚಿಸಲಾಗಿತ್ತು. 

ವಿಜಯೇಂದ್ರ ವಿಜಯಕ್ಕೆ ಹೊರಗಿನಿಂದ ಬಂದಿದ್ಧಾರೆ ಸಾವಿರಾರು ಜನ/ ಶಿಕಾರಿಪುರದಲ್ಲಿ ಸ್ವಾಭಿಮಾನದ ಸವಾಲು! ಸಂವಾದದಲ್ಲಿ  ನಾಗರಾಜ್ ಗೌಡ ಹೇಳಿದ್ದೇನು? 

ಈ ನಡುವೆ ಕಳೆದ ಏ.25ರಂದು `ಉಮೇಶ್' ಪತ್ನಿ ಸೊರಬ ತಾಪಂ ಇಒಗೆ ಪತ್ರ ಬರೆದು ನನ್ನ ಪತಿಯನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಎರಡು ಕೈಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರು ಗುಣಮುಖರಾದ ಬಳಿಕ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದರು. 

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಎರಡನೇ ಸಲವು ತಪ್ಪು ಮಾಹಿತಿ ದೃಢ

ಆದರೆ 'ಉಮೇಶ್ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಮತ್ತೊಂದು ದೂರು ದಾಖಲಾಗಿತ್ತು. ಈ  ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಸಿಮ್ಸ್‌ನಲ್ಲಿ ಅವರ ಆರೋಗ್ಯ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಅವರು ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.



Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media