ಬಿ.ಹೆಚ್​. ರಸ್ತೆಯಲ್ಲಿ ಸರ್​ಎಂವಿ ಮೂರ್ತಿಗೆ ಹೊಸ ಕಳೆ! ಗಮನ ಸೆಳೆಯಲಿದೆ ವೀರಭದ್ರೇಶ್ವರ ಥಿಯೇಟರ್ ಬಳಿಯ ಸರ್ಕಲ್​

ಹಂಚಿಕೊಳ್ಳಿ
WhatsApp Facebook X Telegram
static art installation inaugurated B H Road
static art installation inaugurated B H Road

B H Road ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ಬಿ.ಎಚ್. ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಹಿಂಭಾಗದಲ್ಲಿ ಹೊಸದೊಂದು ಕಲಾಕೃತಿಯನ್ನು ನಿರ್ಮಾಣಮಾಡಲಾಗಿದೆ. ನಿನ್ನೆ ಈ ಕಲಾ ಚಿತ್ರಣವನ್ನು ಉದ್ಘಾಟಿಸಲಾಗಿದೆ.

ಈ ವೇಳೆ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ. ಶಿವಮೊಗ್ಗ ನಗರವನ್ನು ಉದ್ಯಾನ ನಗರಿಯನ್ನಾಗಿ ರೂಪಿಸುವು ಗುರಿಯಿದೆ ಎಂದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಹಿಂಭಾಗದಲ್ಲಿ ಶಾಸಕರ ವಿಶೇಷ ಅನುದಾನದಡಿ ಈ ಆರ್ಟ್​ ನಿರ್ಮಾಣಭ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸರ್ಕಲ್​ ಹಾಗೂ ರಸ್ತೆಗಳ ಬದಿಗಳಲ್ಲಿ ವಿನೂತನ ಕಲಾಕೃತಿಗಳನ್ನ ನಿರ್ಮಿಸುವ ಇರಾದೆ, ಈ ಮೂಲಕ ಕಲಾತ್ಮಕವಾಗಿ ನಗರವನ್ನು ನವೀಕರಿಸುವ ಯೋಜನೆ ಹೊಂದಲಾಗಿದೆ ಎಂದರ. ಅಲ್ಲದೆ ಕಲಾಕೃತಿಯ ಸುತ್ತಮುತ್ತಲಿನ ಜಾಗದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ರಾತ್ರಿ ವೇಳೆ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ನಗರದ ಸೌಂದರ್ಯ ಹೆಚ್ಚಿಸಲು ಇನ್ನಷ್ಟು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಶಿಲ್ಪಿ ಜೀವನ್, ಪ್ರಮುಖರಾದ ಎಂ.ಜಿ. ಹರಿಕೃಷ್ಣ ಜ್ಞಾನೇಶ್ವರ್ ಇತರರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor